ಅಮೃತಪುರಿ ಆಶ್ರಮವಾಸಿಗಳನ್ನು ಉದ್ದೇಶಿಸಿ ಗೇಲ್ ಟ್ರೆಡ್ವೆಲ್ ಬರೆದ ಪತ್ರ

ಅಮ್ಮನನ್ನು ಬಿಟ್ಟುಹೋದ ಒಂದು ತಿಂಗಳ ನಂತರ (ಡಿಸೆಂಬರ್ ೧೮, ೧೯೯೯) ಗೇಲ್ ಟ್ರೆಡ್ವೆಲ್ (ಸ್ವಾಮಿನಿ ಅಮೃತಪ್ರಾಣ – ಗಾಯತ್ರಿ) ಅಮೃತಪುರಿಯ ನಿವಾಸಿಗಳಿಗೆ ಬರೆದ ಪತ್ರವನ್ನು ನಿಮ್ಮೊಂದಿಗೆ ಇಲ್ಲಿ ಹಂಚಿಕೊಳ್ಳಬಯಸುತ್ತೇವೆ.

ಡಿಸೆಂಬರ್ ೧೮, ೧೯೯೯

ಅಮೃತಪುರಿಯ ನನ್ನ ಪ್ರೀತಿಯ ಕುಟುಂಬ ವರ್ಗದವರೆ,
ನಾನು ಹೋದ ಕಾರಣದಿಂದ ಯಾರಿಗೂ ಗೊಂದಲವಾಗಬಾರದು, ಯಾರೂ ಹತಾಶರಾಗಬಾರದು. ಪ್ರತಿಯೊಬ್ಬರಿಗೂ ತಮ್ಮದೇ ಆದ ಜೀವನವೂ ತಮ್ಮದೇ ಆದ ಮಾರ್ಗವೂ ಇರುತ್ತದೆ. ಅಮ್ಮನೊಂದಿಗಿನ ನನ್ನ ಮಾರ್ಗ ನನಗೂ ಸೇರಿದಂತೆ ಯಾರಿಗೂ ಅರ್ಥವಾಗದಷ್ಟು ಅನನ್ಯ. ಈ ಒಂದು ಘಟ್ಟದಲ್ಲಿ ನನಗೆ ಮನಃಶಾಂತಿ ದೊರಕಲು ಸಾಕಷ್ಟು ದೀರ್ಘಕಾಲದ ರಿಟ್ರೀಟ್ ಅವಶ್ಯಕವೆಂದು ತೋರುತ್ತದೆ. ನಾನು ಎಂದಿಗೂ ಬಾರದಂತೆ ಹೋಗಿಬಿಟ್ಟೆ ಎನ್ನಲಾರೆ. ನನಗೆ ಶಾಂತಿ ಸಿಗಲು ಮತ್ತೆ ಸ್ಪಷ್ಟತೆ ಬರಲು ಸ್ವಲ್ಪ ಸಮಯ ಬೇಕು ಎಂದು ಮಾತ್ರ ಹೇಳಬಲ್ಲೆ.

ಅಮ್ಮನ ಮೇಲಿನ ಪ್ರೇಮ ಮತ್ತು ವಿಶ್ವಾಸವನ್ನು ಎಲ್ಲರೂ ಉಳಿಸಿಕೊಳ್ಳಬೇಕು. ಒಬ್ಬ ಸಾಧಕನ ಜೀವನ ಇನ್ನೊಬ್ಬ ವ್ಯಕ್ತಿಯ ನಿರ್ಣಯದಿಂದಾಗಿ ಬದಲಾಗಬಾರದು. ಎಲ್ಲಾ ಆಧ್ಯಾತ್ಮಿಕ ಸಂಸ್ಥೆಗಳಲ್ಲೂ, ಯಾರಾದರೂ ಅನಿರೀಕ್ಷಿತವಾದ ಏನನ್ನಾದರೂ ಮಾಡಿದಾಗ, ಅದು ಆ ಸಮೂಹದೊಳಗೆ ತರಂಗಗಳನ್ನು ಉಂಟುಮಾಡುತ್ತದೆ. ಈ ತರಂಗಗಳು ಭಯವನ್ನೋ ಭೀತಿಯನ್ನೋ ಉಂಟುಮಾಡಬಹುದು, ನಂಬಿಕೆಯನ್ನು ಅಲ್ಲಾಡಿಸಲೂ ಬಹುದು. ಸಮಯ ಚೆನ್ನಾಗಿಲ್ಲದಿದ್ದಾಗ -ಈಗಿರುವ ಹಾಗೆ- ಅನೇಕ ಊಹಾಪೂಹಗಳು ಹಾರಾಡುತ್ತವೆ. ಈಗಲೂ ಅಂಥ ಊಹಾಪೂಹಗಳು ಹಾರಾಡುತ್ತಿವೆ ಎಂದು ನನಗೆ ಕೇಳಿಬಂದಿದೆ. ಆದರೆ ಅವು ನನ್ನಿಂದಾಗಿ ಅಲ್ಲ ಎಂದು ನಿಮಗೆ ಸ್ಪಷ್ಟವಾಗಿ ತಿಳಿಸುವೆ. ಅತ್ತಿತ್ತ ನೋಡದಂತೆ ಕಣ್ಣಿಗೆ ಮರೆ ಹಾಕಿರುವ ಕುದುರೆಯಂತೆ ನೀವಿರಬೇಕು ಎಂದು ನಾನು ದೃಢವಾಗಿ ಉಪದೇಶಿಸಬಯಸುತ್ತೇನೆ. ಎಡಕ್ಕಾಗಲೀ ಬಲಕ್ಕಾಗಲೀ ನೋಡದಂತೆ ಗುರಿಯನ್ನು ಮುಂದಿಟ್ಟುಕೊಂಡು, ಅದರ ಮೇಲೆ ನಿಮ್ಮ ದೃಷ್ಟಿ ನೆಡಿರಿ.

ಅಮ್ಮ ಒಮ್ಮೆ ,ನಮ್ಮ ಒಬ್ಬ ಸೋದರನಿಗೆ ಹೇಳಿದ್ದಂತೆ, “ಸಾಧನಾ ಪಥ ಎಂದು ಏನೇನನ್ನು ಅಂದುಕೊಂಡಿರುವೆಯೋ ಅದೆಲ್ಲವೂ ವಿಪರೀತವಾಗಿ ತೋರುತ್ತವೆ. ಆಶ್ರಮ ಎಂದರೆ ನೀನು ಏನು ಎಂದುಕೊಂಡಿರುವೆಯೋ ಅದೆಲ್ಲವೂ ವಿಪರೀತವಾಗಿ ತೋರುತ್ತವೆ. ಕಡೆಗೆ, ಗುರು ಎಂದರೆ ಏನು ಎಂದುಕೊಂಡಿರುತ್ತೀಯೋ ಅದೂ ವಿಪರೀತವಾಗಿ ತೋರುತ್ತದೆ.”

ಆದ್ದರಿಂದ ಆಶ್ರಮದಲ್ಲಿ ಈಗ ಕೇಳಿಬರುತ್ತಿರುವ ಯಾವ ಊಹಾಪೋಹಗಳೂ ಮನಸ್ಸನ್ನು ವಿಚಲಿತವಾಗಲು ಬಿಡದಿರಿ ಎಂದು ನಿಮ್ಮನ್ನು ಕೇಳಿಕೊಳ್ಳುತ್ತೇನೆ. ನಿಮ್ಮ ಗುರಿಗೆ ನೀವು ಬದ್ಧರಾಗಿರಿ, ಧೈರ್ಯದಿಂದ ಇರಿ.

ಜನರು ನನ್ನ ಬಗ್ಗೆ ಏನು ಹೇಳುತ್ತಾರೆ, ನನ್ನ ಬಗ್ಗೆ ಏನೆಂದುಕೊಳ್ಳುತ್ತಾರೆ ಎನ್ನುವುದರ ಮೇಲೆ ನನ್ನ ನಿಯಂತ್ರಣ ಇಲ್ಲ ಎಂದು ನನಗೆ ನಾನೇ ನೆನಪಿಸಿಕೊಳ್ಳುತ್ತಿರುತ್ತೇನೆ. ನನ್ನ ಹೃದಯದಲ್ಲಿ ಸರಿ ಎಂದು ತೋರುವುದನ್ನು ಮಾತ್ರವೇ ಮಾಡಲು ನಾನು ಪ್ರಯತ್ನಿಸುವೆ.

ಅಮೃತಪ್ರಾಣ

Source: A Letter from Gail Tredwell to Amritapuri Ashram Residents — Dec 18, 1999

“ಬ್ರಾಂಟೆ ಬಾಕ್ಸರ್” ಎಂಬ ಗೇಲ್ ಟ್ರೆಡ್ವೆಲ್ ಳ ಬೆಂಬಲಿಗಳು ಮತ್ತು ಅವಳ ವ್ಯಕ್ತಿತ್ವ.

ಗೇಲ್ ಟ್ರೆಡ್ವೆಲ್ ಳ “ಹೋಲಿ ಹೆಲ್” ಪುಸ್ತಕದ ಎಡಿಟಿಂಗ್ ಅನ್ನು (ಸಂಪಾದಕೀಯ ಅಗ್ರಲೇಖನವನ್ನು) ಒಬ್ಬ ಪ್ರೊಫೆಷನಲ್ ಗೋಸ್ಟ್ ರೈಟರ್ ಮತ್ತು ಎಡಿಟರ್, “ಜೆಸ್ಸಿ ಹಾಫ್ ಮನ್” ಉರ್ಫ್ “ಬ್ರಾಂಟೆ ಬಾಕ್ಸರ್”ಎಂಬಾಕೆ ಮಾಡಿದ್ದಾಳೆ ಎಂದು ತಿಳಿದಿದೆ. ಬ್ರಾಂಟೆ ಬಾಕ್ಸರ್ ಹೆಸರಿನಲ್ಲಿ ಈ ಹಾಫ್ ಮನ್, ಗೇಲ್ ಳ ಪುಸ್ತಕವನ್ನೂ ಮತ್ತು ಅವಳ ಅಜೆಂಡಾವನ್ನೂ (ಕಾರ್ಯಪ್ರಣಾಲಿಯನ್ನು) ಸಾಕಷ್ಟು ಪ್ರೊತ್ಸಾಹಿಸುತ್ತಿದ್ದಾಳೆ. ಆದರೆ ಇದರಲ್ಲಿ ಹಾಫ್ ಮನ್ ಅಜೆಂಡಾ ಏನಿರಬಹುದು? ಎಂದು ನೋಡೋಣ. “ಮೈಂಡ್ ಬ್ಲಾಗ್” ನಲ್ಲಿ ಅವಳೇ ನೀಡಿರುವ ಸ್ಪ್ಲಿಂಟರ್ ಪ್ರಕಾರ, ಹಿಂದೂ ದೇವ ದೇವಿಯರೆಲ್ಲಾ ಯಾವುದೋ ಲೋಕದ ಏಲಿಯನ್ ಜೀವಿಗಳು; ಅಮ್ಮ ಈ ಏಲಿಯನ್ ಜೀವಿಗಳೊಂದಿಗೂ ಮತ್ತೂ “ಸಂಯುಕ್ತ ರಾಷ್ಟ್ರಗಳ ಒಕ್ಕೂಟ” ದೊಂದಿಗೂ ಕೆಲಸ ಮಾಡಿ, ಎಲ್ಲ ಮನುಷ್ಯರನ್ನು ನುಂಗಿ ಈ ಪ್ರಪಂಚವನ್ನು ತನ್ನದಾಗಿಸಿಕೊಳ್ಳಲು ಕಾದಿರುವ ಬಹುಶಕ್ತವಾದ ಆಸುರೀಶಕ್ತಿ ಎಂದು ಹಾಫ್ ಮನ್ ನಂಬಿಕೆ. ಇಂಥ ವಿಚಿತ್ರ ನಂಬಿಕೆಯಿಂದಾಗಿ ಹಾಫ್ಮನ್ ಅಮ್ಮನ ಕೀರ್ತಿಯನ್ನು ಕೆಡಿಸಲು ಉತ್ತೇಜಿತಳಾಗಿರಬಹುದು. (ಇವಳು “ಸಂಯುಕ್ತ ರಾಷ್ಟ್ರಗಳ ಒಕ್ಕೂಟ”ದೊಂದಿಗೂ ಸದಾ ಕಾದಾಡುತ್ತಿರುತ್ತಾಳೆ. ಮೈಕ್ರೋಚಿಪ್ ಇಮ್ ಪ್ಲಾಂಟ್ ಮಾಡಿಸಿಕೊಳ್ಳಲು ನಿರಾಕರಿಸುತ್ತಿದ್ದಾಳೆ.)

ಇನ್ನಷ್ಟು ಅರಿಯಲು ಈ ಬ್ಲಾಗ್ ನೋಡಿ: http://gail-tredwell-jessi-hoffman-holy-hell.blogspot.com

Source: The Bizarre Fringe Agenda and Hidden Identity of Leading Gail Tredwell Supporter Bronte Baxter

ಗೀತಾ ಕುಮಾರ್ , ಆಶ್ರಮವಾಸಿ ಮತ್ತು ಬಹುಕಾಲದ ಭಕ್ತೆ

ಗೇಲ್ ಟ್ರೆಡ್ವೆಲ್ ಳ ಇತ್ತೀಚಿನ ಪುಸ್ತಕ, ಮತ್ತು ಆ ಪುಸ್ತಕದಿಂದಾಗಿ ಇಂಟರ್ನೆಟ್ ನಲ್ಲಿ ಹರಡುತ್ತಿರುವ ಆಪಾದನೆಗಳ ತಪ್ಪು ಮಾಹಿತಿಗಳಿಗೆ ಸ್ಪಂದಿಸುತ್ತಾ ನಾನಿಲ್ಲಿ ಕೆಲವು ಮುಖ್ಯ ವಿಷಯಗಳ ಬಗ್ಗೆ ಸ್ಪಷ್ಟೀಕರಣ ನೀಡಬಯಸುವೆ. ಇಲ್ಲದಿದ್ದಲ್ಲಿ ನಿಜವು ಅಜ್ಞಾತವಾಗಿಯೇ ಉಳಿದುಬಿಡುತ್ತವೆ. ಸತ್ಯವೆಂದರೆ ಗೇಲ್ ಕೆಲವು ಬಹುಮುಖ್ಯವಾದ ಘಟನೆಗಳನ್ನು ಅವಳ ಪುಸ್ತಕದಲ್ಲಿ ದಾಖಲಿಸದಿದ್ದ ಕಾರಣ ಅವಳ ಮಾಹಿತಿಗಳು ಎಷ್ಟರಮಟ್ಟಿಗೆ ವಿಶ್ವಾಸಾರ್ಹತೆಗೆ ಯೋಗ್ಯವಾದುದು ಎಂಬ ಗಂಭೀರ ಪ್ರಶ್ನೆಗೆ ಎಡೆಯಾಗಿದೆ.

“ಆಶ್ರಮಕ್ಕೆ ಬಂದಿದ್ದು,ಅಲ್ಲಿ ಉಳಿದಿದ್ದು ಮತ್ತು ತಾನು ನಿರ್ವಹಿಸುವೆನೆಂದು ಪಾತ್ರ ಆರಿಸಿಕೊಂಡಿದ್ದು – ಎಲ್ಲವೂ ಅವಳದೇ ಸ್ವಂತ ನಿರ್ಧಾರವಾಗಿತ್ತು.”

ಅವಳು ಆಶ್ರಮದಲ್ಲಿ ವ್ಯಯಿಸಿದ ಕಾಲಕ್ಕೆ ಪರಿಹಾರವೇ ಸಿಗಲಿಲ್ಲ ಎಂದು ಗೇಲ್ ಹೇಳಿಕೊಳ್ಳುತ್ತಾಳೆ; ಆದರೆ ಈ ಮಾರ್ಗದಲ್ಲಿ ಸಾಗಬೇಕು ಎಂದು ಆರಿಸಿಕೊಂಡಿದ್ದು ತಾನೇ ಎಂಬ ವಿಷಯವನ್ನೇ ಮರೆತಂತಿದೆ. ಅವಳನ್ನು ಯಾರೂ ಕರೆಯಲಿಲ್ಲ, ಯಾರೂ ಅವಳಿಗೆ ಬ್ರೇನ್ ವಾಶ್ ಮಾಡಿ, ಆಶ್ರಮದಲ್ಲಿ ಇರಲು ಬಲವಂತ ಪಡಿಸಲಿಲ್ಲ. ಆಶ್ರಮಕ್ಕೆ ಬಂದಿದ್ದು,ಅಲ್ಲಿ ಉಳಿದಿದ್ದು ಮತ್ತು ತಾನು ನಿರ್ವಹಿಸುವೆನೆಂದು ಪಾತ್ರ ಆರಿಸಿಕೊಂಡಿದ್ದು – ಎಲ್ಲವೂ ಅವಳದೇ ಸ್ವಂತ ನಿರ್ಧಾರವಾಗಿತ್ತು. ಅವಳದೇ ಮಾತಿನಲ್ಲಿ ಹೇಳುವುದಾದರೆ, “ಸ್ತ್ರಿ ರೂಪದಲ್ಲಿರುವ ಅಮ್ಮನಂಥ ಗುರುವಿನ ಸೇವೆ ಮಾಡಬೇಕು ಎನ್ನುವುದು ನನ್ನ ಹೃದಯದ ಬಯಕೆಯಾಗಿತ್ತು ” ಎಂದಿದ್ದಾಳೆ. ಗೇಲ್ ತನ್ನನ್ನು ತಾನೇ ಒಬ್ಬ ಸಾಧಕಿ ಎಂದು ಕರೆದುಕೊಳ್ಳುತ್ತಾಳೆ. ಈಗಲು ಸಹ “ತಾನು ಭಕ್ತಿಯ ಮಾರ್ಗದಲ್ಲಿ ಬೆಳುಕು ಹರಿಸುತ್ತಿರುವೆ” ಎಂದು ಸಾರಿಕೊಳ್ಳುತ್ತಾಳೆ. ಅಮ್ಮನ ಜೊತೆಗಿನ ಅವಳ ಜೀವನದ ಎಲ್ಲಾ ವಿವರಗಳ ಹಾಗೇ ಆಶ್ರಮವನ್ನು ತೊರೆದು ಹೋದದ್ದೂ ತನ್ನದೇ ಸ್ವಂತ ನಿರ್ಧಾರದಿಂದಾಗಿ.

ತಾನು ಆಶ್ರಮದಿಂದ ಒಬ್ಬ “ಭ್ರಷ್ಟಳಂತೆ” ತಪ್ಪಿಸಿಕೊಂಡು ಹೋಗಬೇಕಾಯಿತು ಎಂದು ಗೇಲ್ ಬರೆದುಕೊಂಡಿದ್ದಾಳೆ. ತನ್ನ ಬಳಿ ಆಗ ಸಂರಕ್ಷಣೆಯಾಗಿ ಏನೇನೂ ಇರಲಿಲ್ಲ ಎನ್ನುತ್ತಾಳೆ. ಆದರೂ, ಅವಳದೇ ಮಾತಿನಲ್ಲಿ ನೋಡಿ, “ಕಂಪ್ಯೂಟರ್ ಕೇಸಿನ ಲೈನಿಂಗಿನ ಒಳಗೆ ಒಂದಷ್ಟು ಹಣ ಸಮಯಕ್ಕೆ ಒದಗಲಿ ಎಂದು ಇಟ್ಟುಕೊಂಡಿದ್ದೆ”, ಎನ್ನುತ್ತಾಳೆ. ಎಷ್ಟು ಹಣ ತೆಗೆದುಕೊಂಡು ಹೋದಳು ಎಂದು ಬರೆಯುವುದನ್ನು ಅವಳು ಆರಾಮವಾಗಿ ಮರೆತಿರುವುದು ನನಗೆ ಕುತೂಹಲಕಾರಿ ಎನಿಸಿದೆ.

“ನಿಜವೇನೆಂದರೆ, ಅವಳು ಆಶ್ರಮವನ್ನು ಬಿಟ್ಟುಹೋದಮೇಲೂ, ಅಮ್ಮನ ಭಕ್ತರು ಅವಳನ್ನು ಪ್ರೇಮದಿಂದ ಚೆನ್ನಾಗಿ ನೋಡಿಕೊಂಡಿದ್ದಾರೆ.”

ವಾಸ್ತವದಲ್ಲಿ, ಇನ್ನೊಂದು ಅತಿಮುಖ್ಯವಾದ ವಿಷಯವನ್ನು ತನ್ನ ಪುಸ್ತಕದಲ್ಲಿ ಬಿಟ್ಟೇಬಿಟ್ಟಿದ್ದಾಳೆ. ಗೇಲ್ ಆಶ್ರಮಬಿಟ್ಟು ಹೋದಮೇಲೆ, ಆಶ್ರಮದ ವತಿಯಿಂದ ಹಾಗೂ ಭಕ್ತರ ಕಡೆಯಿಂದ ಇಪ್ಪತ್ತು ಸಾವಿರ ಡಾಲರ್ ಗೂ ಹೆಚ್ಚಿನ ಹಣವನ್ನು ತನ್ನ ಜೀವನದಲ್ಲಿ ನೆಲೆಯಾಗಲು ಸಹಾಯವಾಗಿ ಪಡೆದಿದ್ದಾಳೆ ಎಂದು ನನಗೆ ಅರ್ಹಮೂಲಗಳಿಂದ ನೇರವಾಗಿ ಗೊತ್ತಾಗಿದೆ. ದುಬೈ ಭಕ್ತರು ಕೆಲವರು ಹಣ ಮತ್ತು ಅವಶ್ಯಕ ವಸ್ತುಗಳನ್ನು ಸಂಗ್ರಹ ಮಾಡಿ, ಅಮ್ಮನ ನಿರ್ದೇಶನಕ್ಕೆ ಅನುಸಾರವಾಗಿ, ಸ್ವಾಮಿ ಅಮೃತಸ್ವರೂಪಾನಂದ ಅವರ ಮೂಲಕ ಅವಳಿಗೆ ವರ್ಗಾಯಿಸಿ, ಅವಳು ತನ್ನ ಜೀವನವನ್ನು ಪ್ರಾರಂಭಿಸಲು ಸಹಾಯ ಒದಗಿಸಿದ್ದಾರೆ. ಅವಳು ಈ ಎಲ್ಲಾ ಉಡುಗೊರೆಗಳನ್ನು ಸಂತೋಷವಾಗಿ ಸ್ವೀಕರಿಸಿದ್ದಾಳೆ. ತನಗೆ “ಹಿಂಸೆ ಕೊಟ್ಟವರು” ಎಂದು ಅವಳು ಕರೆಯುತ್ತಾಳಲ್ಲ ಅವರ ಕಡೆಯಿಂದ ಬಂದ ಸಹಾಯವನ್ನೇನೂ ಬೇಡ ಅನ್ನಲಿಲ್ಲವಲ್ಲ!

ಈ ಮೊತ್ತ ಮಾತ್ರವಲ್ಲದೆ ಗೇಲ್ ಗೆ ಪ್ರಪಂಚದ ನಾನಾ ಭಾಗಗ ಭಕ್ತರಿಂದ ಇನ್ನೂ ಹೆಚ್ಚಿ ಧನ ಸಹಾಯ ಹಾಗು ಇತರ ವಸ್ತುಗಳ ರೂಪದಲ್ಲಿ ಬೇಕಾದಷ್ಟು ಸಿಕ್ಕಿದೆ. ಹವಾಯಿಯಲ್ಲಿರುವ ಅಮ್ಮನ ಒಬ್ಬ ಭಕ್ತೆ, ಅರ್ಪಣಾ ಎಂಬುವಳು; (ಅವಳು ಬರೆದಿರುವದನ್ನೂ ದಯವಿಟ್ಟು ನೋಡಿರಿ) ಗೇಲ್ ಅವಳ ಜೊತೆಯಲ್ಲಿದ್ದಳು. ಅರ್ಪಣಾ ಗೇಲ್ ಗೆ ಹಣ ಟ್ರಾನ್ಸ್ ಫರ್ ಮಾಡುವುದರಲ್ಲಿ, ಡೆಪಾಸಿಟ್ ಮಾಡುವುದರಲ್ಲಿ ಮತ್ತು ಇನ್ವೆಸ್ಟ್ ಮಾಡುವುದರಲ್ಲಿ ಸಹಾಯ ಮಾಡಿದ್ದಳು.

ಸತ್ಯ ವಿಷಯ ಏನೆಂದರೆ, ಅವಳು ಬಿಟ್ಟುಹೋದಮೇಲೂ, ಗೇಲ್ ಳನ್ನು ಅಮ್ಮನ ಭಕ್ತರು ಪ್ರೀತಿಯಿಂದ ನೋಡಿಕೊಂಡಿದ್ದಾರೆ. ಊಟ – ಬಟ್ಟೆ – ವಸತಿ ಒಳಗೊಂಡು ಅವಳಿಗೆ ಬೇಕಿದ್ದ ಎಲ್ಲಾ ಅವಶ್ಯಕತೆಗಳು ಹಾಗು ಅವಶ್ಯಕತೆ ಎನ್ನಲಾಗದ ಅವಳ ಇತರ ಅವಶ್ಯಕತೆಗಳೂ ಸುಖಸೌಲಭ್ಯಗಳೂ ದೊರಕಿದ್ದವು. ಭಕ್ತರಿಂದ ಎಷ್ಟರಮಟ್ಟಿಗಿನ ಸಹಾಯ ಅನುಕೂಲ – ಸಪೋರ್ಟ್ ಸಿಕ್ಕಿತು ಎಂಬ ವಿಷಯವನ್ನು ಗೇಲ್ ಹೇಳದೇ ಹೋಗುವುದು ವಿಷಾಧನೀಯ.

“ಇನ್ನು ಅವಳ ಪುಸ್ತಕದಲ್ಲಿ: ಯಾವುದು ಸತ್ಯ ಯಾವುದು ಕಾಲ್ಪನಿಕ ಎಂಬ ಪ್ರಶ್ನೆ ಏಳುತ್ತದೆ.”

ಇಷ್ಟೇ ಅಲ್ಲ, ಅವಳು ೧೯೯೯ರಲ್ಲಿ ಬಿಟ್ಟು ಹೋದರೂ, ಅದೂ ಅವಳದೇ ನಿರ್ಧಾರವಾಗಿದ್ದರೂ ಸಹ, ಸುಮಾರು ಎರಡು ವರ್ಷಗಳ ಕಾಲ ಅವಳ ಆರೋಗ್ಯ ವಿಮೆಯನ್ನು ಅಮೇರಿಕಾದ M A Centre ನೋಡಿಕೊಂಡಿದೆ. “ಕಲ್ಟ್” ನಿಂದ (ಪಂಥದಿಂದ) ತಪ್ಪಿಸಿಕೊಂಡು ಪಾಲಾಯನ ಮಾಡಿದ “ನಿರಾಶ್ರಿತ” ವ್ಯಕ್ತಿಯ ದಾರುಣ ಕತೆ ಇದು ಎಂದು ನನಗೆ ಅನ್ನಿಸುವುದಿಲ್ಲ….. ಒಂದುವೇಳೆ ಏನಾದರೂ ಅವಳು ನಿರಾಶ್ರಿತಳ್ಳದೇ ಇದ್ದಲ್ಲಿ, ಅಮ್ಮನ ಸಂಸ್ಥೆ “ಕಲ್ಟ್” (ಪಂಥ) ಅಲ್ಲ ಎನ್ನುವುದೇ ನಿಜವಾದಲ್ಲಿ?

ಒಂದಂತೂ ಸತ್ಯ, ತನ್ನ ಆತ್ಮಕಥೆಯಂಥಾ ಪುಸ್ತಕದಲ್ಲಿ ಗೇಲ್ ಕೆಲವು ಅತಿಮುಖ್ಯ ವಿಷಯಗಳನ್ನು ಕೈಬಿಟ್ಟಿರುವುದು, ತನ್ನನ್ನು ತಾನು ಆಶ್ರಮದಿಂದ ತಪ್ಪಿಸಿಕೊಂಡು ಪಲಾಯನ ಮಾಡುವ ನಿರಾಶ್ರಿತಳಾಗಿ ಚಿತ್ರಿಸಿಕೊಂಡಿರುವುದು – ಅದೂ, ಹೋಗಿ ಬಹಳ ವರ್ಷಗಳ ವರೆಗೆ ಅನೇಕ ಮೂಲಗಳಿಂದ ಅನೇಕ ರೂಪದಲ್ಲಿ ಸಹಾಯ ಪಡೆದುಕೊಂಡೂ ಸಹ- ಹೀಗೆ ಹೇಳುವುದು ಏನು ಸೂಚಿಸುತ್ತದೆ ಎಂದರೆ ಅವಳು ನಂಬಲರ್ಹ ಸಾಕ್ಷಿಯಲ್ಲ.

ಇನ್ನು, ಅವಳ ಪುಸ್ತಕದಲ್ಲಿ ಯಾವುದು ಸತ್ಯ? ಯಾವುದು ಕಾಲ್ಪನಿಕ? ಎಂಬ ಪ್ರಶ್ನೆ ಏಳುತ್ತದೆ.

– ಡಾ. ಗೀತಾ ಕುಮಾರ್.

Source: A Letter from Geetha Kumar

ಗೇಲ್ ನನ್ನ ಬಗ್ಗೆ ಸುಳ್ಳು ಹೇಳಿದ್ದಾಳೆ: ಪ್ರಕಾಶ್ ಬರೆದ ಪತ್ರ

ಈ ಪತ್ರ ಮೂಲದಲ್ಲಿ ಮಲಯಾಳ ಭಾಷೆಯಲ್ಲಿದೆ. ಗೇಲ್ ಟ್ರೆಡ್ವೆಲ್ ಪ್ರಕಾಶನನ್ನು ಸೇರಿಸಿಕೊಂಡು ತನ್ನ ಪುಸ್ತಕದಲ್ಲಿ ಒಂದು ಕತೆ ಹೆಣೆದಿದ್ದಾಳೆ. ಇದಕ್ಕೆ ಪ್ರಕಾಶ್ ಪ್ರತಿಕ್ರಿಯೆ:

ನನ್ನ ಹೆಸರು ಪ್ರಕಾಶ್. ಗೇಲ್ ಟ್ರೆಡ್ವೆಲ್ ಇತ್ತೀಚೆಗೆ ಪ್ರಕಟಿಸಿದ “ಹೋಲಿ ಹೆಲ್” ಪುಸ್ತಕದಲ್ಲಿ ನಾನು ಅಮ್ಮನ ಕೋಣೆಗೆ ಹಣ ಒಯ್ದು ಕೊಟ್ಟೆ ಎಂದು ಆರೋಪಿಸುತ್ತಿದ್ದಾಳೆ ಎಂದು ತಿಳಿದುಬಂದಿತು. ಇದು ಶುದ್ಧ ಸುಳ್ಳು. ಹಿಂದೆಯಾಗಲೀ ಈಗಾಗಲೀ ಎಂದೂ ನಾನು ಯಾವ ಸಂದರ್ಭದಲ್ಲೂ ಅಮ್ಮನ ಕೋಣೆಗೆ ಹಣವನ್ನು ಒಯ್ದಿಲ್ಲ. ಹಾಗಿರುವಾಗ ಗೇಲ್ ಯಾಕೆ ನನ್ನ ಹೆಸರು ಬಳಸಿಕೊಂಡು ತನ್ನ ಅಸ್ಥಿರ ಮನಸ್ಸಿನಿಂದ ಇಲ್ಲದ ಕಥೆಯನ್ನು ಕಟ್ಟಿದಳೋ ನನಗೆ ಗೊತ್ತಾಗುತ್ತಿಲ್ಲ. ಇದು ಮಹಾ ಕ್ರೂರತನ. ಇದು ಒಂದು ಕ್ರಿಮಿನಲ್ ಅಫೆನ್ಸ್ ಕೂಡ.
– ಪ್ರಕಾಶ್

Source: Gail Tredwell Lied About Me: A Letter from Prakash

ಬಹುಕಾಲದ ಭಕ್ತೆಯಾದ ಅನು ಐಯ್ಯರ್ ಬರೆದ ಪತ್ರ

ನನ್ನ ಹೆಸರು ಅನು ಐಯ್ಯರ್. ನಾನು ಅಮ್ಮನನ್ನು ೧೯೮೭ರಲ್ಲಿ ಅಮೆರಿಕಾದ ಪಾಲೊ ಆಲ್ಟೋದಲ್ಲಿ ನಮ್ಮ ಕುಟುಂಬದ ಸ್ನೇಹಿತರ ಮನೆಯಲ್ಲಿ ಮೊದಲು ಭೇಟಿಯಾದೆ. ನಾನು ಮತ್ತು ನನ್ನ ತಂಗಿ ಅಮ್ಮನಿಂದ ಆ ಕೂಡಲೆ ಸೆಳೆಯಲ್ಪಟ್ಟೆವು. ಅಮ್ಮನ ಭಜನೆ ತುಂಬಾ ಇಷ್ಟವಾಯಿತು. ಅಮ್ಮನ ಜೊತೆ ಯಾತ್ರೆ ಮಾಡಲು ನಮಗೆ ಬಯಕೆಉಂಟಾಯಿತು. ಆ ಮೊದಲ ವರ್ಷಗಳು ತುಂಬಾ ವಿಶೇಷ ಕ್ಷಣಗಳಾಗಿದ್ದವು ಕಾರಣ ಅಮ್ಮ ಮತ್ತು ಹಿರಿಯ ಸನ್ಯಾಸಿಗಳ ಒಡನಾಟದಲ್ಲಿ ಬೆಳೆಯಲು ನಮಗೆ ಅವಕಾಶದೊರೆಕಿತು. ಆ ಸಮಯದಲ್ಲೇ ನನಗೆ ಗೇಲ್ ಟ್ರೆಡ್ವೆಲ್ ಸಹ ಪರಿಚಯವಾಗಿದ್ದು. ೧೯೮೮ರಲ್ಲಿ ಅಮ್ಮನನ್ನು ಮೊದಲ ಸಲ ನಮ್ಮ ಮನೆಗೆ ಆಹ್ವಾನಿಸದಾಗ, ನನಗೆ ಅವಳ ವ್ಯಕ್ತಿತ್ವದ ಒಳನೋಟದ ಪರಿಚಯ ಸಿಕ್ಕಿತು. ಅವಳ ನುಡಿ ತೀಕ್ಷ್ಣವಾಗಿತ್ತು. ನಾವು ಕೇವಲ ಮಕ್ಕಳಾಗಿದ್ದರೂ ಅವಳು ನಮ್ಮ ಮೇಲೆ ದಬ್ಬಾಳಿಕೆ ಮಾಡುತ್ತಿದ್ದಳು. ಇಷ್ಟಾನಿಷ್ಟ ತೋರಿಸುವಲ್ಲಿ ಹಿಂಜರಿಯುತ್ತಲೇ ಇರಲಿಲ್ಲ. ಹೀಗಿದ್ದೂ, “ಗಾಯತ್ರಿ ಅಕ್ಕ” ಎಂಬ ಕುಖ್ಯಾತ ಹೆಸರಿನಿಂದ ಅವಳು ಎಲ್ಲರಿಂದ ಸಂಬೋಧಿಸಲ್ಪಡುತ್ತಿದ್ದಳು, ಅವಳೊಬ್ಬ ಪ್ರಖ್ಯಾತ ಮಾಫಿಯಾ ಬಾಸ್ ಥರ ಇದ್ದಳು. ಎಷ್ಟೋ ಜನ ಹೆಣ್ಣುಮಕ್ಕಳ ಜೀವನಗಳ ಅನೇಕ ಮಗ್ಗಲುಗಳನ್ನು ಅವಳು ಕಂಟ್ರೋಲ್ ಮಾಡುತ್ತಿದ್ದಳು. ಬಹುಬೇಗನೇ ಅವಳ ಕಂಟ್ರೋಲ್ ಗೆ ಮತ್ತೆ ಅವಳ ಕ್ರೂರತೆಗೆ ನಾನೂ ನನ್ನ ತಂಗಿಯೂ ಸಿಲುಕಿಬೀಳುತ್ತೇವೆ ಎಂದು ನನಗಂತೂ ಗೊತ್ತಿರಲಿಲ್ಲ.

೧೯೯೨ರಲ್ಲಿ ಅಮ್ಮನ ಜೊತೆ ಮೂರು ತಿಂಗಳುಗಳ ಕಾಲ ಅಮೆರಿಕಾ ಮತ್ತು ಯೂರೋಪ್ ಯಾತ್ರೆ ಮಾಡಿದೆವು. ಅದೊಂದು ಆಧ್ಯಾತ್ಮಿಕವಾದ ಸಾಹಸ ಯಾತ್ರೆಯಾಗಿತ್ತು; ಅಲ್ಲದೆ ಗೇಲ್ಳ ಮತ್ತಷ್ಟು ಹತ್ತಿರ ಇರುವ ಅವಕಾಶವನ್ನೂ ನೀಡಿತು. ನಾವು ಎಲ್ಲಿ ಉಳಿಯಬೇಕು, ನಾವು ಯಾವ ಸೇವೆ ಮಾಡಬೇಕು ಎಂದೆಲ್ಲಾ ಅವಳೇ ಅವಳಿಗೆ ಬೇಕಾದ ಹಾಗೆ ನಿರ್ಧರಿಸುತ್ತಿದ್ದಳು. ನಮಗೆ “ಯೂ ಲೇಜಿ ಬಮ್ಸ್ (ಹೇ! ಪ್ರಯೋಜನವಿಲ್ಲದ ಸೋಂಬೇರಿಗಳೆ), ಅಡುಗೆ ಮನೆ ಕ್ಲೀನ್ ಮಾಡಿ!” ಎಂದು ಆಜ್ಞಾಪಿಸುವುದರಲ್ಲಿ ಅವಳಿಗೆ ಏನೋ ಖುಷಿ; ಹಾಗೆ ಕೂಗುತ್ತಾ ಕೈಯ್ಯಲ್ಲಿದ್ದ ಟವಲ್ಲಿನಿಂದ ನನ್ನ ಹಿಂದಕ್ಕೆ ಏಟು ಕೊಡುತ್ತಿದ್ದಳು. ಆ ಕೆಲಸಗಳನ್ನೆಲ್ಲಾ ನಾವು ದಾಪುಗಾಲು ಹಾಕುತ್ತಾ, ಅದರಿಂದ ನಮಗೆ ಶಿಸ್ತು ಬೆಳೆಸಿಕೊಳ್ಳಲು ಸಹಕಾರಿಯಾಗುತ್ತದೆ ಎಂದು ಭಾವಿಸುತ್ತಾ, ತೆರೆದ ಮನದಿಂದ ಮಾಡುತ್ತಿದ್ದೆವು. ಆದರೆ ಬರಬರುತ್ತಾ ದಿನಕಳೆದಂತೆ ಅವಳ ವ್ಯಕ್ತಿತ್ವವು ಹೆಚ್ಚು ಹೆಚ್ಚು ಕಪ್ಪಿಟ್ಟಿತು, ಹೆಚ್ಚು ಹೆಚ್ಚು ನೆಗೆಟೀವ್ ಆಗುತ್ತಾ ಹೋಯಿತು. ನಿಜ ಹೇಳಬೇಕೆಂದರೆ, ಅವಳ ಹತ್ತಿರ ಇರುವುದೇ ನಮಗೆ ಭಯವಾಗುತ್ತಿತ್ತು. ವ್ಯಂಗ್ಯವಾಗಿ, ಈ ರೀತಿ ಮಾರ್ಪಾಡಾದ ಬಳಿಕ, ಅವಳು ತನಗಿಷ್ಟಬಂದ ಕೆಲವರನ್ನು ಗುಂಪುಗೂಡಿಸಿಕೊಂಡಿದ್ದಳು; ಅವರು ಇವಳು ಹೇಳಿದ್ದನ್ನೆಲ್ಲಾ ಕೇಳುವಂತೆ, ಇವಳ ಬೆನ್ನನ್ನು ಆಗಾಗ ಚಪ್ಪರಿಸಿ ಹುರಿದುಂಬಿಸುವಂತೆ ಖಚಿತಪಡಿಸಿಕೊಳ್ಳುತ್ತಿದ್ದಳು. ನಮ್ಮನ್ನು ಎಲ್ಲರಿಂದ ದೂರವಿರಿಸಿ, ನಾವು ಮೂಲೆಗುಂಪಾದರೆ, ಹೇಳಿದ್ದು ಕೇಳಿಕೊಂಡಿರುವಂತಾದರೆ ಅವಳಿಗೆ ಸಂತೋಷವಾಗುತ್ತಿತ್ತು.

“ “ಅಮ್ಮನಿಗೆ ಹತ್ತಿರ” ಇರುವ ವ್ಯಕ್ತಿಯನ್ನು ನಾವು ತುಂಬಾ ಉನ್ನತ ವ್ಯಕ್ತಿಗಳೆಂದು ಪೂಜ್ಯಭಾವದಿಂದ ಕಾಣುತ್ತೇವೆ. ಆದರೆ ಅವಳು ಸನ್ಯಾಸಿನಿಯಂತೆ ಮಾತಾಡುತ್ತಿರಲಿಲ್ಲ; ಅಲೆಮಾರಿ ಕುಡುಕನ ಹಾಗಿತ್ತು ಅವಳ ನಡೆನುಡಿ”.

ನನಗೆ ನೆನಪಿದೆ, ಬಾರ್ದೋ ಎಂಬಲ್ಲಿ ಅಮ್ಮನ ಜೊತೆ ಯಾತ್ರೆಯಲ್ಲಿದ್ದೆವು. ಒಂದು ದೇವಿಭಾವದ ರಾತ್ರಿ, ದೀರ್ಘ ಸಮಯ ತಬಲಾ ನುಡಿಸಿದ ಬಳಿಕ ಆಗತಾನೇ ನಾನು ಎದ್ದು ನಿಂತ್ತಿದ್ದೆ. ಬಹಳ ಹೊತ್ತಿನಿಂದ ಹಿರಿಯ ಸ್ವಾಮೀಜಿಯವರ ಭಜನೆಗೆ ತಬಲಾ ನುಡಿಸಿದ್ದೆ. ಅಷ್ಟರಲ್ಲಿ ದಿಢೀರ್ ಅಂತ, ಗೇಲ್ ತಾನೀಗ ಭಜನೆ ಹಾಡಬೇಕು ಎಂದು ನಿರ್ಧರಿಸಿದಳು. ಅವಳಿಗೆ ನಾನು ತಬಲಾ ನುಡಿಸಬೇಕು ಎಂದು ಹೇಳಿದಳು. ಅವಳ ಸೆಶನ್ ನನಗೆ ಯಾವತ್ತೂ ವಿಶೇಷವಾಗಿ ತೋರುತ್ತಿತ್ತು, ಹಾಗಾಗಿ ಅವಳಿಗೆ ನುಡಿಸಲು ನನಗೆ ಸದಾ ಗೌರವವೆನಿಸುತ್ತಿತ್ತು. ಬೇಗ ತಿರುಗಿ ಬರೋಣ ಎಂದುಕೊಂಡು, ಅವಳನ್ನು, “ಕೊಂಚ ಕೈಕಾಲು ಸಡಿಲ ಮಾಡಿಕೊಂಡು ರೆಸ್ಟ್ ರೂಮಿಗೂ ಹೋಗಿ, ಬೇಗ ಬಂದುಬಿಡಲೆ?” ಎಂದು ಒಂದು ಮಾತು ಕೇಳಿದೆ. ತಟ್ಟೆಂದು ಅವಳ ವ್ಯಕ್ತಿತ್ವ ಬದಲಾಗಿ, “ನಿನ್ನ ಸ್ತನಗಳನ್ನು ಕತ್ತರಿಸಿಕೊಂಡು ನೀನು ಹುಡುಗನೆಂದು ಏಕೆ ನಟಿಸಬಾರದು? ಎಂತಾದರೂ ನೀನು ಸ್ವಾಮೀಜಿಗಳಿಗೇ ಸಹಕರಿಸುತ್ತೀಯ. ಹೋಗು, ಅವರ ಪೃಷ್ಟಗಳಿಗೆ ಮುತ್ತನ್ನಿಡು!” ಎಂದುಬಿಟ್ಟಳು. ಹಾಗೆಂದು ಹೇಳಿ ಬಿರ್ರನೆ ಹೋಗಿಬಿಟ್ಟಳು. ನಾನು ಆಗತಾನೇ ಹದಿಹರೆಯಕ್ಕೆ ಕಾಲಿಟ್ಟಿದ್ದೆ. ಇಂಥ ವಿಷಯವೆಲ್ಲಾ ಹೊಸತು. ಕೇಳಿ ಭಯದಿಂದ ನಡುಗಿಹೋದೆ. ಯಾರಿಗೂ ಕಾಣದಂತೆ ಅಲ್ಲಿದ್ದ ಒಂದು ಹೂಗಿಡಗಳ ಪೊದೆಯ ಹಿಂದೆ ಹೋಗಿ, ಕತ್ತಲಲ್ಲಿ ಅಳುತ್ತಾ ಕೂತೆ. ಇನ್ನೊಬ್ಬರಿಗೆ ಅತ್ಯಂತ ನೋವಾಗಬೇಕು ಎಂದರೆ ಏನು ಹೇಳಬೇಕು ಎಂದು ಅವಳಿಗೆ ಸರಿಯಾಗಿ ಗೊತ್ತಿದ್ದಂತಿತ್ತು. ನನ್ನನ್ನು ಮಾತ್ರವಲ್ಲ ಇತರರನ್ನೂ ಈ ರೀತಿ ಕೀಳಾಗಿ ನಡೆಸಿಕೊಂಡು ಅಳಿಸಿರುವ ಹತ್ತಾರು ಉದಾಹರಣೆ ನನಗೆ ನೆನಪಿಗೆ ಬರುತ್ತವೆ. ದೇಹದ ಅಂಗಾಗಗಳ ಬಗ್ಗೆ ಅವಳಿಗೆ ಏನೋ ಭ್ರಾಂತಿ ಇದ್ದಂತ್ತವಳಂತೆ, ಅವಳದು ಲೈಂಗಿಕ ಸೂಚ್ಯಾರ್ಥ ಇರುತ್ತಿದ್ದ ಶಾಪದಂಥ ನುಡಿಗಳಾಗಿರುತ್ತಿದ್ದವು. ತಮಾಷೆ ಎಂದರೆ, ಇದೇ ಸಮಯ ಅವಳು ಹೀಗಿದ್ದೂ “ತಾನು ಬಹುಶುದ್ಧಳು, ತಾನು ಬಹು ನಿಷ್ಕಳಂಕಳು” ಎಂಬಂತೆ ತೋರಿಸಿಕೊಳ್ಳುತ್ತಿದ್ದಳು. “ಅಮ್ಮನಿಗೆ ಹತ್ತಿರ” ಇರುವ ವ್ಯಕ್ತಿಯನ್ನು ನಾವು ತುಂಬಾ ಉನ್ನತ ವ್ಯಕ್ತಿಗಳೆಂದು ಪೂಜ್ಯಭಾವದಿಂದ ಕಾಣುತ್ತೇವೆ. ಆದರೆ ಅವಳು ಸನ್ಯಾಸಿನಿಯಂತೆ ಮಾತಾಡುತ್ತಿರಲಿಲ್ಲ; ಅಲೆಮಾರಿ ಕುಡುಕನ ಹಾಗಿತ್ತು ಅವಳ ನಡೆನುಡಿ”.

“ವರ್ಷಗಳು ಉರುಳಿದಂತೆ, ಅವಳು ಕುಸಿಯುತ್ತಿದ್ದಾಳೆ ಎನ್ನುವುದು ಸಷ್ಟವಾಯಿತು.”

ವರ್ಷಗಳು ಉರುಳಿದಂತೆ, ಅವಳು ಕುಸಿಯುತ್ತಿದ್ದಾಳೆ ಎನ್ನುವುದು ಸ್ಪಷ್ಟವಾಯಿತು. ಅಮ್ಮನಿಗೆ ಒಂದಿಷ್ಟೂ ಗೌರವ ತೋರಿಸುತ್ತಿರಲಿಲ್ಲ. ಆಶ್ರಮದ ಬಗ್ಗೆ ಕೆಟ್ಟದಾಗಿ ಮಾತಾಡುತ್ತಿದ್ದಳು. ಹಿರಿಯ ಸನ್ಯಾಸಿಗಳನ್ನು, ಅವಳ ಸುತ್ತಲೂ ಇದ್ದ ಮತ್ತಿತರ ಹಿರಿಯರನ್ನು ಸಂಬೋಧಿಸುವಾಗ “ಬಾಸ್ಟರ್ಡ್”(ಜಾರಜ), “ಬಿಚ್”(ಹೆಣ್ಣುನಾಯಿ) ಮುಂತಾದ ಪದಗಳು ಅವಳ ಬಾಯಿಯಿಂದ ಸಲೀಸಾಗಿ ಉದುರುತ್ತಿದ್ದವು. ನನಗೆ ನೆನಪಿದೆ, ೧೯೯೬ರಲ್ಲಿ ಪ್ಯಾರಿಸ್ ನಲ್ಲಿ ಒಂದು ಫ್ಲಾಟಿನಲ್ಲಿ ಅಮ್ಮನ ತಂಡದವರ ಜೊತೆಗೆ ತಂಗಿದ್ದೆವು. ಗೇಲ್ ಸನ್ಯಾಸಿಯೊಬ್ಬರ ಗಮನ ಪಡೆಯಲು ಬಹಳ ಅನಾದರದಿಂದ ತನ್ನ ಕಾಲಿನಲ್ಲಿ ತಟ್ಟಿ ಮಾತಾಡಿಸಿದ್ದಳು. ತನಗೆ ಭಾರತೀಯ ಸಂಸ್ಕಾರ ಬಹಳ ಚೆನ್ನಾಗಿ ಗೊತ್ತಿದೆ ಎಂದು ಬೀಗುತ್ತಿದ್ದ ಅವಳಿಗೆ, ಇದು ಎಷ್ಟು ಅಗೌರವ ಸೂಚಿಸುವುದು ಎಂದು ಗೊತ್ತಿರಬೇಕಿತ್ತು. ಇದೂ ಅವಳ ವ್ಯಕ್ತಿತ್ವದ ಭಾಗವೇ ಎಂದು ನಾವು ಪರಿಗಣಿಸುತ್ತಾ ಸುಮ್ಮನಿದ್ದೆವು; ಯಾಕೆ ಹಾಗೆ ಮಾಡಿದ್ದು ಎಂದು ಯಾರೂ ಅವಳನ್ನು ಕೇಳಲಿಲ್ಲ.

ನಮ್ಮ ಗೆಳತಿಯೊಬ್ಬಳು ಆಶ್ರಮವನ್ನು ೧೯೯೬ರಲ್ಲಿ ಸೇರಿದಳು; ಹೊಸಬರಿಗಾಗಿ ನಡೆದ ಒಂದು ಮೀಟಿಂಗ್ ನಲ್ಲಿ ಗೇಲ್ ತುಂಬಾ ಕೆಟ್ಟದಾಗಿ ಮೂರ್ಖತನದಿಂದ ನಡೆದುಕೊಂಡ ಬಗ್ಗೆ ಅವಳು ಸ್ಪಷ್ಟಪಡಿಸಿದಳು. ಅಮ್ಮನ ಅತ್ಯಂತ ಹತ್ತಿರದ ಸ್ವಾಮಿನಿಯ ಆಧ್ಯಾತ್ಮಿಕ ಬೋಧನೆಯನ್ನು ಓದಿದ್ದ ಹೊಸಾ ಆಶ್ರಮವಾಸಿಗಳಿಗೆಲ್ಲಾ ಇವಳ ಈ ವರ್ತನೆಯನ್ನು ಕಂಡು ಗೊಂದಲವೂ ಭಯವೂ ಉಂಟಾಯಿತು. ಹಾಗಿದ್ದೂ, ಅವಳಿಗೆ ಸಮಾಧಾನ ಇರಲಿಲ್ಲ; ಅವಳು ತನ್ನ ಅಧಿಕಾರ ದಾಹವನ್ನು ಬಿಟ್ಟುಕೊಡಲಾಗದೆ ಅದಕ್ಕೇ ಕಚ್ಚಿಕೊಂಡಿದ್ದಳು, ಎಲ್ಲವನ್ನೂ ನಿಯಂತ್ರಿಸುವುದನ್ನು ಮುಂದುವರೆಸಿದಳು.

ಅವಳು ಬಿಟ್ಟುಹೋಗುವ ಕೆಲವು ದಿನಗಳ ಹಿಂದೆ, ಸಾನ್ ರಮೊನ್ ನಲ್ಲಿ ನವೆಂಬರ್ ೧೯೯೯ರಲ್ಲಿ ನನಗಾದ ಅನುಭವ ಬಹುಶಃ ನನಗೆ ಅತ್ಯಂತ ಭಯಾನಕವಾದುದು ಎನ್ನಬೇಕು. ಒಬ್ಬ ಗೆಳತಿಯ ಜೊತೆ ಹತ್ತಿರದ ಮಾಲ್ ಗೆಂದು ಹೋರಟಿದ್ದೆ; ಗೇಲ್ ಗೆ ಬರ್ತಡೇ ಗಿಫ್ಟ್ ಕೊಂಡುಕೊಳ್ಳಬೇಕು ಎಂದು. ಆದರೆ ದಾರಿಯಲ್ಲಿ ನಮ್ಮ ಕಾರು ಅಪಘಾತಕ್ಕೆ ಸಿಕ್ಕಿತು. ಹಾಗಗಿ ಮಾಲ್ ಗೆ ಹೋಗಲು ಆಗಲೇ ಇಲ್ಲ. ಆಸ್ಪತ್ರೆಯ ಎಮರ್ಜೆನ್ಸಿ ರೂಮಿಗೆ ಹೋಗಬೇಕಾಗಿ ಬರಲಿಲ್ಲ, ಆದರೆ ನನಗೆ ಕತ್ತಿನಲ್ಲಿ ಸಂವೇದನೆಯೇ ಇಲ್ಲವಾಯಿತು; ಕೆಲವು ದಿನಗಳವರೆಗೆ ಕತ್ತನ್ನು ಅಲುಗಿಸಲೂ ಆಗದಾಯಿತು. ಆ ದಿನಗಳಲ್ಲಿ ಸಾನ್ ರಮೊನ್ ಆಶ್ರಮದಲ್ಲಿ ಒಂದು ಬೆಳಿಗ್ಗೆ ಸ್ಲೀಪಿಂಗ್ ಬ್ಯಾಗ್ ನೊಳಗೆ ಮಲಗೇ ಇದ್ದೆ. ಇದ್ದಕಿದ್ದಂತೆ ಕಾರಿಡಾರ್ ನಲ್ಲಿ ಅವಳ ಕೂಗಾಟ ಕೇಳಿಬಂತು. “ಏಳೇ ಲೇಜಿ ಬೋನ್ಸ್!(ಸೋಂಬೇರಿಗಳೇ!)” ಎಂದು ಕೂಗುತ್ತಾ ಬಲಗಾಲನ್ನು ನನ್ನ ತಲೆಯ ಹತ್ತಿರವೇ ತುಳಿಯುತ್ತಾ ತಪ್ಪೆಂದು ಇಟ್ಟಾಳು. ನನಗೆ ನಿಜವಾಗಿಯೂ ಭಯವಾಯಿತು ಏಕೆಂದರೆ ನನಗೆ ಕತ್ತನ್ನು ಒಂದಿಷ್ಟು ಅಲುಗಿಸಲು ಆಗದಂಥಾ ಅವಸ್ಥೆಯಲ್ಲಿದ್ದೆ. ಕೂಡಲೆ, ನನ್ನ ಭೀತಿಯಂತೆ, ಅವಳು ನನ್ನನ್ನು ಒದೆಯತೊಡಗಿದಳು. ನಾನು, “ದಯವಿಟ್ಟು ನಿಲ್ಲಿಸಿ! ನನಗೆ ಕತ್ತು ಹೊರಳಿಸಲು ಆಗದು!” ಎಂದು ಬೇಡಿದೆ. ನೋವಿನಿಂದ, ಅಸಹಾಯಕತೆಯಿಂದ ನಾನು ನರಳುತ್ತಿದ್ದರೆ ಅವಳಿಗೆ ಸಹಾನುಭೂತಿ ಇರಲಿ, ಒಂದಿಷ್ಟೂ ಮರುಕವೂ ಉಂಟಾಗಲಿಲ್ಲ. ಅವಳಿಗೆ ಅದು ಜೋಕ್ ಮಾಡುವ ಸಮಯವಾಗಿತ್ತು. “ಕತ್ತು ಹೊರಳಿಸಲು ಆಗದೆ? ಎ?” ತನ್ನ ಆ ಸ್ಟ್ರೇಲಿಯನ್ ಶೈಲಿಯಲ್ಲಿ ಅಣಕಿಸುತ್ತಾ ಕೇಳಿದಳು. ಇದಕ್ಕೂ ಹೆಚ್ಚಿನ ನೋವು ನೀಡಿದ್ದು ಎಂದರೆ ನನ್ನ ಇಬ್ಬರು ಸ್ನೇಹಿತೆಯರು – ಅಮ್ಮನನ್ನು ನನಗೆ ಪರಿಚಯಿಸಿದವರೇ ಅವರು- ಅವರೂ ಕೂಡ ಗೇಲ್, ನನ್ನ ಮೇಲೆ ನಡೆಸುತ್ತಿದ್ದ ಹಲ್ಲೆಯನ್ನು ನಿಂತು ನೋಡುತ್ತಿದ್ದರು. ಅವರು ಒಂದು ಮಾತೂ ಹೇಳಲಿಲ್ಲ, ಏನೂ ಮಾಡಲೂ ಇಲ್ಲ. ಮಾತ್ರವಲ್ಲ, ಮೂವರೂ ಕೈಕೈ ಹಿಡಿದುಕೊಂಡು ಕೋಣೆಯಿಂದ ಹೊರಗೆ ಹೋದರು.
ಯಾರನ್ನು ನಾನು ತುಂಬಾ ಹತ್ತಿರದವರು ಎಂದು ಭಾವಿಸಿಕೊಂಡಿದ್ದೆನೋ ಅವರೇ ಈ ರೀತಿ ನಡೆದುಕೊಂಡಿದ್ದು ನೋಡಿ ನನಗೆ ತುಂಬಾ ವೇದನೆ ಆಯಿತು. ನೋವು, ಗೊಂದಲಗಳ ಜೊತೆ ನನ್ನನ್ನು ಅಲ್ಲಿಯೇ ಆ ಸ್ಥಿತಿಯಲ್ಲಿ ಬಿಟ್ಟು ಅವರೆಲ್ಲಾ ಹೋದದ್ದನ್ನು ಕಂಡು ನನ್ನ ಕಣ್ಣಿಂದ ನೀರು ಹರಿಯಿತು. ಗೇಲ್ ಅಮ್ಮನನ್ನು ತೊರೆದ ಅಲ್ಪಕಾಲದಲ್ಲೇ ಇವರಿಬ್ಬರೂ ಸಹ ಅಮ್ಮನನ್ನು ತೊರೆದುಹೋದರು. ಗೇಲ್ ಇವರಿಬ್ಬರ ಮನಸ್ಸನ್ನು ಕೆಡಿಸಿದ್ದನ್ನು ಆಗ ನಾನು ಕಂಡೆ. ಇವರಿಬ್ಬರೂ ಅವಳ ಸಂಚಿನ ಭಾಗವಾಗಿದ್ದವರು; ಅವಳು ಮಾಡಿದ್ದಕ್ಕೆ ತಲೆತೂಗಿಸುವವರು, ಅವಳಿಗೆ ಸೇವೆ ಮಾಡಿಕೊಡುವವರು… ಹೀಗೆ ಅವಳು ತನ್ನ ಯೋಜನೆಗೆ ತಕ್ಕಂತೆ ಅವರನ್ನು ಪಳಗಿಸಿ ಇಟ್ಟುಕೊಂಡಿದ್ದಳು.

“ಅಮ್ಮನಿಗೆ ಬಹಳಾ ಹತ್ತಿರವಾಗಿದ್ದ ಇವರಿಬ್ಬರೂ ಪಾತ್ರದಲ್ಲಿ ಒಂದೇ ಥರ. ಆದರೆ ಒಬ್ಬರು ಎಷ್ಟು ಪ್ರೇಮ ಮತ್ತು ಕರುಣೆಯನ್ನು ಹೊಂದಿದ್ದರು, ಮತ್ತೊಬ್ಬರು ಎಷ್ಟು ದುಷ್ಟತನ, ದ್ವೇಷ ಹಾಗು ವರಟುತನವನ್ನು ಹೊಂದಿದ್ದರು!”

ಅಮ್ಮನ ವೈಯಕ್ತಿಕ ಸೇವೆಯನ್ನು ಮಾಡುವ ಲಕ್ಷ್ಮಿ ಅಕ್ಕ, ತಮ್ಮ ಬಿಡುವಿಲ್ಲದ, ಜವಾಬ್ದಾರಿಯುತ ದಿನಚರಿಯ ನಡುವೆಯೂ ಕೂಡ, ನಾನು ಅಪಘಾತವಾಗಿ ಹಾಸಿಗೆ ಹಿಡಿದಿದ್ದ ಆ ದಿನಗಳಲ್ಲಿ, ಅತ್ಯಂತ ಪ್ರೇಮದಿಂದ ನನ್ನ ಬಟ್ಟೆಗಳನ್ನು ಒಗೆದು, ಒಣಗಿಸಿ ಪ್ರೀತಿಯಿಂದ ಮಡಚಿ ಕೊಡುಟ್ಟು ನನ್ನ ಸೇವೆ ಮಾಡಿದರು. ಇದು ನನಗೆ ನಿಜವಾಗಿಯೂ ಆಶಾವಾದದ ಮನೋಭಾವದ ಹಾಗು ಸಕಾರಾತ್ಮಕ ದೃಷ್ಟಿಕೋನದ ಪಾಠವನ್ನು ಕಲಿಸಿತು. ಅಮ್ಮನಿಗೆ ಬಹಳಾ ಹತ್ತಿರವಾಗಿದ್ದ ಇವರಿಬ್ಬರೂ ಪಾತ್ರದಲ್ಲಿ ಒಂದೇ ಥರ. ಆದರೆ ಒಬ್ಬರು ಎಷ್ಟು ಪ್ರೇಮ ಮತ್ತು ಕರುಣೆಯನ್ನು ಹೊಂದಿದ್ದರು, ಮತ್ತೊಬ್ಬರು ಎಷ್ಟು ದುಷ್ಟತನ, ದ್ವೇಷ ಹಾಗು ವರಟುತನವನ್ನು ಹೊಂದಿದ್ದರು!

೨೦೦೧ರಲ್ಲಿ ನನಗೆ ಗೇಲ್ಳ ಅಂತರಂಗ ಮಿತ್ರವೃಂದದಿಂದ ಒಂದು ಅಜ್ಞಾತ ಈಮೇಲ್ ಬಂದಿತು; ಅದರಲ್ಲಿ ಅಮ್ಮನ ಮೇಲೆ ಏನೇನೋ ಆಪಾದನೆಗಳಿದ್ದವು. ಅವರು ಅಮ್ಮನ ಪ್ರತಿ ನನ್ನ ವಿಶ್ವಾಸವನ್ನು ಧ್ವಂಸಮಾಡಿ, ಅವರಂತೆ ನಾನೂ ಅಮ್ಮನನ್ನು ತೊರೆಯಬೇಕು ಎಂಬ ಪ್ರಯತ್ನವನ್ನು ನಡೆಸಿದರು. ಹಾಗಿದ್ದೂ, ಆ ಅವರ ಪತ್ರಕ್ಕೆ ತಮ್ಮ ಸಹಿ ಹಾಕುವ ಧೈರ್ಯ ಮಾತ್ರ ಅವರಿಗಿರಲಿಲ್ಲ. ಅವರುಗಳು ಯಾರು ಎಂದು ನನಗೆ ಸುಲಭವಾಗಿ ತಿಳಿದುಹೋಯಿತು. ಸುಳ್ಳನ್ನು ಹಬ್ಬಿಸಲು ಎಷ್ಟು ನೀಚತನಕ್ಕಾದರೂ ಇಳಿಯಲು ಸಿದ್ಧರಿರುವರಲ್ಲಾ ಎಂದು ಕಂಡು ನನಗೆ ಆಘಾತವಾಯಿತು. ಅವರು ಹೋಗಿದ್ದಾಯಿತು, ನನ್ನನ್ನು ನನ್ನ ಪಾಡಿಗೆ ಬಿಡಬಾರದೇಕೆ? ಅವರ ಪ್ರಯತ್ನಗಳು ಅವರಿಗೇ ಮುಳ್ಳಾದವು. ಅವರ ಪ್ರಯತ್ನಗಳೆಲ್ಲಾ ಏನೂ ಪರಿಣಾಮ ಬೀರಲಿಲ್ಲ, ಈಗಲೂ ಬೀರುತ್ತಿಲ್ಲ. ನನ್ನ ಅನುಭವವೇ ನನ್ನ ಗುರು. ಪ್ರಪಂಚಕ್ಕೆ ಒಳಿತಾದ ಏನನ್ನೂ ಕೊಡಲು ಇಲ್ಲದ ಇಂಥ ಜನರು ನನ್ನನ್ನು ಕಾಪಾಡಬೇಕಿಲ್ಲ. ಶಾಲೆಯ ಆ ದಿನಗಳಲ್ಲಿ ಕಲಿತದ್ದ ವಿಸ್ಟನ್ ಚರ್ಚಿಲ್ಲರ ಒಂದು ಮಾತು ನೆನಪಾಗುತ್ತಿದೆ, “ಸತ್ಯವನ್ನು ತಿರುಚಲಾಗದು. ಕುಬುದ್ಧಿ ಅದರ ಮೇಲೆ ಆಕ್ರಮಣ ಮಾಡಬಹುದು, ಅಜ್ಞಾನ ಅದನ್ನು ಅಲ್ಲಗಳೆಯಬಹುದು. ಆದರೆ ಕಡೆಯಲ್ಲಿ ಅದೋ ಸತ್ಯವು ಸತ್ಯವೇ ಆಗಿರುತ್ತದೆ.”

“ಸತ್ಯವನ್ನು ತಿರುಚಲಾಗದು. ಕುಬುದ್ಧಿ ಅದರ ಮೇಲೆ ಆಕ್ರಮಣ ಮಾಡಬಹುದು, ಅಜ್ಞಾನ ಅದನ್ನು ಅಲ್ಲಗಳೆಯಬಹುದು. ಆದರೆ ಕಡೆಯಲ್ಲಿ ಅದೋ ಸತ್ಯವು ಸತ್ಯವೇ ಆಗಿರುತ್ತದೆ.”

ಅವರು ಮಾಡಿದಂಥ ಗಾಯ ಮಾಗಲು ಅಮ್ಮನ ಪ್ರೇಮ ಮತ್ತು ಕ್ಷಮೆಯ ಬೋಧನೆ ಮಾತ್ರವೇ ನನಗೆ ಸಹಾಯಮಾಡಿರುವುದು. ಅಮ್ಮ ಮತ್ತು ಸ್ವಾಮಿಗಳೆಲ್ಲರೂ ನಮಗೆ ಸದಾ ಪ್ರೇಮ ಕರುಣೆಗಳನ್ನು ಮಾತ್ರವೇ ತೋರಿಸಿದ್ದಾರೆ. ಮೊದಲ ಆ ದಿನಗಳಲ್ಲಿ ಕೆಲವು ಯೂರೋಪಿಯನ್ ನಗರಗಳಲ್ಲಿ ನಾವು ಉಳಿದುಕೊಳ್ಳುತ್ತಿದ್ದ ಜಾಗದಲ್ಲಿ ಚಳಿ ಅಪಾರವಾಗಿರುತಿತ್ತು. ಅಮ್ಮ ನಮ್ಮನ್ನು ಎಷ್ಟರಮಟ್ಟಿಗೆ ಆರೈಸುತ್ತಿದ್ದರೆಂದರೆ, ಅಮ್ಮ ಅವರ ಬಿಸಿನೀರನ್ನು ನಮಗೆ ಸ್ನಾನ ಮಾಡಲು ನೀಡುತ್ತಿದ್ದರು, ಕೆಲವೊಮ್ಮೆ ನಮ್ಮನ್ನು ತಮ್ಮ ಕೋಣೆಯಲ್ಲಿ ಮಲಗಿಸಿಕೊಳ್ಳುತ್ತಿದ್ದರು. ಪ್ರಾಪಂಚಿಕ ಸ್ಥರದಲ್ಲಿಯೂ ಸಹ ಅಮ್ಮ ನಮ್ಮ ಅಗತ್ಯಗಳನ್ನು ನೋಡಿಕೊಳ್ಳುತ್ತಿದ್ದರು.

ಆಶ್ರಮವು “ಮೇಲ್ ಡಾಮಿನೇಟೆಡ್” (ಪುರುಷ ಪ್ರಾಬಲ್ಯವಾದುದು) ಎಂದು ಗೇಲ್ ಅಪವಾದ ಹೊರಿಸುತ್ತಾಳೆ; ಆದರೆ ಸ್ವಾಮಿಗಳೆಲ್ಲರೂ ನಮಗೆ ಗೌರವ ಮತ್ತು ಪ್ರೇಮವನ್ನೇ ತೋರಿದ್ದಾರೆ. ೧೯೯೩ರಲ್ಲಿ ಚಿಕಾಗೋದಲ್ಲಿ ನಡೆದ “ಪಾರ್ಲಿಮೆಂಟ್ ಆಫ್ ವರ್ಲ್ಡ್ ರಿಲೀಜಿಯನ್ಸ್” ನ ಸಂದರ್ಭದಲ್ಲಿ, ಒಂದು ದಿನ ನಾನು ಗೇಲ್ ಳನ್ನು “ಗಾಯತ್ರಿ” ಎಂದು ಕರೆದೆ; ಅದನ್ನು ಕೇಳಿದ ಸ್ವಾಮೀಜಿ, ಸ್ವತಃ ತಾವೇ ಎಲ್ಲರಿಗಿಂತಲೂ ಹಿರಿಯ ಸನ್ಯಾಸಿಯಾಗಿದ್ದರೂ, ಆ ರೀತಿ ಅವಳಾನ್ನು ಕರೆದುದ್ದಕ್ಕೆ ನನ್ನನ್ನು ತಿದ್ದಿದರು. ಭಾರತೀಯ ಸಂಸ್ಕೃತಿಯಲ್ಲಿ ಹಿರಿಯ ಸೋದರ ಅಥವಾ ಸೋದರಿಯರಿಗೆ “ಅಕ್ಕ” ಅಥವಾ “ಚೇಚಿ” ಎಂದು ಸಂಬೋಧಿಸಿ ಗೌರವ ತೋರಿಸುತ್ತೇವೆ. ಅವಳಿಗೆ ಸರಿಯಾಗಿ ಗೌರವ ತೋರಿಸುತ್ತ ನಾನು “ಗಾಯತ್ರಿ ಅಕ್ಕ” ಎಂದು ಕರೆಯಬೇಕು ಎಂದು ಸ್ವಾಮೀಜಿ ಕಲಿಸಿದರು. ಅಮ್ಮ ನನಗೆ ತಬಲಾ ನುಡಿಸುವ ವಿಶೇಷವಾದ ಅವಕಾಶ ನೀಡಿದರು; ಅಮ್ಮನ ವಿದೇಶಯಾತ್ರೆಗಳಲ್ಲೆಲ್ಲಾ ಮೊದಲ ಮಹಿಳಾ ತಬಲಾ ವಾದಕಿಯಾಗಿ ನನ್ನನ್ನು ಸ್ವಾಮಿಗಳೆಲ್ಲರೂ ಪ್ರೀತಿಯಿಂದ ಒಪ್ಪಿಕೊಂಡರು. ಅವರೆಲ್ಲರೂ ನನ್ನ ಕ್ರಿಯಾತ್ಮಕತೆಯನ್ನು ಪೋಷಿಸಿದರು, ತಿದ್ದಿದರು ಪ್ರೋತ್ಸಾಹಿಸಿದರು, ಕಲಿಸಿದರು. ಸೋಜಿಗವೆಂಬಂತೆ, ಆಶ್ರಮದ ಅತ್ಯುನ್ನತ ಸಂನ್ಯಾಸಿನಿಯಾದ ಸ್ತ್ರೀ – ಗೇಲ್ ಳೇ, ನನ್ನ ಪ್ರತಿಭೆಗೆ ತಣ್ಣೀರೆರಚುತ್ತಿದ್ದಳು. ನನ್ನ ಹಾಗು ಇತರ ಹೆಣ್ಣುಮಕ್ಕಳ ಉತ್ಸಾಹ ಕುಗ್ಗಿಸಿ, ನಿಯಂತ್ರಿಸಿ ಅವಹೇಳನ ಮಾಡುತ್ತಿದ್ದಳು. ಸ್ವಾಮಿಗಳೆಲ್ಲರೂ ಸದಾ ಹಸನ್ಮುಖಿಗಳು, ತಮಾಷೆ ನಗುಗಳಲ್ಲಿ ಮುಳುಗುತ್ತಿದ್ದವರು, ಮತ್ತೆ ಆಧ್ಯಾತ್ಮಿಕ ವರ್ಚಸ್ಸು ಉಳ್ಳವರಾಗಿದ್ದರು. ಆದರೆ ಗೇಲ್ ಸದಾ ಸಿಡಿಮಿಡಿ ಮಾಡುತ್ತಿದ್ದಳು, ಎಲ್ಲದರಿಂದಲೂ ಎಲ್ಲರ ಮೇಲೂ ಸಿಟ್ಟಿಗೇಳುತ್ತಿದ್ದಳು. ಉನ್ನತ ನೆಲೆಯಲ್ಲಿ ಇರುವವರಿಂದ ಅಪೇಕ್ಷಣೀಯವಾದ ಹೃದಯ ವೈಶಾಲ್ಯ ಅವಳಲ್ಲಿ ಇರಲೇಇಲ್ಲ. ವಾಸ್ತವದಲ್ಲಿ, ಗೇಲ್ ಸ್ತ್ರೀಯರಿಗೆ ಯಾವ ರೀತಿಯಲ್ಲೂ ಆದರ್ಶಪ್ರಾಯವಾಗಿರಲೇ ಇಲ್ಲ. ಸ್ತ್ರೀಯರ ಹಕ್ಕುಗಳ ಬಗ್ಗೆ ಅರಿವುಂಟುಮಾಡುವವರಲ್ಲಿ ಅಮ್ಮ ಮುಂಚೂಣಿಯಲ್ಲಿದ್ದಾರೆ. ಹೋಮ ಪೂಜೆ ಇತ್ಯಾದಿಗಳನ್ನು ಮಾಡುವ ಹಕ್ಕನ್ನು ನೀಡಿ ಭಾರತದಲ್ಲಿ ಮೊದಲ ಬಾರಿಗೆ ಅಮ್ಮ ಪೂಜಾರಿಣಿಯರನ್ನು ತಯಾರು ಮಾಡಿದರು. ಅಮ್ಮನ ಎಲ್ಲಾ ಸಂಸ್ಥೆಗಳಲ್ಲಿ ಮಹಿಳೆಯರು ಉನ್ನತ ಪದವಿಗಳಲ್ಲಿದ್ದಾರೆ. ಶಾಲೆಗಳ ಪ್ರಾಂಶುಪಾಲರಾಗಿದ್ದಾರೆ, ವಿಶ್ವವಿದ್ಯಾಲಯದಲ್ಲಿ ವಿವಿಧ ವಿಭಾಗಗಳ ಮುಖ್ಯಸ್ಥರಾಗಿದ್ದಾರೆ. ಮಹಿಳೆಯರ ಸಬಲೀಕರಣ ಯೋಜನೆಯಡಿಯಲ್ಲಿ ಭಾರತದಾದ್ಯಂತ ಮಹಿಳೇಯರಿಗೆ “ಲೈಫ್ ಸ್ಕಿಲ್ಸ್” (“ಜೀವನ ಕೌಶಲ್ಯವನ್ನು”) ಕಲಿಸುವಂಥ ಯೋಜನೆಗಳೂ ಚಟುವಟಿಕೆಗಳೂ ಇವೆ. ನಾನು ಸ್ವತಃ ಈ ಯೋಜನೆಗಳ ಮೂಲಕ ಹಲವಾರು ಮಹಿಳೆಯರ ಸಂಪರ್ಕದಲ್ಲಿದ್ದೇನೆ. ಅಮ್ಮ ಅಂತರ್ರಾಷ್ಟ್ರೀಯ ವೇದಿಕೆಗಳಲ್ಲಿ ಮಾಡಿರುವ ಭಾಷಣಗಳಲ್ಲಿ ಅನೇಕ ಭಾಷಣಗಳು ಮಹಿಳೆಯರ ಉದ್ಧಾರದ ಬಗ್ಗೆಯೇ ಇದೆ; ಮಹಿಳೆಯರಲ್ಲಿ ಆತ್ಮವಿಶ್ವಾಸವನ್ನು ಮೂಡಿಸುವ ಬಗೆ ಯಾವುದು ಎಂದು ಆ ಭಾಷಣಗಳಲ್ಲಿ ಅಮ್ಮ ಚರ್ಚಿಸುತ್ತಾರೆ. ಪಟ್ಟಿ ದೀರ್ಘವಿದೆ. ಇದನ್ನು ವಿಶದೀಕರಿಸುತ್ತಾ ಹೋದರೆ ಸೂರ್ಯನಿಗೆ ಮೋಂಬತ್ತಿ ಹಿಡಿದಂತಾಗುತ್ತದೆ ಅಷ್ಟೇ.

“ಅವರು ಮಾಡಿದಂಥ ಗಾಯ ಮಾಗಲು ಅಮ್ಮನ ಪ್ರೇಮ ಕರುಣೆಗಳ ಬೋಧನೆ ಮಾತ್ರವೇ ನನಗೆ ಸಹಾಯಮಾಡಿರುವುದು.”

ವರ್ಷಗಳು ಕಳೆದಂತೆ ಗೇಲ್ ಅದೆಷ್ಟು ಕಹಿಯಾಗಿಹೋಗಿದ್ದಳು ಎಂಬುದನ್ನು ಕಂಡು ನನಗೆ ಬಹಳ ಖೇದವಾಯಿತು. ಇವಳನ್ನು ನಾನು ಹಿಂದೆ ಅಭಿಮಾನದಿಂದ, ಗೌರವದಿಂದ ಕಾಣುತ್ತಿದ್ದೆ. ಹಾಗಿದ್ದೂ ಕಡೆಗೆ ಉಳಿದಿದ್ದು ಮರೆಯಲು ಕಷ್ಟವಾಗುವ ವೇದನಾಮಯ ಅನುಭವಗಳು ಮಾತ್ರವಾದವಲ್ಲಾ! ಅವಳ ಯಾವುದನ್ನು ಪ್ರತಿನಿಧಿಸುತ್ತಾಳೋ ಅದರ ಪ್ರತಿ ಗೌರವಾದರಗಳಿಂದ ಅವಳ ಪಾದವನ್ನು ನಾನು ಎಷ್ಟೋ ಸಲ ಮುಟ್ಟಿ ನಮಸ್ಕರಿಸಿದ್ದೆ; ಅದು ಅವಳು ಪರಮಪ್ರೇಮದ ಮಾರ್ಗದಲ್ಲಿರುವ ಸಂನ್ಯಾಸಿನಿ ಎಂಬ ಕಾರಣದಿಂದ. ಆದರೆ ಅವಳು ಈ ಮಾರ್ಗವನ್ನು ಪೂರ್ತಿ ಹಾಳುಗೆಡವಿದಳು; ತಾನು ಮಾಡಿದ ಪ್ರತಿಜ್ಞೆಗೆ ಅನುಸಾರ ಜೀವಿಸಲು ಅಸಮರ್ಥಳಾದಳು. ಬದಲಿಗೆ ಅದರ ದುರುಪಯೋಗ ಮಾಡಿಕೊಂಡು, ಇತರರಿಗೆ ವೇದನೆ ನೀಡಿದಳು. ಅವಳ ಮನಸ್ಸಿಗೆ ಶಾಂತಿ ದೊರಕಲಿ, ಅವಳು ಚೆನ್ನಾಗಿರುವಂತಾಗಲಿ! ಎಲ್ಲಕ್ಕೂ ಉತ್ತರ ದ್ವೇಷ ಸಿಟ್ಟಲ್ಲ, ಬದಲಿಗೆ ಪ್ರೇಮ ಎಂದು ಅವಳು ಅರಿತುಕೊಳ್ಳಲಿ.

ನಾನು ಈ ಲೇಖನವನ್ನು ಬರೆಯುತ್ತಿರುವ ಈ ಹೊತ್ತು ತಿಳಿಯಬಯಸುವುದೇನೆಂದರೆ ನಾನು ಯಾವ ರೀತಿಯಲ್ಲೂ ಅಧಿಕೃತವಾಗಿ ಅಮ್ಮನ ಆಶ್ರಮಕ್ಕೆ ಅಫಿಲಿಯೇಟ್ ಆಗಿಲ್ಲ. ಆಧ್ಯಾತ್ಮವನ್ನು ನನ್ನ ಮಾರ್ಗವಾಗಿ ಆರಿಸಿಕೊಂಡಿದ್ದೇನೆ. ಕಳೆದ ೨೨ ವರ್ಷಗಳಿಂದ ಅಮ್ಮನ ಜೊತೆ ಯಾತ್ರೆಗಳಲ್ಲಿ ಹೋಗಿ ಸೇವೆ ಮಾಡುತ್ತೇನೆ; ಇದು ನನ್ನದೇ ನಿರ್ಣಯ. ಅಮ್ಮ ಎಂದಿಗೂ ನನಗೆ “ಶಿಕ್ಷಣ ಮೊದಲ ಆದ್ಯತೆ ಆಗಿರಬೇಕು” ಎಂದೇ ಒತ್ತುನೀಡಿದ್ದಾರೆ. ನಾನೇ ನನ್ನ ಕಣ್ಣಿನಿಂದ ಪ್ರಪಂಚ ನೋಡಬೇಕು, ವಿಚಾರ ಮಾಡಿ ಸ್ವಂತವಾಗಿ ನಿರ್ಣಯ ಕೈಗೊಳ್ಳಬೇಕು ಎಂದು ಉತ್ತೇಜನ ನೀಡಿದ್ದಾರೆ. ಅಮ್ಮ ನನ್ನಲ್ಲಿನ ಸೃಜನಾತ್ಮಕ ಪ್ರತಿಭೆಗಳನ್ನು ಪೋಷಿಸಿದ್ದಾರೆ. ನಾನಿಂದು ಸ್ವತಂತ್ರಳೂ ಸಬಲಳೂ ಆಗಿರುವುದು ಅಮ್ಮನಿಂದಾಗಿಯೇ. ನನಗೇನಾದರೂ ಆಶ್ರಮದ ಕಡೆಯಿಂದ ಅಹಿತಕರವಾದ ಕಹಿ ಅನುಭವಗಳಾಗಿದ್ದರೆ ಅದು ಕೇವಲ ಗೇಲ್ ಳ ಬೋಧನೆಗಳಿಂದಾಗಿ.

Source: Anu Iyer’s Memories of Gayatri

ಸ್ವಾಮಿನಿ ಕೃಷ್ಣಾಮೃತ ಪ್ರಾಣಾ (ಸೌಮ್ಯ)

ಅಮ್ಮ ಮತ್ತು ಸ್ವಾಮೀಜಿಯರ ಒಡನಾಟದಲ್ಲಿ ಬೆಳೆಯುವುದೆಂದರೆ ಎಂಥಾ ಅಮೂಲ್ಯ ಉಡುಗೊರೆಯದು. ಅಮ್ಮನ ಜೊತೆ ನಾನು ೩೧ ವರ್ಷದಿಂದ ಇದ್ದೇನೆ. ಇಲ್ಲಿ ನಾವೆಲ್ಲರೂ ಅತ್ಯಂತ ಪವಿತ್ರಜೀವನವನ್ನು ನಡೆಸುತ್ತಿದ್ದೇವೆ ಎಂದು ಪ್ರಾಮಾಣಿಕವಾಗಿ ಹೇಳಬಲ್ಲೆ. ಇದನ್ನು ಅಲ್ಲಗಳೆಯುವ ಯಾವುದೇ ಆರೋಪಗಳು ಸುಳ್ಳು! ಅಮ್ಮನೊಂದಿಗಿನ ನಮ್ಮ ಜೀವನವು ಎಂದಿಗೂ ಆಧ್ಯಾತ್ಮಿಕ ತತ್ವಗಳಿಗೂ ನಿಸ್ವಾರ್ಥ ಸೇವೆಗೂ ಸಮರ್ಪಿತವಾಗಿವೆ.

“ಗುರುವು ತನ್ನ ಶಿಷ್ಯರಿಗೆ ತೋರುವ ಪ್ರೇಮಕ್ಕಿಂತಾ ಮಿಗಿಲಾದ ಶುದ್ಧಪ್ರೇಮವನ್ನು ಪ್ರಪಂಚ ಕಂಡಿಲ್ಲ. ಮಕ್ಕಳ ಮೇಲೆ ತಾಯಿಗಿರುವ ಪ್ರೇಮ, ಅದಕ್ಕಿಂತಾ ಮಧುರವಾದುದು ಪ್ರಪಂಚದಲ್ಲಿ ಇನ್ನೊಂದಿಲ್ಲ.”

ಗೇಲ್ ಗೆ ಅಮ್ಮನ ಮೇಲೆ ಪ್ರೇಮ ಇದ್ದ ಆ ಆರಂಭಕಾಲದಲ್ಲಿ ನಾನಿದ್ದೆ. ಅವಳ ಪೇಮ ಸತ್ತುಹೋದಾಗಲೂ ನಾನಿದ್ದೆ. ಅವಳಿಗೆ ಇಷ್ಟಾನಿಷ್ಟಗಳ ಬೆಂಕಿಯ ತಾಪ ಹತ್ತಿತ್ತು; ಅವಳು ಅದರಿಂದ ಪಾರಾಗಲಿಲ್ಲ. ಅವಳು ಬಿಟ್ಟುಹೋಗುವ ಹಿಂದಿನ ದಿನ ನನ್ನ ಬಳಿ ಬಂದು ನಾನು ಸಂತೋಷ ವಾಗಿರುವೆನಾ ಎಂದು ಕೇಳಿದಳು. ನಾನು ಪ್ರಾಮಾಣಿಕವಾಗಿ “ಹೌದು” ಎಂದೆ. ಅಮ್ಮನ ಜೊತೆಗಿನ ನನ್ನ ಸಂಪರ್ಕದಿಂದಾಗಿ ಅಮ್ಮನ ದಿವ್ಯಪ್ರೇಮದ ಸುಗಂಧವು ನನ್ನ ಜೀವನವನ್ನು ಅನುಗ್ರಹಿಸುತ್ತಿರುವುದನ್ನು ಸದಾ ಅನುಭವಿಸಿದ್ದೇನೆ.

“ಮೂರು ದಶಕಗಳ ಕಾಲ ಅಮ್ಮನ ಸನಿಹದಲ್ಲೇ ಇರುವುದು – ಇದು ನನ್ನ ಊಹೆಗೆ ನಿಲುಕದ, ಮಿಗಿಲಾದ ಅನುಗ್ರಹವಾಗಿದೆ.”

ಇನ್ನೊಬ್ಬರ ಜಾಗದಲ್ಲಿ ಇದ್ದು ನೋಡದ ಹೊರತು ಇನ್ನೊಬ್ಬರ ಮೇಲೆ ಟೀಕೆ ಮಾಡಲಾಗದು ಎಂದು ಜನ ಹೇಳುತ್ತಾರೆ. ನಾನು ಹೇಳುತ್ತೇನೆ, ಅವಳು ನಡೆದ ಮಾರ್ಗದಲ್ಲೇ ನಾನೂ ನಡೆದಿರುವೆ. ಆದರೆ ನನ್ನ ಅನುಭವ ಅವಳದಕ್ಕಿಂತಾ ತುಂಬಾ ಭಿನ್ನವಾದುದು. ಮೂರು ದಶಕಗಳ ಕಾಲ ಅಮ್ಮನ ಸನಿಹದಲ್ಲೇ ಇರುವುದು – ಇದು ನನ್ನ ಊಹೆಗೆ ನಿಲುಕದ, ಮಿಗಿಲಾದ ಅನುಗ್ರಹವಾಗಿದೆ.

ಜನ ಅಮ್ಮನ ಬಗ್ಗೆ ಏನೇ ಭಾವಿಸಿದರೂ ಸಹ, ಅಮ್ಮನ ನಿಸ್ವಾರ್ಥ ಪ್ರೇಮ ಮತ್ತು ಕರುಣೆ ಮಾತ್ರವೇ ಸ್ಥಿರವಾದುದು. ಅಮ್ಮನ ಮೇಲೆ ಪ್ರೇಮ ಕಳೆದುಕೊಂಡು ಆಶ್ರಮ ಬಿಡುವ ಜನ ಆಗಾಗ ಕಂಡುಬರುತ್ತಾರೆ. ಆದರೆ ಅನೇಕ ವರ್ಷಗಳ ನಂತರ, ತಾವೇ ಬಯಸಿ ಹಿಂತಿರುಗಿ ಬರುತ್ತಾರೆ. ಗೇಲ್ ಸಹ ಒಂದಾನೊಂದು ದಿನ “ನಾನು ಮರಳಿ ಬರಲೆ?” ಎಂದು ಕೇಳುವಂತಾಗುವಳೇನೋ!

– ಸ್ವಾಮಿನಿ ಕೃಷ್ಣಾಮೃತ ಪ್ರಾಣ

Source: A Letter from Swamini Krishnamrita Prana (Saumya)

ಅಮ್ಮನ ಆಶ್ರಮದ ಸ್ವಾಮಿ ಪರಮಾತ್ಮಾನಂದ ಪುರಿ (ನೀಲು) ಅವರು ಬರೆದ ಪತ್ರ.

ನಾನು ಆಧ್ಯಾತ್ಮಿಕ ಶೋಧನೆಯನ್ನು ಹದಿನೆಂಟನೆ ವಯಸ್ಸಿನಲ್ಲಿ ಆರಂಭಿಸಿದೆ. ಅಷ್ಟು ಚಿಕ್ಕವಯಸ್ಸಿನಲ್ಲೇ ಅಮೆರಿಕಾದಿಂದ ಭಾರತಕ್ಕೆ ಬಂದೆ. ಈಗ ನನಗೆ ೬೪ ವರ್ಷ ವಯಸ್ಸು. ನಾನು ತಿರುವಣ್ಣಾಮಲೈನಲ್ಲಿ ಇರುತ್ತಿದ್ದ ಕಾಲದಲ್ಲಿ ಗೇಲ್ ಟ್ರೆಡ್ವೆಲ್ ಅಲ್ಲಿಗೆ ಬಂದಾಗ, ೧೯೭೮ರಲ್ಲಿ ನನಗೆ ಅವಳ ಪರಿಚಯವಾಯಿತು. ನಾನಾಗ ಒಬ್ಬ ಬಹುಗೌರವಾನ್ವಿತ ಗುರುವಿನ ಬಳಿ ನೆಲೆಸಿದ್ದು, ಸಾಧನೆಗೆ ಅವರಿಂದ ಮಾರ್ಗದರ್ಶನ ಪಡೆಯುತ್ತಿದ್ದೆ; ಗೇಲ್ ಈ ಕಾರಣದಿಂದ ನನ್ನನ್ನು ಗೌರವದಿಂದ ಕಾಣುತ್ತಿದ್ದಳು. ತನಗೆ ಆಧ್ಯಾತ್ಮದಲ್ಲಿ ಎದುರಾಗುತ್ತಿದ್ದ ಪ್ರಶ್ನೆಗಳನ್ನು ನನ್ನ ಮುಂದಿರಿಸುತ್ತಿದ್ದಳು, ನಾನು ಅವಳಿಗೆ ಆ ವಿಷಯಗಳಲ್ಲಿ ಸಾಮಾನ್ಯ ರೀತಿಯಲ್ಲಿ ಮಾರ್ಗದರ್ಶನ ನೀಡುತ್ತಿದ್ದೆ.

೧೯೮೦ರ ಮೊದಲ ಭಾಗದಲ್ಲಿ ಅಮ್ಮನ ಆಶ್ರಮಕ್ಕೆ ಬಂದಾಗ ಅವಳು ಮುಗ್ಧಳಂತೆ, ಸಂಕೋಚದ ಸ್ವಭಾವದವಳಂತೆ ತೋರಿದಳು. ಆದರೆ ಬಹುಬೇಗ ಅವಳ ನಡವಳಿಕೆಯಲ್ಲಿ ಬದಲಾವಣೆ ಆಗುತ್ತಿರುವುದು ನನ್ನ ಗಮನಕ್ಕೆ ಬಂದಿತು. ಅವಳು ಪಟ್ಟಂತ ಸಿಟ್ಟಿಗೇಳುವುದು, ಕೆಟ್ಟದಾಗಿ ನಡಕೊಳ್ಳುವುದು ನೋಡಿ ಅವಳ ಅಪಕ್ವತೆಯನ್ನು ಕಂಡು ಅಚ್ಚರಿಯೇ ಆಯಿತು. ಅಮ್ಮನ ವಿಷಯದಲ್ಲಿ ಬೇಸರ ಅಥವಾ ಹೊಟ್ಟೆಕಿಚ್ಚು ಬಂತೆಂದರೆ ಒಂದು ಮಗುವಿನ ಹಾಗೆ ಹಟಮಾಡುತ್ತಾ ಪ್ರತಿಕ್ರಿಯಿಸುತ್ತಿದ್ದಳು; ಯಾವುದೇ ಕಾರಣಕ್ಕೆ ಅಮ್ಮನ ಮೇಲೆ ಸಿಟ್ಟು ಮಾಡಿಕೊಂಡರೆ ಆಗ ನಾವಿರುತ್ತಿದ್ದ ಸಣ್ಣ ಗುಡಿಸಿಲಿನ ತಟಿಕೆಗಳನ್ನೇ ಕಾಲಲ್ಲಿ ಒದೆಯುತ್ತಿದ್ದಳು. ಅಲ್ಲಿನ ಪರಿಸ್ಥಿತಿಗೆ ಒಗ್ಗಿಕೊಂಡು ಜೀವನ ಸುಗಮ ಆಗುತ್ತಿದ್ದಂತೆ ಅವಳ ವ್ಯಕ್ತಿತ್ವದ ಬೇರೊಂದು ಮಗ್ಗಲು ಹೊರಗೆ ಪ್ರಕಟವಾಗತೊಡಗಿತು. ಮೊದಮೊದಲು ಅಪಕ್ವತೆ ಎಂದು ಭಾವಿಸಿದ್ದೆ, ಆದರೆ ಕಾಲ ಸರಿದಂತೆ ಅದು ಅಷ್ಟು ಸರಳವಾದ ಸಮಸ್ಯೆಯಲ್ಲ ಎಂದು ಗೊತ್ತಾಯಿತು. ಜನರನ್ನು ತಮಾಷೆ ಮಾಡತೊಡಗಿದಳು. ವ್ಯಕ್ತಿಯ ಎದುರಿಗೇ ಅವರ ಮುಖದಲ್ಲೇ ಒಂದಿಷ್ಟೂ ವಿವೇಕವಿಲ್ಲದೆ ಅಣಕಿಸತೊಡಗಿದಳು. ನನ್ನನ್ನು ಮೊದಲುಗೊಂಡು ಎಲ್ಲರನ್ನೂ ತನ್ನ ಈ ಅಪಕ್ವ ನಡವಳಿಕೆಗೆ ಆಹಾರವಾಗಿಸಿಕೊಳ್ಳುತ್ತಿದ್ದಳು. ಅವಳನ್ನು ಯಾರಾದರೂ ಎದುರಿಗೇ ತಿದ್ದಿದರೆ, ಅದು ನ್ಯಾಯಯುತವಾದ ಟೀಕೆಯಾಗಿದ್ದರೂ ಸಹ, ಸಿಕ್ಕಾಪಟ್ಟೆ ಸಿಟ್ಟಿನಿಂದ ಅಸಾಮಾನ್ಯ ಕುಹಕ ಕಹಿತನಗಳನ್ನು ಪ್ರದರ್ಶಿಸುತ್ತಿದ್ದಳು. ಯಾರಾದರೂ ಟೀಕೆ ಮಾಡಿದಾಗ ಜನರು ತಟ್ಟನೆ ಪ್ರತಿಕ್ರಿಯಿಸುವುದು ಸಾಮಾನ್ಯ; ಆದರೆ ಗೇಲ್ ಳ ಪ್ರತಿಕ್ರಿಯೆಗಳು ಹೆಚ್ಚು ಹೆಚ್ಚು ತೀಕ್ಷ್ಣವಾಗುತ್ತಿದ್ದವು; ನನ್ನ ಮೇಲೆ ಇದ್ದ ಗೌರವ ಮಾಸಿಹೋಯಿತು. ಅವಳ ಸ್ವಭಾವ ಒರಟಾಗುತ್ತಲೇ ಇತ್ತು. ಆದರೂ ನಾನು, ಅಮ್ಮನ ಸಂಪರ್ಕದಿಂದಾಗಿ ಅವಳು ಇಂದಲ್ಲಾ ನಾಳೆ ತನ್ನನ್ನು ತಾನೇ ಪರಾಮರ್ಶಿಸಿ ನೋಡಿಕೊಳ್ಳುತ್ತಾಳೆ, ತಪ್ಪುಗಳನ್ನು ತಿದ್ದಿಕೊಳ್ಳುತ್ತಾಳೆ ಎಂದೇ ಭಾವಿಸಿದೆ. ಆದರೆ ಇದು ಎಂದಿಗೂ ಆಗಲಿಲ್ಲ. ಅವಳು ಆಶ್ರಮ ಬಿಡುವವರೆಗೂ ಅವಳ ಈ ಸ್ವಭಾವ ಮುಂದುವರಿದೇ ಇತ್ತು, ಹೆಚ್ಚಾಗುತ್ತಲೇ ಹೋಗಿತ್ತು.

“ಸುಲಭವಾಗಿ ನನಗೆ ಮೇಲೇಳಲು ಸಾಧ್ಯವಾಗದ ಕಾರಣ ಒಂದು ಲೋಟ ನೀರು ಕೊಡುವೆಯಾ ಎಂದು ಗೇಲ್ ಳನ್ನೇ ಕೇಳಿದೆ. ಅವಳ ಮನಸ್ಸಿನ ಸ್ಥಿತಿ (ಮೂಡ್) ತಕ್ಷಣ ಬದಲಾಯಿತು. “ಬೇಕಿದ್ದರೆ ನೀನೇ ಎದ್ದು ತೆಗೆದುಕೊ” ಎಂದು ಕೂಗಾಡಿ, ಕೈಯ್ಯಲ್ಲಿದ್ದ ಕೊಳೆಯಾದ, ಒದ್ದೆಯಾದ ನೆಲ ಒರೆಸುವ ಬಟ್ಟೆಯನ್ನು ನನ್ನ ಮುಖಕ್ಕೆ ಎಸೆದು ಹೋಗಿಬಿಟ್ಟಳು.”

ಪ್ರಾರಂಭದಲ್ಲಿ, ಅಮ್ಮನ ತಂದೆತಾಯಿ ಮತ್ತು ಸೋದರವರ್ಗವು ವಾಸಿಸುತ್ತಿದ್ದ ಮನೆಯನ್ನು ಬಿಟ್ಟರೆ, ನಾವೆಲ್ಲರೂ ಒಂದು ಪುಟ್ಟ ಗುಡಿಸಿಲಿನಲ್ಲಿ ಇರುತ್ತಿದ್ದೆವು. ಒಂದು ದಿನ ತೀವ್ರ ತಲೆಶೂಲೆಯಿಂದಾಗಿ (ಮೈಗ್ರೇನ್) ನಿತ್ರಾಣಗೊಂಡು ಗುಡಿಸಿಲಿನಲ್ಲಿ ಮಲಗಿದ್ದೆ. ತುಂಬಾ ಬಾಯಾರಿಕೆ ಆಗುತ್ತಿತ್ತು. ಆ ಸಮಯದಲ್ಲಿ, ಗೇಲ್ ಒಂದು ಹಳೇಯ ಬಟ್ಟೆಯಿಂದ ನೆಲವನ್ನು ಒರೆಸುತ್ತಿದ್ದಳು. ಸುಲಭವಾಗಿ ನನಗೆ ಮೇಲೇಳಲು ಸಾಧ್ಯವಾಗದ ಕಾರಣ ಒಂದು ಲೋಟ ನೀರು ಕೊಡುವೆಯಾ ಎಂದು ಗೇಲ್ ಳನ್ನೇ ಕೇಳಿದೆ. ಅವಳ ಮನಸ್ಸಿನ ಸ್ಥಿತಿ (ಮೂಡ್) ತಕ್ಷಣ ಬದಲಾಯಿತು. “ಬೇಕಿದ್ದರೆ ನೀನೇ ಎದ್ದು ತೆಗೆದುಕೊ” ಎಂದು ಕೂಗಾಡಿ, ಕೈಯ್ಯಲ್ಲಿದ್ದ ಕೊಳೆಯಾದ, ಒದ್ದೆಯಾದ ನೆಲ ಒರೆಸುವ ಬಟ್ಟೆಯನ್ನು ನನ್ನ ಮುಖಕ್ಕೆ ಎಸೆದು ಹೋಗಿಬಿಟ್ಟಳು. ಸ್ವಾಭಾವಿಕವಾಗಿ, ನಾನು ಬೇಸರದಿಂದ ಕುಗ್ಗಿ ಹೋದೆ, ಎದ್ದು ನಿಧಾನವಾಗಿ ತಟ್ಟಾಡುತ್ತಾ ಸ್ವಲ್ಪ ಆಚೆಗಿದ್ದ ಬಾತ್ ರೂಮಿನ ಕಡೆ ಹೆಜ್ಜೆ ಹಾಕಲು ಪ್ರಯತ್ನಿಸತೊಡಗಿದೆ. ಮಧ್ಯಾಹ್ನದ ಹೊತ್ತು. ತುಂಬಾ ಧಗೆ ಇತ್ತು. ಕಳರಿಯ ಹಿಂದೆ ನೆರಳಿನಲ್ಲಿ ಕೊಂಚ ವಿಶ್ರಮಿಸುವಾ ಎಂದು ನಿಂತೆ. ನನ್ನ ಒದ್ದಾಟವನ್ನು ಅಮ್ಮ ಅನತಿದೂರದಿಂದ ನೋಡಿದರು. ಏನಾಯಿತು ಎಂದು ಕೇಳುತ್ತಾ ಅಮ್ಮ ನನ್ನ ಬಳಿಗೆ ಬಂದರು. ಆಗ ತಾನೇ ಆಗಿದ್ದನ್ನು ನಾನು ಅಮ್ಮನಿಗೆ ನಿವೇದಿಸಿದೆ. ಗೇಲ್ಳ ಹೊಸ ಕಾರುನಾಮೆಯನ್ನು ಕೇಳಿ ಅಮ್ಮನಿಗೆ ದುಃಖವಾಯಿತು. ಅಮ್ಮ ನನಗೆ ಹೇಳಿದರು, ಗೇಲ್ ಒಬ್ಬ ಏನೂ ತಿಳಿಯದ ಮಗು ಎಂದು ಭಾವಿಸಿಕೋ. ಅವಳು ನಿನಗೆ ಬೇಸರ ಮಾಡಿದರೆ ನೀನೇನೂ ಪ್ರತಿಕ್ರಿಯೆ ತೋರಿಸಬೇಡ. ನೀನೇನಾದರೂ ಅವಳಿಗೆ ಪ್ರತಿಕ್ರಿಯೆ ತೋರಿಸಿದರೆ ಆಗ ನಿನಗೂ ಅವಳಿಗೂ ಅಜ್ಞಾನದಲ್ಲಿ ವ್ಯತ್ಯಾಸ ಇಲ್ಲವಾಗುತ್ತದೆ – ಎಂದು. ಇದು ನನಗೆ ಸಮಂಜಸವೆನಿಸಿತು. ತಾಳ್ಮೆ ಮತ್ತು ನಿಗ್ರಹಗಳನ್ನು ಅಭ್ಯಾಸಮಾಡಲು ನಿರ್ಧರಿಸಿದೆ. ಖಂಡಿತವಾಗಿಯೂ, ಗೇಲ್ ಇರುವ ಪರಿಸರದಲ್ಲಿ ಈ ಬೋಧನೆಗಳನ್ನು ಅಭ್ಯಾಸಮಾಡಲು ಸಂದರ್ಭಗಳಿಗೆ ಕೊರತೆಯೇ ಇರಲಿಲ್ಲ.

ಅವಳ ಬಗ್ಗೆ ನನಗೆ ಕನಿಕರವೆನಿಸುತ್ತಿತ್ತು ಕಾರಣ, ತಿರುವಣ್ಣಾಮಲೈನಲ್ಲಿ ನನ್ನ ಆಧ್ಯಾತ್ಮ ಗುರುವಿನ ಸೇವೆಯನ್ನು ಮಾಡಿದ ನನ್ನ ಅನುಭವದಿಂದಾಗಿ, ಒಬ್ಬ ಮಹಾತ್ಮರ ಸೇವೆ ಎಂದರೆ ತಪಸ್ಸಿನ ಹಾಗೆ; ಅದು ಅಪಾರ ಆಧ್ಯಾತ್ಮಿಕ ಸಾಧನೆಗೆ ಸಮಾನವೆಂದು ನನಗೆ ಗೊತ್ತಿತ್ತು. ಅಂಥ ದಿವ್ಯಾತ್ಮರ ಸಂಪರ್ಕದಿಂದಾಗಿ ಸಿಟ್ಟುಸೆಡವು ಮುಂತಾದ ಭಕ್ತನ ಮನದಾಳದಲ್ಲಿರುವ ದುರ್ಗುಣಗಳು ಮೇಲೆ ಬಂದು, ವ್ಯಕ್ತಿಗೆ ಆಂತರಿಕ ತಳಮಳವನ್ನು ಉಂಟಾಗಬಹುದು. ಅದು ಆ ವ್ಯಕ್ತಿಯ ನಡವಳಿಕೆಯಲ್ಲೂ ಬಾಹ್ಯವಾಗಿ ಪ್ರಕಟವಾಗಬಹುದು. ಆದರೆ, ಕೊನೆಯಲ್ಲಿ, ಆ ಭಕ್ತನಿಗೆ ಆಗುತ್ತಿರುವುದು ಏನು ಎಂದು ಅರ್ಥವಾಗುತ್ತದೆ ಹಾಗು ನಿಗ್ರಹವನ್ನು ಅಭ್ಯಾಸಮಾಡಿ, ಆ ವಾಸನೆಗಳನ್ನು ತಿರಸ್ಕರಿಸುತ್ತಾ ತನ್ನಿಂದ ದೂರಮಾಡುತ್ತಾನೆ. ಅವು ಹಿಂದೆ ಕುಡಿದ ವಿಷದ ಹಾಗೆ; ಇಂದು ಆರೋಗ್ಯವಾಗಿ ಇರಲು ಬಿಡುವುದಿಲ್ಲ. ಅವನ್ನು ಬೇಧಿಗೆ ತೆಗೆದುಕೊಂಡೇ ಹೊರಗೆ ಹಾಕಬೇಕು. ಇನ್ನೊಂದು ರೀತಿಯಲ್ಲಿ ಹೇಳಬೇಕೆಂದರೆ, ಈ ದುರ್ವಾಸನೆಗಳು ನಮ್ಮ ಅಜ್ಞಾನದಿಂದಾಗಿ ಗತದಲ್ಲೇ ನಮ್ಮ ಒಳಗೆ ಸೇರಿಕೊಂಡುಬಿಟ್ಟಿವೆ. ಅವು ಮೇಲೆ ಬರಲೇ ಬೇಕು, ಚಿತ್ತಶುದ್ಧಿ – ಮನಃಶುದ್ಧಿ ಆಗಬೇಕೆಂದರೆ ಅವನ್ನು ನಾಶಮಾಡಲೇ ಬೇಕು. ಅಮ್ಮನಿಗೆ ಈ ಎಲ್ಲವೂ ಚೆನ್ನಾಗಿ ತಿಳಿದಿತ್ತು. ನಮ್ಮ ಮನಸ್ಸಿನ ದುರ್ಗುಣ ದುಶ್ಚಿಂತೆಗಳ ಬಗ್ಗೆ ಹಾಗು ಆಂತರಿಕ ಪ್ರಯಾಸಗಳ ಬಗ್ಗೆ ನಾವು ಎಚ್ಚರವಾಗಿರಬೇಕು ಎಂದು ಅಮ್ಮ ಯಾವಾಗಲೂ ಕಲಿಸುತ್ತಿದ್ದರು. ಮೊದಲ ದಿನಗಳಲ್ಲಿಯೇ, ಅಮ್ಮ ನನಗೂ ಗೇಲ್ ಗೂ ತಿಳಿಸಿದ್ದರು: ಪ್ರಾರಂಭದಲ್ಲಿ ಗುರು ಶಿಷ್ಯನಿಗೆ ತನ್ನ ದಿವ್ಯತೆಯನ್ನು ಸ್ವಲ್ಪ ತೋರಿಸುತ್ತಾನೆ, ನಂತರ ಶಿಷ್ಯನ ವಾಸನೆಗಳನ್ನು ಹೊರತರಲು, ಅವನ ಚಿತ್ತಶುದ್ಧಿ ಆಗಲು ಏನು ಮಾಡಬೇಕೋ ಅದನ್ನೇ ಗುರು ಮಾಡುವನು ಎಂದು ಅಮ್ಮ ತಿಳಿಸಿದ್ದರು. ಇಂಥ ಬೋಧನೆಗಳು ನಮ್ಮ ಆಧ್ಯಾತ್ಮಿಕ ಪ್ರಗತಿಗಾಗಿ, ನಮ್ಮ ವಿಕಾಸಕ್ಕಾಗಿ; ಹಾಗು ಅವುಗಳನ್ನು ಪಾಠಗಳಾಗಿ ಕಂಡು ಅದರಿಂದ ನಾವು ಕಲಿಯಬೇಕಿದೆ.

ಈ ಹಿಂದೆಯೇ ನಾನು ಹೇಳಿದಂತೆ, ಗೇಲ್ ಗೆ ಸಹಾನುಭೂತಿಯನ್ನು ತೋರುವುದನ್ನು ನಾನು ಮುಂದುವರೆಸಿದೆ. ಆದರೆ ಕಾಲಸರಿದಂತೆ, ಅವಳ ಸಿಟ್ಟು, ಒರಟುತನ ಮತ್ತೆ ಮೂರ್ಖತನಗಳು ಹಾಗೇ ಇದ್ದವು, ಮಾತ್ರವಲ್ಲ ಬಹುಶಕ್ತವಾಗಿ ಬೆಳೆದವು. ಎಂಥಾ ಹಟಮಾರಿ ಇವಳು ಎಂದು ಅಚ್ಚರಿಗೊಳ್ಳುತ್ತಿದ್ದೆ, ಆದರೆ ಅದರ ಬಗ್ಗೆ ನಾನೇನೂ ಮಾಡಲಾರದಾಗಿದ್ದೆ. ಮೌನವಾಗಿ ಅದನ್ನು ಗಮನಿಸುತ್ತಿದ್ದೆ. ಕಾಲಕ್ರಮೇಣ, ಅವಳಿಂದ ದೂರವಿರುವುದೇ ಉತ್ತಮ ಎಂದು ನಿರ್ಧರಿಸಿದೆ ಮತ್ತು ಅವಳು ಆಶ್ರಮದಲ್ಲಿ ಇದ್ದ ಕಡೆಯ ಕೆಲ ವರ್ಷಗಳಲ್ಲಿ ಅವಳ ಬಳಿ ಸಂಪರ್ಕವನ್ನು ಆದಷ್ಟು ಕಡಿಮೆಯೇ ಇಟ್ಟುಕೊಂಡೆ.

“ಈ ಆಪಾದನೆಗಳನ್ನು ಓದಿದರೆ ಅವಳು ಮಾನಸಿಕವಾಗಿ ಅಸ್ವಸ್ಥಳು, ಗೊಂದಲಕ್ಕೆ ಈಡಾಗಿದ್ದಾಳೆ ಎಂದು ನನಗೆ ಅನ್ನಿಸುತ್ತದೆ. ತನ್ನ ಪುಸ್ತಕದಲ್ಲಿ ಅವಳೇ ಹೇಳಿಕೊಂಡಿದ್ದಾಳೆ, “ನನ್ನ ನಂಬಿಕೆಗಳನ್ನು ವಿಮರ್ಶಿಸಿಕೊಳ್ಳುವಲ್ಲಿ ಅಥವಾ ಯಾವುದು ನಿಜ ಯಾವುದು ನನ್ನ ಮನಸ್ಸಿನ ಕಲ್ಪನೆ ಎಂದು ನಿರ್ಧರಿಸುವಲ್ಲಿ ನನಗೆ ಅತೀವ ಖೇದವುಂಟಾಗುತ್ತಿದೆ” ಎಂದು. ಈ ಮಾತು ಗೇಲ್ ಳ ಗ್ರಹಿಕೆ ತಪ್ಪು ಎಂಬ ವಿಚಾರದ ಮೇಲೆ ಬಹಳ ಬೆಳಕನ್ನು ಚೆಲ್ಲುತ್ತದೆ.”

ಅವಳು ಆಶ್ರಮದಲ್ಲಿದ್ದ ಆ ಇಪ್ಪತ್ತು ವರ್ಷಗಳಲ್ಲಿ, ಅಮ್ಮ ಮತ್ತು ಅಮ್ಮನ ಶಿಷ್ಯರ ಮೇಲೆ ತನ್ನ ಪುಸ್ತಕದಲ್ಲಿ ಅವಳು ಆಪಾದನೆ ಮಾಡಿರುವ ಶೋಷಣೆಯ ವಿಷಯವೇ ನನ್ನ ಅರಿವಿಗೆ ಬಂದಿಲ್ಲ. ಈ ಆಪಾದನೆಗಳನ್ನು ಓದಿದರೆ ಅವಳು ಮಾನಸಿಕವಾಗಿ ಅಸ್ವಸ್ಥಳು, ಗೊಂದಲಕ್ಕೆ ಈಡಾಗಿದ್ದಾಳೆ ಎಂದು ನನಗೆ ಅನ್ನಿಸುತ್ತದೆ. ತನ್ನ ಪುಸ್ತಕದಲ್ಲಿ ಅವಳೇ ಹೇಳಿಕೊಂಡಿದ್ದಾಳೆ, “ನನ್ನ ನಂಬಿಕೆಗಳನ್ನು ವಿಮರ್ಶಿಸಿಕೊಳ್ಳುವಲ್ಲಿ ಅಥವಾ ಯಾವುದು ನಿಜ ಯಾವುದು ನನ್ನ ಮನಸ್ಸಿನ ಕಲ್ಪನೆ ಎಂದು ನಿರ್ಧರಿಸುವಲ್ಲಿ ನನಗೆ ಅತೀವ ಖೇದವುಂಟಾಗುತ್ತಿದೆ” ಎಂದು. ಈ ಮಾತು ಗೇಲ್ ಳ ಗ್ರಹಿಕೆ ತಪ್ಪು ಎಂಬ ವಿಚಾರದ ಮೇಲೆ ಬಹಳ ಬೆಳಕನ್ನು ಚೆಲ್ಲುತ್ತದೆ.

ಡಿಪ್ರೆಶನ್ ಎಂಬ ಮನಸ್ಥಿತಿಯು ನಿರಂತರವಾದ ನೆಗೆಟೀವ್ ಚಿಂತೆಗಳನ್ನು, ವೇದನಾಮಯ ಮತ್ತೆ ಸಿಡಿಮಿಡಿಗೊಳ್ಳುವ ಮನಸ್ಥಿತಿಯನ್ನು ಉಂಟುಮಾಡಬಲ್ಲದು. ಡಿಪ್ರೆಶನ್ ಇರುವ ವ್ಯಕ್ತಿ, ಹತ್ತಿರದವರನ್ನೇ ಸಂಶಯದಿಂದ, ನೆಗೆಟೀವ್ ದೃಷ್ಟಿಯಿಂದ ಗ್ರಹಿಸುವರು. ಇಲ್ಲದ ಸಂದರ್ಭಗಳನ್ನು ಇದೆ ಎಂದು ತಾವೇ ಭಾವಿಸಿಕೊಳ್ಳುವರು. ವಿವಿಧ ಕಾರಣಗಳಿಂದ ಮಿದುಳಿನ ರಸಾಯನಿಕಗಳ ಸಮತೋಲನ ತಪ್ಪಿದಾಗ ಹೀಗೆ ಆಗುವುದುಂಟು. ಔಷಧಿಗಳಿಂದ ಸಾಕಷ್ಟು ಸಹಾಯವಾಗುತ್ತದೆ ಆದರೆ ತಾನು ಔಷಧಿಯ ಮೊರೆಹೋಗಬೇಕು ಎಂದು ವ್ಯಕ್ತಿ ಒಪ್ಪಿಕೊಳ್ಳಲು, ಅಪಮಾನಕರ ಎನಿಸಿ, ಸಾಮಾನ್ಯವಾಗಿ ಜನರಿಗೆ ಕಷ್ಟವಾಗುತ್ತದೆ. ಇಲ್ಲಿಂದ ಹೋದಾಗ ಗೇಲ್ಳ ಪರಿಸ್ಥಿತಿ ಬಹಳ ಕೆಟ್ಟಿತ್ತು, ಸರಿ. ಆದರೆ ಇಷ್ಟ ಹೊಲಸಾದ ಪುಸ್ತಕ ಬರೆಯುವಳು ಮತ್ತೆ ಅದನ್ನು ಪ್ರೊಮೋಟ್ ಮಾಡಲು ಇಷ್ಟು ಅತಿರೇಕಗಳಿಗೆ ಹೋಗಬಲ್ಲಳು ಎಂಬುದು ಮಾತ್ರ ನಾನು ಎಂದಿಗೂ ಭಾವಿಸಿರಲಿಲ್ಲ. ಅವಳ ಮನಸ್ಸಿನಲಿ ಸಿಟ್ಟು ದ್ವೇಷ ಅಪಾರವಾಗಿ ಇತ್ತಾದರೂ ತನ್ನನ್ನೇ ನಾಶಮಾಡುವಂಥ, ಆಧ್ಯಾತ್ಮದಲ್ಲಿ ಆರಂಭಿಗರೂ ಆಗಿಲ್ಲದ ಅಥವಾ ಆಧ್ಯಾತ್ಮದಲ್ಲಿ ಇನ್ನೂ ಸ್ಥಿರವಾಗಿಲ್ಲದಂಥ ಜನರ ವಿಶ್ವಾಸವನ್ನು ಕೆಡಿಸುವಂಥ ಪುಸ್ತಕ ಬರೆಯುತ್ತಾಳೆ ಎಂದುಕೊಂಡಿರಲಿಲ್ಲ. ಅಮ್ಮನ ಮಹಾನತೆಯ ಬಗ್ಗೆ ಖಂಡಿತಾ ಅವಳಿಗೆ ಒಂದಿಷ್ಟಾದರೂ ತಿಳಿದಿತ್ತು. ಅವಳು ಬಿಟ್ಟಮೇಲೆ ಅವಳಿಗೆ ಸಲ್ಲದ ಸಹಾನುಭೂತಿ ತೋರಿದ ಕೆಲ ಜನ, ಇಂಥ ಒಂದು ಪುಸ್ತಕ ಬರಿ, ಪ್ರಕಟಿಸು, ಹಾಗೆ ಮಾಡುವುದೇ ಸರಿ ಎಂದು ಪ್ರೋತ್ಸಾಹಿಸಿದಂತೆ ನನಗೆ ತೋರುತ್ತದೆ. ಅವರಲ್ಲಿ ಕೆಲವರು ಇಷ್ಟುಹೊತ್ತಿಗಾಗಲೇ ಗುರು ವಿಷಯಕ್ಕೆ ವಿರೋಧವಾದ ಪ್ರಕಟಣೆಗಳನ್ನು ಮಾಡಿದ್ದರು; ಗೇಲ್ ಳ ದೌರ್ಬಲ್ಯವನ್ನು ದುರುಪಯೋಗ ಪಡಿಸಿಕೊಂಡು ಸ್ವಾರ್ಥದಿಂದ ಅವಳ ಪುಸ್ತಕವನ್ನು ಮಾರುಕಟ್ಟೆಗೆ ತಳ್ಳುತ್ತಿರಬಹುದು. ಪುಸ್ತಕದ ಕಡೆಯಲ್ಲಿ ಗೇಲ್ ಕೆಲವು ಅಂಥ ಐಡಿಯಾಗಳನ್ನು ತೆರೆದಿಟ್ಟಿದ್ದಾಳೆ; ಇದರ ಹಿಂದೆ ಏನೋ ಒಂದು ದುರುದ್ದೇಶ ಇದೆ ಎನ್ನುವುದು ಸ್ಪಷ್ಟ.

– ಸ್ವಾಮಿ ಪರಮಾತ್ಮಾನಂದ ಪುರಿ

Source: A Letter from Swami Paramatmananda Puri (Nealu)

ಅಮ್ಮನ ರೂಮು ನಿಜವಾಗಿಯೂ ಹೇಗಿದೆ?


ನನ್ನ ಹೆಸರು ಸರಯೂ (ಕಿಂಬರ್ಲಿ ಜಾನ್ಸನ್). ನಾನು ಅಮೆರಿಕದ ಪ್ರಜೆಯಾಗಿದ್ದೂ ೧೯೯೩ರಲ್ಲಿ ಅಮ್ಮನ ಆಶ್ರಮ ಸೇರಿದೆ. ಮಧ್ಯೆ ಸ್ವಲ್ಪ ಕಾಲ ಪಶ್ಚಿಮದೇಶದಲ್ಲಿದ್ದೆ; ಅಷ್ಟು ಬಿಟ್ಟರೆ ನಾನು ಆಶ್ರಮದಲ್ಲೇ ಇರುವುದು. ಕಳೆದ ಆರು ವರ್ಷಗಳಿಂದ ಅಮ್ಮ ಯಾತ್ರೆ ಹೋದಾಗಲೆಲ್ಲಾ ಆಶ್ರಮದಲ್ಲಿ ಅಮ್ಮನ ಕೊಠಡಿಯಲ್ಲಿ ಇರುವ ಭಾಗ್ಯ ನನ್ನದಾಗಿದೆ. ಅಂದರೆ ವರ್ಷಕ್ಕೆ ಸುಮಾರು ಆರು ತಿಂಗಳು ನಾನು ಅಮ್ಮನ ಕೋಣೆಯಲ್ಲಿರುತ್ತೇನೆ. ಅಮ್ಮ ಚಿನ್ನ, ಬೆಳ್ಳಿ ಹಾಗು ನಿಧಿಗಳಿಂದ ತುಂಬಿದ, ಅತ್ಯಂತ ಭೋಗಪೂರ್ಣವಾದ ಹಾಸಿಗಯ ಮೇಲೆ ಮಲಗುತ್ತಾರೆ ಎಂಬ ಗುಸುಗುಸು ಸುದ್ದಿ ಹರಡುತ್ತಿದೆ ಎಂದು ಕೇಳಿ ಅಮ್ಮನ ಕೋಣೆಯ ಬಗ್ಗೆ ಇರುವುದನ್ನು ಹೇಳಲೇ ಬೇಕು, ಇದು ನನ್ನ ಕರ್ತವ್ಯ ಎಂದು ಭಾವಿಸಿ ಬರೆಯುತ್ತಿದ್ದೇನೆ. ಅದು ಸಾರಾಸಗಟು ಸುಳ್ಳು. ನಾನು ಅಮ್ಮನ ಕೋಣೆಯಲ್ಲಿರುವ ಎಲ್ಲಾ ಬೀರು, ಕ್ಯಾಬಿನೆಟ್, ಡ್ರಾಯರ್, ಕ್ಲೋಸೆಟ್ ಗಳನ್ನೂ ತೆರೆಯಬಹುದಾಗಿದೆ; ಎಲ್ಲದರ ಕೀಲಿಕೈಗಳೂ ನನ್ನಲ್ಲಿವೆ. ನಾನು ಮಾತ್ರವಲ್ಲ; ಕೆಲವು ಇತರ ವೆಸ್ಟರ್ನ್ ಮಕ್ಕಳಿಗೂ ಈ ಸ್ವಾತಂತ್ರ್ಯ ಇದೆ. ಯಾರಿಗೂ ಕಾಣಬಾರದು ಎಂದು ಇಲ್ಲಿ ಏನನ್ನೂ ಅಡಗಿಸಿ ಕೂಡಿಹಾಕಿ ಇಟ್ಟಿಲ್ಲ. ನಾವು ಯಾರೂ ಅಸಾಮಾನ್ಯವಾದ ಏನನ್ನೂ, ಅತಿ ಅಮೂಲ್ಯವಾದ ಏನನ್ನೂ, ಅನಾವಶ್ಯಕವಾದ ಬೆಲೆಬಾಳುವ ಯಾವುದೇ ವಸ್ತುವನ್ನು ಇದುವರೆಗೂ ಅಮ್ಮನ ಕೋಣೆಯಲ್ಲಿ ಕಂಡಿಲ್ಲ.
ವಾಸ್ತವವಾಗಿ ಅಮ್ಮ ಮಲಗಲು ಬಳಸುವುದು ಒಂದು ಪುಟ್ಟ ಕೋಣೆಯನ್ನು. ಅಮ್ಮ ಮಲಗುವುದು ನೆಲದ ಮೇಲೆ, ಒಂದು ಚಾಪೆ ಹಾಸಿಕೊಂಡು. ಅಮ್ಮ ಬಳಸುವ ಸ್ಥಳವು ಆಶ್ರಮದ ಫ್ಲಾಟುಗಳಲ್ಲಿ ಇರುವ ಸ್ಥಳಕ್ಕಿಂತಲೂ ಚಿಕ್ಕದು. ಇನ್ನೊಂದು ಕೋಣೆ ಅಮ್ಮನ ಕೋಣೆಯ ಹೊರಗಿದೆ; ಅದೂ ಸರಳವಾದುದು. ಅಲ್ಲಿ ಅಮ್ಮ ಕೆಲವು ಸಲ ಭಕ್ತರನ್ನು ಸ್ವೀಕರಿಸುತ್ತಾರೆ, ಮತ್ತೆ ಅಲ್ಲಿ ಮೀಟಿಂಗ್ ಗಳನ್ನು ನಡೆಸುತ್ತಾರೆ. ಎಲ್ಲಾ ಸರಿ, ಆದರೆ ಅಮ್ಮ ತಮ್ಮ ಕೋಣೆಯಲ್ಲಿ ಕಳೆಯುವ ಸಮಯವೇ ಅತ್ಯಲ್ಪ ಎಂದು ನೆನಪಿಡಿರಿ.
ಗೇಲ್ ಬರೆದಿರುವ ಪುಸ್ತಕದ ತಿರುಳು ಮತ್ತು ವಾಸ್ತವತೆ ಹೀಗೆ ಪರಸ್ಪರ ವಿರುದ್ಧವಾಗಿವೆ.

-ಸರಯೂ (ಕಿಂಬರ್ಲಿ ಜಾನ್ಸನ್)

Source: What Amma’s Room is Really Like

ಗೇಲ್ ಟ್ರೆಡ್ವೆಲ್ ಳ ನಿಜವಾದ ಮುಖ ಯಾವುದು?

“ಅಮ್ಮ ಒಂದು ನದಿಯಂತೆ. ಸರಳವಾಗಿ ಹರಿಯುತ್ತಾಳೆ. ಕೆಲವರು ನದಿಯಲ್ಲಿ ಇಳಿದು ಸ್ನಾನ ಮಾಡುತ್ತಾರೆ. ಕೆಲವರು ಅದರ ನೀರು ಕುಡಿದು ದಾಹ ತೀರಿಸಿಕೊಳ್ಳುತ್ತಾರೆ. ಮತ್ತೆ ಕೆಲವರು ನದಿಯಲ್ಲಿ ಈಜಾಡಲು ಹಾಗು ನಲಿದಾಡಲು ಬರುತ್ತಾರೆ. ಆದಾಗ್ಯೂ, ಮತ್ತೆ ಕೆಲವರಿರುತ್ತಾರೆ; ಅವರು ನದಿಯಲ್ಲಿ ಉಗುಳುತ್ತಾರೆ. ಯಾರು ಏನೇ ಮಾಡಲಿ, ನದಿ ಎಲ್ಲವನ್ನೂ ಸ್ವೀಕರಿಸುತ್ತಾ ಯಾವುದರಿಂದಲೂ ವಿಚಲಿತವಾಗದೆ ಬಳಿಬರುವ ಎಲ್ಲರನ್ನೂ ಆಲಂಗಿಸುತ್ತಾ ಹರಿಯುತ್ತಿರುತ್ತದೆ.” -ಅಮ್ಮ

ಸುಮಾರು ವರ್ಷಗಳಿಂದ ನನ್ನ ಬಳಿ ಇರುವ ಒಂದು ವೀಡಿಯೋದಲ್ಲಿನ ಕೆಲವು ಆರಿಸಿತೆಗೆದ ತುಣುಕುಗಳು ಇದು. ಗೇಲ್ ಟ್ರೆಡ್ವೆಲ್ ಅಥವಾ ಗಾಯತ್ರಿ ಅಥವಾ ಸ್ವಾಮಿನಿ ಅಮೃತಪ್ರಾಣ, ಅಮ್ಮನ ಆಶ್ರಮ ಬಿಟ್ಟುಹೋಗುವ ಒಂದೆರಡು ವರ್ಷದ ಹಿಂದೆ ತೆಗೆದ ವೀಡಿಯೋ ಇದು. ಗೇಲ್ ಅಮ್ಮನಿಂದ ಯಥಾರ್ಥವಾಗಿ ಪ್ರಭಾವಿತಳಾಗಿ, ಪ್ರೇರಿತಗೊಂಡವಳಂತೆ ತೋರುತ್ತಿದ್ದಾಳೆ ಹಾಗು ಇತರರಲ್ಲಿರುವ ಅತ್ತ್ಯುತ್ತಮವಾದ ಗುಣಗಳನ್ನು ಉತ್ತೇಜಿಸುವ ಅಮ್ಮನ ಸಾಮರ್ಥ್ಯವನ್ನೂ ಗೇಲ್ ಮೆಚ್ಚಿದ್ದಾಳೆ. ಅದೆಲ್ಲವೂ ಕೇವಲ ನಾಟಕವಾಗಿತ್ತೆ? ಯಾವ ಗೇಲ್ ಟ್ರೆಡ್ವೆಲ್ ನಿಜವಾದ ಗೇಲ್ ಟೆಡ್ವೆಲ್ ಎಂದು ಹೇಳುವುದೇ ಕಷ್ಟ. ಅವಳ ಬಳಿ ಎಷ್ಟು ಮುಖವಾಡಗಳಿವೆಯೋ!? ಈ ಒಂದು ಮುಖವಾಡವನ್ನಂತೂ ಅವಳು ಎಷ್ಟು ನಂಬಿಕೆ ಬರಿಸುವ ರೀತಿಯಲ್ಲಿ ಹಾಕಿಕೊಂಡಿದ್ದಾಳೆ!

Source: What Is Gail Tredwell’s Real Face?