ಗೇಲ್ ಟೆಡ್ವೆಲ್ ಹೀಗಿದ್ದಳು -ಸೂಸನ್ ವೆಕ್ಕರ್ ಬರೆಯುತ್ತಾರೆ. ಸದ್ಯ ಆಶ್ರಮದಲ್ಲಿರುವ ಸ್ವಿಸ್ ಭಕ್ತೆತೆಯೊಬ್ಬರಿಂದ ಈ ಪತ್ರ:

ನನ್ನ ಹೆಸರು ಸೂಸನ್ ವೆಕ್ಕರ್. ನಾನು ಅಮ್ಮನನ್ನು ೧೯೯೦ ರಲ್ಲಿ ಮೊದಲ ಸಲ ಭೇಟಿಮಾಡಿದೆ. ಅಮ್ಮ ತಮ್ಮ ವಾರ್ಷಿಕ ಯೂರೋಪ್ ಯಾತ್ರೆಯಲ್ಲಿ ಮ್ಯೂನಿಕ್ ಗೆ ಬಂದಾಗಲೆಲ್ಲಾ ೧೯೯೨ ರಿಂದಲೂ, ಅಮ್ಮ ಮತ್ತು ಅಮ್ಮನ ಹಿರಿಯ ಸನ್ಯಾಸೀ ಶಿಷ್ಯರ ಅತಿಥೇಯಳಾಗುವ ಭಾಗ್ಯ ನನ್ನದಾಗಿದೆ. ಗೇಲ್ ಟ್ರೆಡ್ವ್ ಲ್ ಳ ಪುಸ್ತಕದ ಪುನರಾವಲೋಕನವನ್ನು ಓದಿದ ಮೇಲೆ ನನಗೆ ಗೇಲ್ ಳೊಂದಿಗೆ ಆಗಿರುವ ಕೆಲವು ಅನುಭವಗಳನ್ನು ಅಮ್ಮ ಮತ್ತು ಅಮ್ಮನ ಸಂಸ್ಥೆಯೊಂದಿಗಿನ ನನ್ನ ಅನುಭವಗಳನ್ನು ಹಂಚಿಕೊಳ್ಳಬೇಕೆನಿಸಿದೆ.

“ಅಮ್ಮನ ಒಡನಾಟಕ್ಕೆ ಬಂದ ಈ ೨೩ ವರ್ಷಗಳಲ್ಲಿ ನಾನು ಒಮ್ಮೆಯೂ ಗೇಲ್ ಳನ್ನಾಗಲೀ ಅಥವಾ ಇನ್ನಾರನ್ನೇ ಆಗಲೀ ಅಮ್ಮ ಹಿಂಸಿಸುವುದನ್ನು ನೋಡಿಲ್ಲ. ನಾನೂ ಮತ್ತು ಗೇಲ್ ಎಷ್ಟು ಆಪ್ತರಿದ್ದೆವು, ಹಾಗಿದ್ದೂ ಯಾವತ್ತೂ ಅವಳು ‘ಅಮ್ಮ ತನಗೆ ಹಿಂಸೆ ನೀಡಿದರು’ ಎಂದು ಹೇಳಿಕೊಂಡಿರಲಿಲ್ಲ.”

ಅಮ್ಮನ ಒಡನಾಟಕ್ಕೆ ಬಂದ ಈ ೧೩ ವರ್ಷಗಳಲ್ಲಿ ನಾನು ಒಮ್ಮೆಯೂ ಗೇಲ್ ಳನ್ನಾಗಲೀ ಅಥವಾ ಇನ್ನಾರನ್ನೇ ಆಗಲೀ ಅಮ್ಮ ಹಿಂಸಿಸುವುದನ್ನು ನೋಡಿಲ್ಲ. ನಾನೂ ಮತ್ತು ಗೇಲ್ ಎಷ್ಟು ಆಪ್ತರಿದ್ದೆವು, ಹಾಗಿದ್ದೂ ಯಾವತ್ತೂ ಅವಳು “ಅಮ್ಮ ತನಗೆ ಹಿಂಸೆ ನೀಡಿದರು” ಎಂದು ಹೇಳಿಕೊಂಡಿರಲಿಲ್ಲ. ಅಮ್ಮ ಯೂರೋಪ್ ಯಾತ್ರೆಯಲ್ಲಿದ್ದಾಗ ಗೇಲ್ ತನ್ನ ಕಷ್ಟಗಳನ್ನು ನನ್ನ ಬಳಿ ಆಗಾಗ ಹೇಳಿಕೊಳ್ಳುತ್ತಿದ್ದಳು. ನಾನು ಅವಳನ್ನು ಮೊದಲು ಭೇಟಿಯಾದಾಗ ಅವಳಿಗೆ ಅಮ್ಮನ ಮೇಲೆ ತುಂಬಾ ಭಕ್ತಿಯಿದ್ದಂತೆ ಕಂಡಿತು. ಕಾಲ ಸರಿದಂತೆ ಅವಳಿಗೆ ಅಮ್ಮನನ್ನು ಟೀಕಿಸುವುದೊಂದೇ ಕೆಲಸವಾಯಿತು. ಉದಾಹರಣೆಗೆ, ಅಮ್ಮ ರಾತ್ರಿ ಆತಿಥೇಯರ ಮನೆಗೆ ಹಿಂತಿರುಗುವರಾ ಅಥವಾ ಹಾಲಿನಲ್ಲೇ ಮಲಗುವರಾ ಎಂದು ಮೊದಲೇ ಸ್ವಾಮಿಜೀಯರಿಗೆ ಅಥವಾ ಅಮ್ಮನ ಸಹಾಯಕರಿಗೆ ತಿಳಿಸುತ್ತಿರಲಿಲ್ಲ. ಅದು ಅಮ್ಮನ ರೀತಿಯಾಗಿತ್ತು. ಇದರಿಂದಾಗಿ ಮುಂದಿನ ವ್ಯವಸ್ಥೆ ಮಾಡುವವರಿಗೆ ಕಷ್ಟವಾಗುತಿತ್ತು ಸರಿ, ಆದರೆ ಇದು ಅಮ್ಮನ ರೀತಿ ಎಂದು ಎಲ್ಲರೂ ಒಪ್ಪಿಕೊಳ್ಳುತ್ತೇವೆ. ನಾವು ಫ್ಲೆಕ್ಸಿಬಲ್ (ಎಂಥಹಾ ಪರಿಸ್ಥಿತಿಗೂ ಒಗ್ಗುವಂತೆ/ಬಗ್ಗುವಂತೆ) ಆಗಲು, ನಾವು ಹೆಚ್ಚು ಸಮರ್ಥರಾಗಲು, ಎಂಥಾ ಒತ್ತಡ ಇದ್ದರೂ ಮನಸ್ಸಿನ ಸಮಚಿತ್ತತೆಯನ್ನು ಉಳಿಸಿಕೊಳ್ಳುವ ಸಾಮರ್ಥ್ಯ ಇದೆಯೆ ಎಂದು ನಮ್ಮನ್ನೇ ಪರೀಕ್ಷಿಸಿಕೊಳ್ಳಲು ಒಂದು ಅವಕಾಶ ಎಂದಾಗಿ ಭಾವಿಸುತ್ತೇವೆ. ಆದರೆ ಗೇಲ್ ಗೆ ಈ ರೀತಿಯಲ್ಲಿ ಪರಿಸ್ಥಿತಿಯನ್ನು ಕಾಣಲು ಸಾಧ್ಯವೇ ಆಗುತ್ತಿರಲಿಲ್ಲ. ಅಮ್ಮ ವಿಷಯವನ್ನು ಹೇಳದೇ ಇರುವುದು ಅಥವಾ ಕಡೇ ನಿಮಿಷಗಳಲ್ಲಿ ಅವಸರ ಮಾಡಿ ವ್ಯವಸ್ಥೆ ಬದಲಿಸುವುದು -ಇದನ್ನೆಲ್ಲಾ ಅವಳು ತನಗಾದ ಅಪಮಾನ ಎಂದು ಭಾವಿಸುತ್ತಿದ್ದಳು.

ಅಂಥಾ ಭಾವನೆಗಳನ್ನೆಲ್ಲಾ ನನ್ನ ಮುಂದೆ ಹೇಳಿಕೊಳ್ಳುತ್ತಿದ್ದ ಗೇಲ್, ಹದಿನೈದು ವರ್ಷಗಳ ನಂತರ ಬರೆದಿರುವ ತನ್ನ ಪುಸ್ತಕದಲ್ಲಿ ಮಾಡಿರುವ ಆರೋಪಗಳ್ಯಾವುವನ್ನೂ ಒಮ್ಮೆಯೂ ಹೇಳಿಕೊಂಡಿರಲಿಲ್ಲ. ಅಮ್ಮ ತನ್ನನ್ನು ಹೊಡೆದರು ಎಂದು ಇವತ್ತು ಬರೆಯುತ್ತಿದ್ದಾಳೆ; ಆದರೆ ಅಮ್ಮನ ಜೊತೆಗೆ ಆಶ್ರಮದಲ್ಲಿ ಗೇಲ್ ಇದ್ದ ಸಮಯದಲ್ಲಿ ಅನೇಕ ಭಕ್ತರಿಗೂ ಮತ್ತು ಆಶ್ರಮವಾಸಿಗಳಿಗೂ ಗೊತ್ತು ಅವಳು ಏನು ಹೇಳುತ್ತಿದ್ದಾಳೋ ಅದು ಸತ್ಯಕ್ಕೆ ದೂರ, ಮತ್ತು ಸತ್ಯಕ್ಕೆ ವಿರುದ್ಧ ಎಂದು. (ಮೀರ, ಸ್ವಾಮಿ ಪರಮಾತ್ಮಾನಂದ, ರುಕ್ಮಿಣಿ, ಕ್ರಿಸ್ಟೀ, ಅನು) ಮುಂಗೋಪಿಯಾಗಿದ್ದುದು ಗೇಲ್, ಅಮ್ಮ ಅಲ್ಲ. ಕೋಪ ನಿಗ್ರಹಿಸಲಾಗದೆ ಅವಳು ತನ್ನ ಕೆಳಗಿದ್ದವರ ಮೇಲೆ ಕಿಡಿಕಾರುತ್ತಿದ್ದಳು. ಗೇಲ್ ಳ ಆಕ್ರಮಣಕಾರಿ ಸ್ವಭಾವದ ಹೆಚ್ಚಿನ ಪ್ರಕೋಪವನ್ನು ಸಹಿಸಬೇಕಾಗುತ್ತಿದ್ದುದು ಹಾಲೆಂಡಿನ ಲಕ್ಷ್ಮಿ ಗೆ; ಅವಳೀಗ ೩೦ ವರ್ಷದಿಂದ ಅಮ್ಮನ ಜೊತೆಗಿರುವವಳು. ಕೆಲವು ಸಲ ಗೇಲ್ ಅಮ್ಮನ ಮೇಲೂ ಕೊಡ ತನ್ನ ಕ್ರೂರತೆ ತೋರಿದ್ದಾಳೆ.

“ತನ್ನ ಅಜ್ಞಾನದಿಂದಾಗಿಯೋ ಅಥವಾ ತನ್ನ ಮಾತ್ಸರ್ಯದಿಂದಾಗಿಯೋ, ಅಂತೂ ಗೇಲ್ ಈಗ ಸಿಡಿದೆದ್ದಿದ್ದಾಳೆ; ಈ ಭುವಿಯ ಮೇಲೆ ನಡೆದಾಡಿರುವ ಅತ್ಯಂತ ಮಹೋನ್ನತ ಆಧ್ಯಾತ್ಮಿಕ ಗುರುವಲ್ಲೋರ್ವರಾದ ಅಮ್ಮನ ಮೇಲೆ ಜನರ ವಿಶ್ವಾಸವನ್ನು ನಾಶಮಾಡುವ ಪ್ರಯತ್ನ ಮಾಡುತ್ತಿದ್ದಾಳೆ. ಇದು ಕತ್ತಲೆಯು ಸೂರ್ಯನನ್ನು ನಾಶಮಾಡಲು ಹೊರಟ ಹಾಗಲ್ಲದೆ ಮತ್ತೇನಲ್ಲ.”

ಗೇಲ್ ಅಮ್ಮನ ಆಶ್ರಮವನ್ನು ಯಾಕೆ ಬಿಟ್ಟುಹೋದಳೆಂಬ ಸತ್ಯ ಈಗ ಸ್ಪಷ್ಟವಾಗಿ ಎಲ್ಲರಿಗೂ ಗೊತ್ತಾಗಿದೆ. ಅವಳು ಹಿಂಸೆಗೆ ಒಳಗಾದಳು ಎಂದಲ್ಲ, ಬದಲಿಗೆ ಅವಳ ವೈಯಕ್ತಿಕ ಬಯಕೆಗಳು ಅವಳು ಪಾಲಿಸಬೇಕಿದ್ದ ಸನ್ಯಾಸಾಶ್ರಮಕ್ಕೆ ಒಪ್ಪುವಂಥದಾಗಿರಲಿಲ್ಲ. ಇಂದು, ಅಮ್ಮನ ಸಂಸ್ಥೆಯನ್ನು ಬಿಟ್ಟುಹೋಗಿ ಮದುವೆಯಾಗಿದ್ದು ನಂತರ ವಿಚ್ಚೇದನ ಪಡೆದ್ದದ್ದು ಎನ್ನುವುದೆಲ್ಲಾ ಈಗ ಕಾನೂನಿನಲ್ಲಿ ದಾಖಲಾಗಿ ಯಾರಿಗೂ ಲಭ್ಯವಿದೆ.

ಕಳೆದ ೨೩ ವರ್ಷಗಳಲ್ಲಿ ಅಮ್ಮನೊಂದಿಗೆ ಯಾತ್ರೆ ಮಾಡುವ, ಅಮ್ಮನೊಂದಿಗೆ ಉಳಿದುಕೊಳ್ಳುವ ಮತ್ತು ಅಮ್ಮನನ್ನು ನನ್ನ ಮನೆಯಲ್ಲಿ ಉಪಚರಿಸುವ ಭಾಗ್ಯ ನನಗೆ ಸಿಕ್ಕಿದೆ. ಅಮ್ಮನ ಅತ್ಯಂತ ಹಿರಿಯ ಸನ್ಯಾಸೀ ಶಿಷ್ಯರೂ ನನ್ನ ಆಪ್ತರಾಗಿದ್ದಾರೆ. ಹೀಗಿದ್ದೂ ಗೇಲ್ ತನ್ನ ಪುಸ್ತಕದಲ್ಲಿ ಬರೆದುಕೊಂಡಿರುವ ವಿಷಯಗಳ ಬಗ್ಗೆ ಸೂಕ್ಷ್ಮವಾಗಿಯೂ ಸಹ ನಾನು ಕೇಳಿಲ್ಲ, ಕಂಡಿಲ್ಲ. ಬದಲಿಗೆ ಅಮ್ಮನ ಪ್ರೇಮ, ಅಮ್ಮನ ವಿನಯತೆ, ತಾಳ್ಮೆ ಮತ್ತು ಕರುಣೆ – ಇವನ್ನು ಮಾತ್ರವೇ ಕಾಣುತ್ತಿದ್ದೇನೆ.

“ಅಮ್ಮ ಮತ್ತು ಅಮ್ಮನ ಅಶ್ರಮವು ಲೋಕಹಿತಕ್ಕಾಗಿ ಏನೆಲ್ಲ ಕಾರ್ಯಗಳನ್ನು ಮಾಡುತ್ತಿದೆ ಎಂಬುದನ್ನು ನೇರವಾಗಿ ನಾನೇ ಕಾಣುವಂಥ ಸ್ಥಿತಿಯಲ್ಲಿ ನಾನಿರುವೆ; ಇದು ನನ್ನ ಮನವನ್ನು ಗಾಢವಾಗಿ ಸ್ಪರ್ಷಿಸಿ, ನನ್ನನ್ನು ವಿನೀತವಾಗಿಸುವ ಅನುಭವವಾಗಿದೆ!”

೧೫ ವರ್ಷಗಳ ಹಿಂದೆ ಗೇಲ್ ಆಶ್ರಮ ಬಿಟ್ಟು ಹೋದಂದಿನಿಂದ ಅಮ್ಮನ ಸೇವಾ ಕಾರ್ಯಗಳು ಅಗಾಧವಾಗಿ ಬೆಳೆದುನಿಂತಿವೆ. ಅಮ್ಮನ ಸರಳ ಜೀವನಕ್ರಮವನ್ನು, ಬಡವರನ್ನು ನಿರ್ಗತಿಕರನ್ನು ಅಮ್ಮನ ಆಶ್ರಮವು ನಡೆಸಿಕೊಳ್ಳುವ ರೀತಿಯನ್ನು ನೋಡಿರುವ ನಾನು, ಸ್ವತಃ ಯೂರೋಪ್ ಮತ್ತು ಹೊರದೇಶಗಳಲ್ಲಿ ಅಮ್ಮನ ಸೇವಾ ಯೋಜನೆಗಳಿಗೆ ಹಣವನ್ನು ದಾನವಾಗಿ ನೀಡಿದ್ದೇನೆ. ವಾಸ್ತವದಲ್ಲಿ, ೨೦೦೯ ರಿಂದ ಈಚೆಗೆ, ನಾನು ಹೆಚ್ಚಾಗಿ ಭಾರತದಲ್ಲಿ ಅಮ್ಮನ ಆಶ್ರಮದಲ್ಲೇ ವಾಸಿಸುತ್ತಿದ್ದೇನೆ, ಮತ್ತು ಸ್ಥಳೀಯ ಮಹಿಳೆಯರನ್ನು ಸಬಲರನ್ನಾಗಿಸುವ ಅಮ್ಮನ ಕಾರ್ಯಕ್ರಮವೊಂದರಲ್ಲಿ ನೇರವಾಗಿ ನಾನೇ ಭಾಗಿಯಾಗಿದ್ದೇನೆ. ಅಮ್ಮ ಮತ್ತು ಅಮ್ಮನ ಆಶ್ರಮವು ಲೋಕಿಹಿತಕ್ಕಾಗಿ ಏನೆಲ್ಲ ಕಾರ್ಯಗಳನ್ನು ಮಾಡುತ್ತಿದೆ ಎಂಬುದನ್ನು ನೇರವಾಗಿ ನಾನೇ ಕಾಣುವಂಥ ಸ್ಥಿತಿಯಲ್ಲಿ ನಾನಿರುವೆ; ಇದು ನನ್ನ ಮನವನ್ನು ಗಾಢವಾಗಿ ಸ್ಪರ್ಷಿಸಿ, ನನ್ನನ್ನು ವಿನೀತವಾಗಿಸುವ ಅನುಭವವಾಗಿದೆ! ಇದಕ್ಕಾಗಿ ನಾನು ಧನ್ಯತೆ ಅರ್ಪಿಸಬಯಸುತ್ತೇನೆ. ದಾನವಾಗಿ ಬಂದ ಹಣವನ್ನು ಅಮ್ಮ ತಮ್ಮ ಮನೆಮಂದಿಗೆ ಕೊಡುತ್ತಾರೆ ಎಂಬ ವಿಚಾರ ಪೊಳ್ಳು. ಅಂಥಾ ಯಾವುದನ್ನೂ ನಾನು ಸ್ವಲ್ಪವೂ ನೋಡಿಲ್ಲ. ಬದಲಿಗೆ, ಅಮ್ಮನ ಸೇವಾಯೋಜನೆಗಳು ಹೇಗೆ ವಿಶಾಲವಾಗುತ್ತಾ ಬೆಳೆದಿವೆ, ಮತ್ತು ಬೆಳೆಯುತ್ತಲೇ ಇವೆ ಎಂಬುದನ್ನು ನೋಡುತ್ತಲೇ ಇದ್ದೇನೆ.

ದುಃಖದ ಸಂಗತಿ ಎಂದರೆ, ಗೇಲ್ ಆಧಾತ್ಮ ಸಾಧಕರಿಗೆ ಒಬ್ಬ ಆದರ್ಶವ್ಯಕ್ತಿ ಆಗಬಹುದಿತ್ತು, ಆಗಲಿಲ್ಲ. ತನ್ನ ಅಜ್ಞಾನದಿಂದಾಗಿಯೋ ಅಥವಾ ತನ್ನ ಮಾತ್ಸರ್ಯದಿಂದಾಗಿಯೋ, ಅಂತೂ ಗೇಲ್ ಈಗ ಸಿಡಿದೆದ್ದಿದ್ದಾಳೆ; ಈ ಭುವಿಯ ಮೇಲೆ ನಡೆದಾಡಿರುವ ಅತ್ಯಂತ ಮಹೋನ್ನತ ಆಧ್ಯಾತ್ಮಿಕ ಗುರುವಲ್ಲೋರ್ವರಾದ ಅಮ್ಮನ ಮೇಲೆ ಜನರ ವಿಶ್ವಾಸವನ್ನು ನಾಶಮಾಡುವ ಪ್ರಯತ್ನ ಮಾಡುತ್ತಿದ್ದಾಳೆ. ಇದು ಕತ್ತಲೆಯು ಸೂರ್ಯನನ್ನು ನಾಶಮಾಡಲು ಹೊರಟ ಹಾಗಲ್ಲದೆ ಮತ್ತೇನಲ್ಲ.

– ಸೂಸನ್ ವೆಕ್ಕರ್

Source: A Letter from Susanne Wecker

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s