ಬ್ರಹ್ಮಚಾರಿ ಶುಭಾಮೃತರರಿಂದ ಬಂದ ಇಮೇಲ್

ಅಮ್ಮನ ಆಶ್ರಮದ ಹಿರಿಯ ಬ್ರಹ್ಮಚಾರಿಗಳಲ್ಲಿ ಒಬ್ಬರಾದ ಹಾಗು ಅಮ್ಮನ ಮುಖ್ಯ ಭಾಷಾಂತರಕಾರಕರಾದ ಬ್ರಹ್ಮಚಾರಿ ಶುಭಾಮೃತ ಚೈತನ್ಯರಿಂದ ನಮಗೆ ಈ ಇಮೇಲ್ ದೊರೆತಿದೆ.

ನನ್ನ ಹೆಸರು ಶುಭಾಮೃತ. ನಾನು ಅಮ್ಮನ ಆಶ್ರಮದಲ್ಲಿ ಆಶ್ರಮವಾಸಿಯಾಗಿ ೧೯೮೯ ರಿಂದ ಇದ್ದೇನೆ. ಗೇಲ್ ಟ್ರೆಡ್ ವೆಲ್ ಮತ್ತು ಅವಳ ಬೆಂಬಲಿಗರು ಅಮ್ಮ ಮತ್ತು ಅವರ ಸಂಸ್ಥೆಯ ಕುರಿತು ಅಪಪ್ರಚಾರ ಮಾಡುತ್ತಿರುವ ಸುಳ್ಳುಗಳನ್ನು ಹಾಗು ಕಟ್ಟು ಕಥೆಗಳನ್ನು ಗಮನಿಸುತ್ತಾ, ಈ ಕುರಿತು ಮಾತನಾಡಲು ನಾನು ನಿರ್ಬಂದ್ಧಿತನಾಗಿದ್ದೇನೆ.

ಸನ್ಯಾಸ ಮಾರ್ಗವು ಯಾವಾಗಲೂ ಕಡಿಮೆ ಸಂಚರಿಸಲಾದಂತಹ ಮಾರ್ಗವಾಗಿದೆ. ಇದನ್ನು ಅನುಸರಿಸಲು ಎಲ್ಲರಿಗೂ ಸುಲಭವೇನಲ್ಲ. ಇದನ್ನು ಮನಸ್ಸಿನಲ್ಲಿ ಇಟ್ಟುಕೊಂಡು, ಗೇಲ್ ಕುರಿತು ನನಗೆ ಅನ್ನಿಸಿವುದು- ತನ್ನ ಲೌಕಿಕ ಬಯಕೆಗಳ ಕಾರಣದಿಂದಾಗಿ ಈ ಮಾರ್ಗವನ್ನು ಬಿಡಬೇಕಾಯಿತು ಎನ್ನುವುದನ್ನು ಒಪ್ಪಿಕೊಂಡು ಸ್ವೀಕರಿಸದೇ, ಬಲಿಗೆ, ತಾನು ಸನ್ಯಾಸವನ್ನು ತ್ಯಜಿಸುವ ನಿರ್ಧಾರಕ್ಕೆ ಅಮ್ಮ ಮತ್ತು ಅಮ್ಮನವರ ಸಂಸ್ಥೆಯೇ ಕಾರಣವೆಂದು ಸಮರ್ಥಿಸಿಕೊಳ್ಳುತ್ತಿದ್ದಾಳೆ.

“ಗೇಲ್ ಕುರಿತು ನನಗೆ ಅನ್ನಿಸಿವುದು- ತನ್ನ ಲೌಕಿಕ ಬಯಕೆಗಳ ಕಾರಣದಿಂದಾಗಿ ಈ ಮಾರ್ಗವನ್ನು ಬಿಡಬೇಕಾಯಿತು ಎನ್ನುವುದನ್ನು ಒಪ್ಪಿಕೊಂಡು ಸ್ವೀಕರಿಸದೇ, ಬಲಿಗೆ, ತಾನು ಸನ್ಯಾಸವನ್ನು ತ್ಯಜಿಸುವ ನಿರ್ಧಾರಕ್ಕೆ ಅಮ್ಮ ಮತ್ತು ಅಮ್ಮನವರ ಸಂಸ್ಥೆಯೇ ಕಾರಣವೆಂದು ಸಮರ್ಥಿಸಿಕೊಳ್ಳುತ್ತಿದ್ದಾಳೆ.”

ಅಮ್ಮನವರ ಭಾಷಾಂತರಕಾರರಲ್ಲಿ ಒಬ್ಬ ನಾನಾಗಲು ಅತ್ಯಂತ ಅನುಗ್ರಹೀತನೆಂದು ಭಾವಿಸುತ್ತೇನೆ, ಮತ್ತು ಇದು ಅಮ್ಮನವರ ಜೀವನವನ್ನು ಬಹಳ ಹತ್ತಿರದಿಂದ ಕಾಣಲು ನನಗೆ ಅಣಿವುಮಾಡಿಕೊಟ್ಟಿದೆ. ಅಮ್ಮನ ಜೊತೆಯಲ್ಲಿನ ನನ್ನ ೨೪ ವರ್ಷಗಳ ಜೀವಿತದಲ್ಲಿ, ಗೇಲ್ ತನ್ನ ಪುಸ್ತಕದಲ್ಲಿ ಆಪಾದಿಸಿರುವ ತಪ್ಪು ಕೆಲಸಗಳನ್ನು ಎಂದಿಗೂ ನಾನು ನೋಡಿಲ್ಲ ಅಥವಾ ಯಾವುದೇ ಸಾಕ್ಷಿಯನ್ನು ಕಂಡಿಲ್ಲ.

ಗೇಲ್ ಸಂಸ್ಥೆಯನ್ನು ಬಿಟ್ಟು ಹೋದ ಕೆಲವೇ ಸಮಯದಲ್ಲಿ ಗೇಲ್ ನ್ನು ಒಳಗೊಂಡ ಸನ್ನಿವೇಶವೊಂದು ಜರುಗಿದ್ದನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಬಹು ಮುಖ್ಯವೆಂದು ನಾನು ಭಾವಿಸುತ್ತೇನೆ. ಒಬ್ಬ ಅಮೆರಿಕದ ಭಕ್ತ, ಮತ್ತೊಬ್ಬ ಬ್ರಹ್ಮಚಾರಿ ಹಾಗು ನಾನು ಅಮ್ಮನನ್ನು ಭೇಟಿಮಾಡುತ್ತಿದ್ದೆವು, ಆಗ ಈ ಭಕ್ತ ಅಮ್ಮನಿಗೆ ಈಗ ಹೇಳುವ ಮಾಹಿತಿಯನ್ನು ಹೇಳಿಕೊಂಡನು. ನಾನು ಭಾಷಾಂತರಕಾರಕನಾಗಿದ್ದೆ. ನಾನು ಪ್ರಾರಂಭಿಸುವ ಮುನ್ನ, ಒಬ್ಬ ಭಾಷಾಂತರಕಾರಕನಾಗಿ ಗೋಪನೀಯತೆಯನ್ನು ಕಾಪಾಡುವುದು ನನಗೆ ಬಹಳ ಮುಖ್ಯ, ಮತ್ತು ನಾನು ಎಂದಿಗೂ ಹಾಗೆಯೇ ಮಾಡಿದ್ದೇನೆ ಹಾಗು ಅದನ್ನು ಎಂದಿಗೂ ಪಾಲಿಸುತ್ತೇನೆ. ಹಾಗಿದ್ದರೂ, ಅಮ್ಮನ ಮತ್ತು ಸಂಸ್ಥೆಯ ವಿರುದ್ಧ ಗೇಲ್ ನ ಅಪಪ್ರಚಾರದ ಅಭಿಯಾನವನ್ನು ನೋಡಿ, ಆ ಭಕ್ತನ ಹೆಸರನ್ನು ಹೇಳದೆಯೇ, ಆ ಸನ್ನಿವೇಶವನ್ನು ಹೇಳಲು ನಾನು ನಿರ್ಬಂಧಿತನಾಗಿದ್ದೇನೆ.

ಈ ವ್ಯಕ್ತಿ ಅಮ್ಮನಿಗೆ ಹೇಳಿದ, ಅವನ ಪ್ರತಿ ಗೇಲ್ ನ ಆಸಕ್ತಿ ೧೯೯೪ ರಲ್ಲಿ ಪ್ರಾರಂಭವಾಯಿತು. ಅವಳು ಸ್ಪಷ್ಟವಾಗಿ ಅವನ ಸಂಗಡ ಇರಲು ತನ್ನ ಇಚ್ಛೆಯನ್ನು ಪ್ರಕಟಪಡಿಸುತ್ತಿದ್ದಳು ಹಾಗು ಯಾತ್ರೆಗಳಲ್ಲಿ ಹಲವು ಬಾರಿ ಅವನ ಜೊತೆ ಮಾತನಾಡಲು ಅಥವಾ ಅಮೃತಪುರಿಯಿಂದ ಅವನಿಗೆ ಆಗಾಗ್ಗೆ ದೂರವಾಣಿ ಕರೆಗಳನ್ನು ಮಾಡುತ್ತಿದ್ದಳು. ಪ್ರಾರಂಭದಲ್ಲಿ ಗೇಲ್ ಳ ಈ ಸ್ನೇಹಭಾವವನ್ನು ಅವನು ಅನ್ಯಥಾ ಅಸಮಂಜಸವಾಗಿ ಪರಿಗಣಿಸಲಿಲ್ಲ. ಆದರೆ ಕ್ರಮೇಣ ಅವನು ಆತನ ಪ್ರತಿ ಅವಳ ಭಾವ ಪರಿವರ್ತನೆಯನ್ನು ಗಮನಿಸತೊಡಗಿದ. ಅವಳು ಇತನ ಮೇಲೆ ಹೆಚ್ಚು ಹೆಚ್ಚು ಭಾವನಾತ್ಮಕವಾಗಿ ಅವಲಂಬಿಸುತ್ತಿರುವುದನ್ನು ಕಂಡು ಕಳವಳಗೊಳ್ಳಲು ಪ್ರಾರಂಭಿಸಿದ. ಮತ್ತು ಕಡೆಯಲ್ಲಿ ಅವಳು ಬಹಿರಂಗವಾಗಿಯೇ ಅವನ ಪ್ರತಿ ಅವಳಿಗೆ ಪ್ರಣಯ ಭಾನೆಗಳಿರುವುದನ್ನು ಹಾಗು ಅವನೊಂದಿಗೆ ಸಂಬಂಧವನ್ನು ಪ್ರಾರಂಭಿಸುವ ತನ್ನ ಮನೋಭಿಲಾಷೆಯನ್ನು ಅವನಲ್ಲಿ ಒಪ್ಪೆಕೊಂಡಳು. ನಾವು ಮದುವೆ ಮಾಡಿಕೊಂಡು ಜೀವನ ಪ್ರಾರಂಭಿಸುವ ಎಂದೂ ಸಹ ಸಲಹೆಯನ್ನು ಕೊಟ್ಟಳು. ಅವಳ ಈ ಪ್ರಣಯ ನಿವೇದನೆಯು ಅವನಿಗೆ ಆಘಾತವುಂಟುಮಾಡಿದ್ದಲ್ಲದೇ, ಅಗಾಧವಾಗಿ ಅವನ ಮನಸನ್ನು ಕೆದಡಿಬಿಟ್ಟಿತು. ಯಾವುದೇ ರೀತಿಯ ಅನಿಶ್ಚಿತ ಪದಗಳ ಬಳಕೆಯಿಲ್ಲದೆ, ಸ್ಪಷ್ಟವಾಗಿ, ಈ ಸಂಬಂಧ ಎಂದಿಗೂ ಸಾಧ್ಯವಿಲ್ಲ ಎಂದು ಅವನು ಅವಳಿಗೆ ಹೇಳಿದ. ಈ ರೀತಿಯಲ್ಲಿ ಅಮ್ಮನಿಗೆ ಎಂದಿಗೂ ದ್ರೋಹ ಬಗೆಯಲಾರೆ ಎಂದ. ಗೇಲ್ ಗೆ ಅವಳ ಸನ್ಯಾಸಿ ಧರ್ಮದ ಬೊಧೆಯನ್ನು ಎಷ್ಟೇ ನೆನಪಿಸಿದರೂ ಕೂಡ, ಅವಳು ಪಟ್ಟುಬಿಡಲಿಲ್ಲ. ಅವಳು ಅವನಿಗೆ ದೂರವಾಣಿಯ ಮೂಲಕ ಕರೆಯುವುದನ್ನೇ ಆಗಲಿ ಅಥವಾ ಇ ಮೇಲ್ ಕಳಿಸುವುದೇ ಆಗಲಿ ಬಿಡಲಿಲ್ಲ. ಬರಬರುತ್ತಾ ಇದು ಎಲ್ಲಿಗೆ ಬಂದು ಮುಟ್ಟಿತು ಎಂದರೆ, ಆಶ್ರಮವನ್ನು ಬಿಟ್ಟನಂತರ ಅವನ ಜೊತೆಗೆ ಅವಳು ಒಟ್ಟಿಗೆ ಜೀವಿಸಲು ಒಂದು ಅಪಾರ್ಟ್ ಮೆಂಟ್ ಒಂದನ್ನು ಖರೀದಿಸುವಂತೆ ಅವನ ಮೇಲೆ ಒತ್ತಡ ಹೇರಲು ಪ್ರಾರಂಭಿಸಿದಳು.

“ಗೇಲ್ ನ ಪುಸ್ತಕವು ಪ್ರಾಮಾಣಿಕವಾಗಿ ಅವಳ ಜೀವನವನ್ನು ಹಾಗು ಅವಳ ಅನುಭವವನ್ನು ಹಂಚಿಕೊಳ್ಳುವುದ್ದಾಗಿದ್ದಲ್ಲಿ, ಇಂಥಹ ಪ್ರಮುಖವಾದ ಘಟನೆಯನ್ನು ಏಕೆ ಬರೆಯದೇ ಕೈಬಿಡಲಾಗಿದೆ? ಇದು ಸ್ಪಷ್ಟವಾದ, ಮಹತ್ವಪೂರ್ಣವಾದ ’ಹುಸಿ ಲೋಪವಾಗಿದೆ’ ಆಗಿದಷ್ಟೆ.”</span>

ಗೇಲ್ ಆಶ್ರಮವನ್ನು ಬಿಟ್ಟು ಹೋದ ನಂತರ, ಅಮ್ಮನ ಬಗ್ಗೆ ಮತ್ತು ಆಶ್ರಮದ ಬಗ್ಗೆ ಸುಳು ಕಥೆಗಳನ್ನು ಪ್ರಚಾರಮಾಡಲು ಪ್ರಾರಂಭಿಸಿದಾಗಲೂ, ಅಮ್ಮ ಗೇಲ್ ಬಿಟ್ಟು ಹೋಗಲು ನಿಜವಾದ ಕಾರಣವೇನೆಂದು ಜಗತ್ತಿಗೆ ತಿಳಿಸಲಿಲ್ಲ, ಕಾರಣ ಅಮ್ಮನಿಗೆ ಜನರು ಯಾವುದೇ ಕಾರಣಕ್ಕೂ ಗೇಲ್ ನ್ನು ಹೀನ ದೃಷ್ಟಿಯಿಂದ, ಕೀಳು ದೃಷ್ಟಿಯಿಂದ ನೋಡುವುದು ಇಷ್ಟವಿರಲಿಲ್ಲ. ವಿಪರ್ಯಾಸವೆಂದರೆ, ಗೇಲ್ ಅಮ್ಮನ ಈ ಕಾರುಣ್ಯದ ಮುಖವನ್ನು ಎಂದಿಗೂ ನೋಡಲೇ ಇಲ್ಲ.
ಗೇಲ್ ನ ಪುಸ್ತಕವು ಪ್ರಾಮಾಣಿಕವಾಗಿ ಅವಳ ಜೀವನವನ್ನು ಹಾಗು ಅವಳ ಅನುಭವವನ್ನು ಹಂಚಿಕೊಳ್ಳುವುದ್ದಾಗಿದ್ದಲ್ಲಿ, ಇಂಥಹ ಪ್ರಮುಖವಾದ ಘಟನೆಯನ್ನು ಏಕೆ ಬರೆಯದೇ ಕೈಬಿಡಲಾಗಿದೆ? ಇದು ಸ್ಪಷ್ಟವಾದ, ಮಹತ್ವಪೂರ್ಣವಾದ “ಹುಸಿ ಲೋಪವಾಗಿದೆ” ಆಗಿದೆಯಷ್ಟೆ. ಇದೇ ಬೆಳಕಿನಡಿಯಲ್ಲಿ ಮುಂದುವರಿಸುತ್ತಾ, ಆಶ್ರಮವನ್ನು ಬಿಟ್ಟ ಕೆಲವೇ ವರ್ಷಗಳಲ್ಲಿ ಜರುಗಿತೆಂದು ನಾನು ಕೇಳಿ ತಿಳಿದ ಸಂಗತಿಯಾದ, ಗೇಲ್, ಅದೂ ತಾನು ಮತ್ಯಾವುದೋ ಗಂಡಸಿನೊಂದಿಗೆ ವಿವಾಹದ ಬಗ್ಗೆಯೇ ಆಗಲಿ, ವಿಚ್ಛೇದನದ ಬಗ್ಗೆಯೇ ಆಗಲಿ, ಆದದ್ದನು ತನ್ನ ಪುಸ್ತಕದಲ್ಲಿ ಉಲ್ಲೇಖಿಸಲು ಅಸಮರ್ಥಳಾದಿದ್ದಾಳೆ.

– ಶುಭಾಮೃತ

Source: An Email From Brahmachari Shubamrita

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s