ಗೇಲ್ ಆಶ್ರಮ ಬಿಟ್ಟುಹೋದ ಸಮಯದಲ್ಲೇ ಆಶ್ರಮದಿಂದ ಹೊರಹೋದ ವ್ಯಕ್ತಿಯೊಬ್ಬರು “The God Light” ಎಂಬ ಆನ್ ಲೈನ್ ಪೋರಮನಲ್ಲಿ ಪೋಸ್ಟ್ ಮಾಡಿದ ಲೇಖನವಿದು. ಗೇಲ್ ಟ್ರೆಡ್ವೆಲ್ ಳನ್ನು ನೇರವಾಗಿ ಬಲ್ಲವರಿಗೆ ಅವಳ ಬಗ್ಗೆ ಇರುವ ಅಭಿಪ್ರಾಯವನ್ನೇ ಈ ವ್ಯಕ್ತಿಯೂ ವ್ಯಕ್ತಪಡಿಸುತಿದ್ದಾರೆ. ಈ ವ್ಯಕ್ತಿ ತಮ್ಮನ್ನು “ಸಂತೋಷ್” ಎಂದು ಗುರುತಿಸಿ ಕೊಳ್ಳಬಯಸುತ್ತಾರೆ. ಇಲ್ಲಿರುವುದು ಅವರ ಪತ್ರದ ಪ್ರತಿ. ಮೂಲವನ್ನು ನೋಡಬಯಸುವವರು ಇಲ್ಲಿ ನೋಡಿ:
http://spiritualforum.me.uk/thread/5321
(ಬ್ರಹ್ಮಚಾರಿಣಿ ಲಕ್ಷ್ಮಿ) ಅವರ ಪತ್ರವು ಅಹಂಕಾರವನ್ನು ನಿಯಂತ್ರಿಸಲಾಗದೆ ಅದರ ಬೇಕು ಬೇಡಗಳನ್ನು ಈಡೇರಿಸಲು ಯಾವ ಮಟ್ಟಿಗೆ ಬೇಕಾದರೂ ಇಳಿಯಲು ಸಿದ್ಧವಾಗಿ ದಾರಿತಪ್ಪುವ ಸಾಧಕರೆಲ್ಲರಿಗೆ ಬಹಳ ಪ್ರಸಕ್ತವಾಗಿದೆ. ನನ್ನ ಇತಿಮಿತಿಗಳನ್ನು ನನ್ನ ಗುರುವಿನ ಮೇಲೆ ಹೇರಿ, ಅವರನ್ನೇ ಆರೋಪಿಸುತ್ತಾ ನಾನು ಮಾತಾ ಅಮೃತಾನಂದಮಯಿ ಮಠವನ್ನು ತೊರೆದೆ. ಹಾಗು ನಾನು ಆಶ್ರಮದಲ್ಲಿ ನನಗೆ ಬೇಕಾದಂತೆ ಇರಲು ಬಿಡಲಿಲ್ಲವಲ್ಲಾ ಎಂಬ ಸಿಟ್ಟಿನಿಂದಾಗಿ ಸ್ವಲ್ಪ ಕಾಲ ಸಾರ್ವಜನಿಕ ವೇದಿಕೆಗಳಲ್ಲಿ ಗುರುವಿನ ಅವಹೇಳನ ಸಹ ಮಾಡಿ ಸೇಡು ತೀರಿಸಿಕೊಳ್ಳಲು ಪ್ರಯತ್ನಿಸಿದ್ದೆ. ಗೇಲ್ ಟ್ರೆಡ್ವೆಲ್ ( ಗಾಯತ್ರಿ) ಆಶ್ರಮ ಬಿಟ್ಟ ಅದೇ ಸಮಯದಲ್ಲೇ ನಾನೂ ಬಿಟ್ಟಿದ್ದು. ಅವಳನ್ನು ಅಮ್ಮನ ಬಹುಮುಖ್ಯ ಶಿಷ್ಯೆ ಎಂದು ಪರಿಗಣಿಸಲಾಗಿತ್ತು. ಅವಳು ಹೋದಳೆಂದಾಗ, ನನಗೆ ನನ್ನ ತಪ್ಪುಗಳನ್ನು ನೋಡಿ ತಿದ್ದಿಕೊಳ್ಳಲಾಗದೆ ಓಡಿಹೋಗುವಷ್ಟು ಅಹಂಕಾರ ಸಿಡಿದೆದ್ದಿತು. ಗಾಯತ್ರಿಗೆ ಬಂದ ಸಮಯದಿಂದಲೂ ಸಮಸ್ಯೆಗಳಿದ್ದವು; ಅವಳ ಸ್ವಭಾವ ಬಹು ಕಠಿಣವಾಗಿತ್ತು. ಸುಳ್ಳನ್ನು ಸರಾಗವಾಗಿ ಹೇಳುತ್ತಿದ್ದಳು. ತನಗೆ ಬೇಕಾದ್ದನ್ನು ಸಾಧಿಸಲು ಅವಳು ಆಶ್ರಮವಾಸಿಗಳಿಗೆ ಶಾರೀರಕವಾಗಿಯೂ ಸಹ ತೊಂದರೆ ಕೊಡುತ್ತಿದ್ದಳು. ಅವಳಿಗೆ “ರಾಣಿ ಜೇನು” ಎಂಬ ಅಡ್ಡಹೆಸರು ಬಿದ್ದಿತ್ತು.
“ಚಿಕ್ಕ ಮಕ್ಕಳನ್ನು ಕೊದಲು ಹಿಡಿದೆತ್ತಿ ನೆಲದ ಮೇಲೆ ಅಪ್ಪಳಿಸುತ್ತಿದ್ದಳು; ಅಮ್ಮ ಆ ಮಕ್ಕಳ ಕೈಗೆ ಕೊಟ್ಟಿರುತ್ತಿದ್ದ ಪ್ರಸಾದವನ್ನು ಕಿತ್ತುಕೊಂಡು ಅದನ್ನು ನೆಲಕ್ಕೆ ಅಥವಾ ಕಿಟಕಿಯಾಚೆ ಬಿಸಾಡಿ ಜೋರಾಗಿ ನಗುತ್ತಿದ್ದಳು. ಇದನ್ನು ನಾನೇ ನೋಡಿದ್ದೇನೆ. ಅವಳ ಮಾನಸಿಕ ಸ್ತಿಮಿತತೆಯ ಬಗ್ಗೆ ನಮ್ಮಲ್ಲಿ ಎಷ್ಟೋ ಜನರಿಗೆ ಸಂಶಯ ಬಂದಿದ್ದುಂಟು.”
ನಾನು ಯಾವುದೇ ರೀತಿಯಲ್ಲಿ ಗೇಲ್ ಳ ಚಟುವಟಿಕೆಗಳಿಗೆ ಸಹಕಾರ ನೀಡುತ್ತಿಲ್ಲ; ಈ ಲೇಖನದಿಂದಾಗಿ ಅವಳ ಹೆಸರಿಗೆ ಹೆಚ್ಚು ಪಬ್ಲಿಸಿಟಿ ದೊರಕಲಿ, ಅವಳ ಪುಸ್ತಕಕ್ಕೆ ಹೆಚ್ಚು ಬೇಡಿಕೆ ಬರಲಿ ಎಂಬ ಉದ್ದೇಶವಂತೂ ನನಗಿಲ್ಲ. ಹಾಗೆ ಅಪವ್ಯಾಖ್ಯಾನವಾಗದಿರಲಿ. ಆ ಪುಸ್ತಕದಲ್ಲಿ ಸತ್ಯದ ಒಂದು ಎಳೆಯೂ ಇಲ್ಲ, ಸಾಕ್ಷಿ ಪುರಾವೆಗಳೂ ಯಾವುದೇ ಪುಟದಲ್ಲೂ ಇಲ್ಲ. ಸನ್ಯಾಸ ಪದವಿಯನ್ನು ಅವಳು ಆಗಾಗ ದುರುಪಯೋಗ ಪಡಿಸಿಕೊಳ್ಳುತ್ತಿದ್ದಳು. ಇದು ನಮಗ್ಯಾರಿಗೂ ಒಪ್ಪಿಗೆಯಾಗುತ್ತಿರಲಲ್ಲಿ. ಅವಳು ಬಿಟ್ಟುಹೋದಾಗ ನಮ್ಮಲ್ಲಿ ಅನೇಕರಿಗೆ ನಿರಾಳವೆನಿಸಿತ್ತು. ಕೆಲವು ಭಾರತೀಯ ಹುಡುಗಿಯರನ್ನು ಅವಳು ಸಾರ್ವಜನಿಕವಾಗಿ ದೈಹಿಕವಾಗಿ ಹಿಂಸಿಸುವುದನ್ನು ನಾನು ಕಣ್ಣಾರೆ ನೋಡಿದ್ದೇನೆ. ವಿಚಾರಿಸಿದಾಗ, ನನ್ನ ಬಂಧುವೂ ಆಗಿದ್ದ ಒಬ್ಬ ಹುಡುಗಿಯಿಂದ ತಿಳಿದುಬಂದಿದ್ದು ಇದು; ಮಕ್ಕಳಿಗೆ ಕಷ್ಟ ಕೊಡುವುದಕ್ಕಾಗಿ ಗಾಯತ್ರಿ ಯಾವ ಹಂತಕ್ಕೂ ಇಳಿಯಬಲ್ಲಳು; ಚಿಕ್ಕ ಮಕ್ಕಳನ್ನು ಕೊದಲು ಹಿಡಿದೆತ್ತಿ ನೆಲದ ಮೇಲೆ ಅಪ್ಪಳಿಸುತ್ತಿದ್ದಳು; ಅಮ್ಮ ಆ ಮಕ್ಕಳ ಕೈಗೆ ಕೊಟ್ಟಿರುತ್ತಿದ್ದ ಪ್ರಸಾದವನ್ನು ಕಿತ್ತುಕೊಂಡು ಅದನ್ನು ನೆಲಕ್ಕೆ ಅಥವಾ ಕಿಟಕಿಯಾಚೆ ಬಿಸಾಡಿ ಜೋರಾಗಿ ನಗುತ್ತಿದ್ದಳು. ಇದನ್ನು ನಾನೇ ನೋಡಿದ್ದೇನೆ. ಅವಳ ಮಾನಸಿಕ ಸ್ತಿಮಿತತೆಯ ಬಗ್ಗೆ ನಮ್ಮಲ್ಲಿ ಎಷ್ಟೋ ಜನರಿಗೆ ಸಂಶಯ ಬಂದಿದ್ದುಂಟು. ಮಾಜೀ ಆಶ್ರಮವಾಸಿಯಾಗಿ ನಾನು ಇಷ್ಟನ್ನು ದೃಢವಾಗಿ ಹೇಳಬಯಸುತ್ತೇನೆ: ಗೇಲ್ ಗೆ “ರಾಣಿ ಜೇನು” ಪದವಿಯನ್ನು ಸ್ವಲ್ಪವಾದರೂ ಮರಳಿಪಡೆಯಬೇಕೆಂಬ ಉದ್ದೇಶ ಈ ಪುಸ್ತಕದಲ್ಲಿ ಎದ್ದುತೋರುತ್ತಿದೆ. ವಿಚಾರಿಸಿ ನೋಡಿದಾಗ ಅದರಲ್ಲಿ ಪೊಳ್ಳುತನ ಮಾತ್ರವೇ ಕಾಣುವುದು. ನನ್ನಂತೆ ಅವಳೂ, ಅಹಂಕಾರದಿಂದ ಉತ್ತೇಜನ ಪಡೆಯುತ್ತಿರುವ ತನ್ನ ಹತಾಶೆಯನ್ನು ನಿವಾರಿಸಿಕೊಳ್ಳಲು ಕಲೆಯುವವರೆಗೂ, ಅವಳ ಇಂಥ ದುಷ್ಕಾರ್ಯಗಳು ನಡೆಯುತ್ತಲೇ ಇರುತ್ತದೆ.
ಎರಡು ದಶಕಗಳ ಕಾಲ ತನ್ನ ಗುರುವಿನ ಸನ್ಯಾಸಿ ಶಿಷ್ಯೆಯಾಗಿದ್ದ ಗೇಲ್ ಟ್ರೆಡ್ವೆಲ್ ಮಾತಾ ಅಮೃತಾನಂದಮಯಿ ಮಠವನ್ನು ೧೯೯೯ರಲ್ಲಿ ಬಿಟ್ಟುಹೋದಳು. ಗುರುವಿನ ಬಗ್ಗೆ ಅವಹೇಳನಕಾರಿಯಾದ ಅವಳ ಪುಸ್ತಕವನ್ನು ಸಾರ್ವಜನಿಕರು ಗಂಭೀರವಾಗಿ ಪರಾಮರ್ಶಿಸಿ ನೋಡಿದ ಮೇಲೆ, ಅವಳಿಗೆ ಗುರುವಿನ ಬಗ್ಗೆ ಹತಾಶೆ ಪ್ರಾರಂಭವಾಗಿದ್ದು ಹೇಗೆಯೆಂದರೆ, ಅಮ್ಮನ ನ್ಯೂಯಾರ್ಕ್ ಭಕ್ತನೊಬ್ಬನು ಅವಳ ಪ್ರೇಮವನ್ನು ನಿರಾಕರಿಸಿದ ಕಾರಣದಿಂದ ಎಂದು ಬೆಳಕಿಗೆ ಬಂದಿದೆ. ಗೇಲ್ ಗೆ ಹಲವಾರು ಜನ ಪರಿಚಾರಕರಿದ್ದು ಅವಳ ಲೌಕಿಕ ಬಯಕೆಗಳನ್ನು ಅವರು ಈಡೇರಿಸುತ್ತಿದ್ದ ಕಾರಣ “ರಾಣಿಜೇನು” ಎಂಬ ಅಡ್ಡ ಹೆಸರು ಇದ್ದಿತಾದರೂ, ಅವಳು ತನ್ನನ್ನು “ಅಮ್ಮನ ಛಾಯೆ” ಎಂದು ತಾನೇ ಕರೆದುಕೊಳ್ಳುತ್ತಿದ್ದಳು. ಅಮ್ಮನ ವೈಯಕ್ತಿಕ ಪರಿಚಾರಿಕೆಯಾದ ಮತ್ತು ಭಾರತದ ಆಶ್ರಮದಲ್ಲಿ ಗೇಲ್ ಗೆ ಸಮೀಪವೆನಿಸಿದ್ದ ಬ್ರಹ್ಮಚಾರಿಣಿ ಲಕ್ಷ್ಮಿ ಅವರು ಬರೆದಿರುವ ಪತ್ರ ಇಲ್ಲಿದೆ. ತನ್ನ ಪುಸ್ತಕದ ಮೇಲೆ ಕೆಟ್ಟ ವಿಮರ್ಶೆ ಮಾಡುವ ಯಾರನ್ನೂ ತರಾಟೆಗೆ ತೆಗೆದುಕೊಳ್ಳಲು ಸಿದ್ಧವಿರುವ ಅವಳ ಒಂದು ತಂಡವೇ ಬೆಂಬಲಕ್ಕೆ ಇದೆ. ಇತ್ತೀಚೆಗೆ ಗೇಲ್ ಳ ಒಬ್ಬ ಫ್ರೆಂಡ್ ಹಾಗೂ ಬೆಂಬಲಿಗರೊಬ್ಬರು, ಬ್ರಹ್ಮಚಾರಿಣಿ ಲಕ್ಮಿ ಆಶ್ರಮ ತೊರೆದಳು ಎಂಬ ವಂದತಿ ಹಬ್ಬಿಸಿದರು. ಅದಕ್ಕೆ ಸ್ಪಂದಿಸುತ್ತಾ ಲಕ್ಮಿ ಈ ಪತ್ರ ಬರೆದು ಪ್ರಕಟಿಸಿದರು. “ಗುರುನಿಂದೆ” ಎನ್ನುವುದು ಪಂಚ ಮಹಾ ಪಾಪಗಳಲ್ಲಿ ಅತ್ಯಂತ ಘೋರವಾದುದು; ಅದನ್ನು ಭಗವಂತನೂ ಕೂಡ ಕ್ಷಮಿಸಲಾರ ಎಂದಿದೆ.
– ಸಂತೋಷ್
Source:A Former Ashram Resident Who Left Amritapuri Speaks Out About Gail Tredwell’s True Nature