ಅಮೃತಪುರಿ ಆಶ್ರಮದಲ್ಲಿ ನಾನು ಸುಮಾರು ಇಪ್ಪತ್ತು ವರ್ಷಗಳು ವಾಸಿಸಿದ್ದೆ; ಈಗ ಸಂದರ್ಭವು ನನ್ನನ್ನು ಸೌತ್ ಆಫ್ರಿಕಾಗೆ ತಂದುಬಿಟ್ಟಿದೆ. ಗೇಲ್ ನೊಂದಿಗೆ ನನಗೆ ಬಹಳವಾಗಿ ಒಡನಾಟವಿತ್ತು. ೧೯೮೯ ರಲ್ಲಿ ಆಶ್ರಮವಾಸಿಯಾದ ನಾನು, ಅವಳು ಆಶ್ರಮವನ್ನು ಬಿಟ್ಟುಹೋಗುವವರೆಗೂ, ಹೆಚ್ಚೂ ಕಮ್ಮಿ ದಿನವೂ ಅವಳನ್ನು ನೋಡುವುದಷ್ಟೇ ಅಲ್ಲದೆ ಅವಳ ಜೊತೆಗೆ ಪರಸ್ಪರ ವರ್ತಿಸಬೇಕಾಗುತ್ತಿತ್ತು.
ಗೇಲ್ ಅಮ್ಮನನ್ನು ಬಿಟ್ಟುಹೋದಾಗ ಬಹುತೇಕ ಜನರಿಗೆ ತುಂಬಾ ಆಘಾತವಾಯಿತು, ಆದರೆ ನನಗೆ ಒಂದಿಷ್ಟೂ ಆಶ್ಚರ್ಯವಾಗಲಿಲ್ಲ, ಕಾರಣ ಅವಳು ಹೋಗಬೇಕಾಗಿ ಬರುವವರೆಗೆ ನಡೆದ ಎಲ್ಲಾ ಘಟನೆಗಳನ್ನೂ ನಾನು ಸಾಕ್ಷಿಯಾಗಿ ನಿಕಟದಿಂದ ನೋಡಿದ್ದೆ. ಗೇಲ್ ಬಿಟ್ಟುಹೋದ ಅದೇ ಸಮಯಕ್ಕೇ ಹೆಚ್ಚೂ ಕಮ್ಮಿ ಅವಳ “ಅಂತರಂಗದ ಗೆಳತಿಯರಾದ” ಕೆಲವು ಹೆಂಗಸರ ಪುಟ್ಟ ಗುಂಪ್ಪು ಆಶ್ರಮವನ್ನು ಬಿಟ್ಟು ಹೋದದ್ದನ್ನು ಕಂಡು ನನಗೆ ಆಶ್ಚರ್ಯವೇನೂ ಆಗಲಿಲ್ಲ. ಏಕೆಂದರೆ, ಗೇಲ್ ಅವರನ್ನೆಲ್ಲಾ ಹೇಗೆ ಅಮ್ಮನ ವಿರುದ್ಧ ತಿರುಗುವಂತೆ ತಯಾರುಮಾಡಿದ್ದಳು ಎಂದೂ ನಾನು ನೋಡಿದ್ದೆ.
ನಾನು ಆಶ್ರಮಕ್ಕೆ ಬಂದ ಹೊಸತರಲ್ಲಿ ಗೇಲ್ ಬೇರೆಯೇ ವ್ಯಕ್ತಿಯಾಗಿದ್ದಳು. ಸ್ವಭಾವಕ್ಕೆ ಕೊಂಚ ಮೃದುವಾದ ಮುಖವೂ ಇತ್ತು; ಕೆಲವೊಮ್ಮೆ ಕರುಣೆ, ಕಳಕಳಿ ಎನ್ನುವುದು ಅವಳಿಲ್ಲಿ ಕಾಣುತ್ತಿತ್ತು. ಅವಳು ಅಮ್ಮನಿಗೆ ಹತ್ತಿರವಾಗಿರುತ್ತಿದ್ದ ಕಾರಣ ನನಗೆ ಅವಳ ಪ್ರತಿ ತುಂಬಾ ಗೌರವವಿತ್ತು. ಅವಳು ಹಿರಿಯ ಸಂನ್ಯಾಸಿನಿ ಆಗಿದ್ದಳು, ನಾನು ಅವಳನ್ನು ನನ್ನ ಅಕ್ಕ ಎಂದೇ ಭಾವಿಸಿದ್ದೆ. ಆದರೆ ಬಹುಬೇಗ ಅವಳು ಪೂರ್ಣವಾಗಿ ಸ್ವಾರ್ಥಪರಾಯಣೆಯಾಗಿರುವುದನ್ನು ಗಮನಿಸಿದೆ. ತನ್ನದೇಯಾದ-ಗೇಲ್ ಪ್ರಪಂಚದಲ್ಲಿ ಎಲ್ಲವೂ ಅವಳನ್ನು ಕೇಂದ್ರವಾಗಿಸಿಕೊಂಡು, ಅವಳ ಸುತ್ತ ತಿರುಗುತ್ತಿದ್ದುವು. ಅವಳಿಗೆ ಇಷ್ಟವಿಲ್ಲದ್ದು ಹೇಳಿದವರ ಅಥವಾ ಅವಳು ಹೇಳಿದ್ದನ್ನು ಒಪ್ಪದವರ ಮೇಲೆ ಅವಳು ಆಶ್ಚರ್ಯ ಹುಟ್ಟಿಸುವಷ್ಟು ಕ್ರೂರತೆ ಕಾರುತ್ತಿದ್ದಳು. ಮಾತ್ರವಲ್ಲ, ತನ್ನ ಖುಷಿಗಾಗಿ ಸಹ ಅವಳು ಜನರ ಮೇಲೆ ವಿನಾಕಾರಣ ಕ್ರೂರತೆ ಕಾರುತ್ತಿದ್ದಳು. ಎಲ್ಲರನ್ನೂ ತುಂಬಾ ಕಂಟ್ರೋಲ್ ಮಾಡುತ್ತಿದ್ದಳು. ತನಗೆ ಸಂಬಂಧಿಸಿಲ್ಲದಿದ್ದರೂ ಹಾಗೇ ಯಾರದೇ ವಿಷಯದಲ್ಲಿ ತಲೆಹಾಕಿ, ಅವರ ಮೇಲೆರಗಿ, ಆಶ್ರಮದಲ್ಲಿ ಅವರ ಜೀವನವನ್ನೇ ದುಃಖಮಯವಾಗಿಸುತ್ತಿದ್ದಳು. ಅವಳಿರುವಲ್ಲಿ ನಾವು ತುಂಬಾ ಹುಷಾರಾಗಿರಬೇಕಾಗುತ್ತಿತ್ತು; ಹೆಜ್ಜೆ ಸಪ್ಪಳ ಕೇಳಿಸದಂತೆ ನಡೆಯಬೇಕಿತ್ತು. ಅವಳ ಕ್ರೂರತನಕ್ಕೆ, ಅವಳ ಕೆಟ್ಟ ಬೈಗುಳಕ್ಕೆ, ಮತ್ತೆ ಅವಳ ಅಧಿಕಾರ ದುರುಪಯೋಗಕ್ಕೆ ನಾನು ಅನೇಕ ಸಲ ಗುರಿಯಾಗಿದ್ದೇನೆ.
ಒಂದು ದಿನ ನಾನು ನಾಯಿಯೋ ಏನೋ ಎನ್ನುವಂತೆ ನನ್ನನ್ನು ಬೈಯ್ಯುತ್ತಿದ್ದಳು; ಅವಳ ಬಾಯಿಯಿಂದ ನುಡಿಯಬಾರದ ನುಡಿಗಳು ಹೊರಬರುತ್ತಿದ್ದವು. ಕಾರಣ ಎಲ್ಲೋ ನಾನು ಏನನ್ನೋ ತಪ್ಪಾಗಿ ತಿಳಿದಿದ್ದೆ. ನಾನು “ಹಾಗೆ ನನ್ನೊಂದಿಗೆ ಮಾತಾಡಬೇಡ” ಎಂದೆ. ಅದೇ ಮೊದಲ ಸಲ ನಾನು ಅವಳೆದುರಿಗೆ ಧೈರ್ಯಮಾಡಿ ಎದ್ದುನಿಂತದ್ದು. ಓ, ಅದಕ್ಕಾಗಿ ನಾನು ಮುಂದೆ ಅದೆಷ್ಟು ಪಾಡುಪಡಬೇಕಾಯಿತು! ನನ್ನನ್ನು ಹೊಡೆಯಲು ಶುರುಮಾಡಿದಳು. ಆಮೇಲೆ, ಅವಳ ಮಾತನ್ನು ಕೇಳಿಸಿಕೊಳ್ಳುವವರಿಗೆಲ್ಲಾ ನಾನೆಷ್ಟು ಕೆಟ್ಟದಾಗಿ ಅವಳನ್ನು ನಡೆಸಿಕೊಂಡೆ ಎಂದು ಹೇಳತೊಡಗಿದಳು. ಅಧಿಕಾರವನ್ನು ಬಳಸಿಕೊಂಡು ಕೆಲವಾರು ವಾರ ಅಮ್ಮನ ಕೋಣೆಯ ಒಳಗೆ ಮತ್ತು ಸುತ್ತಮುತ್ತ ನಾನು ಮಾಡಬೇಕಿದ್ದ ಸೇವೆಯನ್ನು ನಾನು ಮಾಡಲಾಗದಂತೆ ವ್ಯವಸ್ಥೆ ಮಾಡಿದಳು. ಅದಾದ ಮೇಲೆ ಸುಮಾರು ತಿಂಗಳುಗಳ ಕಾಲ ಆಗಾಗ ನಾನು ಅವಳನ್ನು ಕೆಟ್ಟದಾಗಿ ನಡೆಸಿಕೊಂಡ ದಿನವನ್ನು ನೆನಪು ಮಾಡುತ್ತಿದ್ದಳು!
ಒಂದು ಸಲ ನನಗೆ ವಾಂತಿ, ಭೇದಿ; ತುಂಬಾ ಬಳಲಿದ್ದೆ. ಅವಳ ಮೂಡ್ ಸರಿಯಿರಲಿಲ್ಲ. ಅವಳು ನನ್ನ ಮೇಲೆ ಕೂಗಾಡುವಾಗ ನನಗೆ ಆರಾಮಿಲ್ಲ ಎಂದು ಅವಳ ಮಾತಿನ ಮಧ್ಯೆ ವಿವರಿಸಲು ಹೋಗಲು, ಅವಳು ಇನ್ನಷ್ಟು ಕೋಪದಿಂದ ಹುಚ್ಚಾಗಿ “ನಿನಗೆ ಹುಷಾರಿಲ್ಲದಿದ್ದರೆ – “*&%#$@” ಅದರಿಂದ ನನಗೇನೂ ಆಗಬೇಕಿಲ್ಲ” ಎಂದು ಒಂದು ನೀಚ ಪದವನ್ನು ಬಳಸಿ ನನಗೆ ಬೈಯ್ದಳು!
ಗೇಲ್ ನನ್ನನ್ನು ಎಷ್ಟೋ ಸಲ ಹೊಡೆದಿದ್ದಾಳೆ, ನನ್ನ ಕೂದಲನ್ನು ಹಿಡಿದು ಎಳೆದಿದ್ದಾಳೆ. ಹಾಗಿದ್ದೂ ಅವಳು ಲಕ್ಷ್ಮಿಯನ್ನು ನಡೆಸಿಕೊಳ್ಳುತ್ತಿದ್ದ ರೀತಿಗೆ ಹೋಲಿಸಿದರೆ ನನ್ನದು ಅಷ್ಟೇನೂ ಅಲ್ಲ ಎನ್ನಬೇಕು. ನನ್ನ ಮುಂದೆಯೇ ಎಷ್ಟೋ ಸಲ ಅವಳು ಲಕ್ಷ್ಮಿಯನ್ನು ಚೆನ್ನಾಗಿ ಹೊಡೆದಿದ್ದಾಳೆ, ಕೂದಲು ಕಿತ್ತು ಎಳೆದಿದ್ದಾಳೆ, ಅವಳ ಮುಖಕ್ಕೆ ನೇರವಾಗಿ ಉಗಿದಿದ್ದಾಳೆ, ಮತ್ತೆ ಬಲವಾಗಿ ಒದ್ದೂ ಇದ್ದಾಳೆ. ಇದನ್ನು ಸಾಕ್ಷಿಯಾಗಿ ನೋಡಿರುವುದು ನಾನು ಮಾತ್ರವಲ್ಲ, ಇತರರೂ ಇದ್ದಾರೆ. ಒಮ್ಮೆ ಅವಳು ಸುಡುತ್ತಿದ್ದ ಐರನ್ ಬಾಕ್ಸನ್ನು ಎತ್ತಿ ಸಿಟ್ಟಿನಿಂದ ಲಕ್ಷ್ಮಿಯ ಮೇಲೆ ಎಸೆದಾಗ ನಾನು ಅಲ್ಲಿದ್ದೆ. ಒಮ್ಮೆ ಇಂಥ ಒಂದು ಆಕ್ರಮಣ ಆದ ಮೇಲೆ ಲಕ್ಷ್ಮಿಯ ಕತ್ತಿನ ಮೇಲೆ ರಕ್ತ ಇದ್ದುದನ್ನು ನಾನೇ ನೋಡಿದ್ದೇನೆ. ಇದು ಯಾವುದೂ ಅಮ್ಮನ ಎದುರಿಗೆ ಆಗಲಿಲ್ಲ ಎಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ.
“ಗೇಲ್ ಆ ದಿನ ಅಮ್ಮನಿಗೆ ಏನು ಮಾಡಿದಳೆಂದು ನಾನು ಯಾರಿಗೂ ಹೇಳಲಿಲ್ಲ, ಯಾಕೆಂದರೆ ಅಮ್ಮ ತಮ್ಮ ಅಪಾರ ಕರುಣೆಯಿಂದಾಗಿ ಅಲ್ಲಿ ಏನು ನಡೆಯಿತು ಎಂದು ಗೊತ್ತಾಗಿದ್ದ ನಮ್ಮೆಲ್ಲರಿಗೂ ಈ ವಿಷಯವನ್ನು ಯಾರಿಗೂ ಹೇಳಬೇಡಿ ಎಂದೂ, ಗೇಲ್ ಳನ್ನು ಏನೂ ಕೇಳಬೇಡಿ ಎಂದೂ ಹೇಳಿದ್ದರು. ಅಮ್ಮ ಗೇಲ್ ಗಾಗಿ “ಪ್ರಾರ್ಥನೆ ಮಾಡಿ” ಎಂದು ಮಾತ್ರ ಹೇಳಿದರು.”
ಲಕ್ಷ್ಮಿಯಿಂದ ಒಂದು ಸಣ್ಣ ತಪ್ಪು ಆದರೂ, ಕೆಲವು ದಿನ ಲಕ್ಷ್ಮಿ ಒಂದು ಮಾತು ಆಡಿದರೂ ಅಥವಾ ಒಮ್ಮೆ ನಕ್ಕರೂ ಸಾಕು, ಅವಳ ಮೇಲೆ ಆಕ್ರಮಣವಾಗುತ್ತಿತ್ತು. ನಾನು ಮತ್ತು ಲಕ್ಷ್ಮಿ ಅಕ್ಕತಂಗಿಯರ ಹಾಗಿದ್ದೆವು; ಆದ್ದರಿಂದ ಗೇಲ್ ನಮ್ಮನ್ನು ಮಾತಾಡಲು ಬಿಡುತ್ತಲೇ ಇರಲಿಲ್ಲ. ನಮಗೆ ಎಷ್ಟು ಭಯ ಎಂದರೆ ಒಬ್ಬರಿಗೊಬ್ಬರು ಏನಾದರೂ ಹೇಳಿಕೊಳ್ಳುವುದಿದ್ದರೆ ನಾವು ಪಿಸುಮಾತಿನಲ್ಲಿ ಹೇಳಿಕೊಳ್ಳುತ್ತಿದ್ದೆವು. ಕೇಳಿಸಿಬಿಟ್ಟರೆ ಗೇಲ್ ಎಲ್ಲಿ ಬಂದು ನಮ್ಮ ಮೇಲೆ ಕೂಗಾಡುತ್ತಾಳೋ ಎಂದು ಹೆದರಿಕೆ.
ಸ್ವೀಡನ್ನಿನಲ್ಲಿ ಏನಾಯಿತು ಎಂದು ಲಕ್ಷ್ಮಿ ಬರೆದಿರುವುದನ್ನು ಈಗ ತಾನೆ ಓದಿದೆ. ದೋಣಿಯಲ್ಲಿ ಅಮ್ಮನನ್ನು ಕೂರಿಸಿಕೊಂಡು ಹೊರಟ ಗೇಲ್ ದೋಣಿ ಮೊಗುಚುವಂತೆ ಮಾಡಿದಳು. ಅದನ್ನು ನಾನೂ ನೋಡಿದೆ, ಯಾಕೆಂದರೆ ನಾನೂ ಅಲ್ಲೇ ಇದ್ದೆ. ಅಮ್ಮ ಬೇಡವೆಂದು ಹೇಳುತ್ತಿದ್ದುದನ್ನು ಗೇಲ್ ಪೂರ್ತಿ ಅಲಕ್ಷ್ಯಮಾಡಿ, ದೋಣಿ ತಲೆಕೆಳಗಾಗುವಂತೆ ಅವಳೇ ಮಾಡಿದಳು. ಅಮ್ಮ ಬೋಟಿನ ಅಡಿಯಲ್ಲಿ ಸಿಕಿದ್ದರು; ಹಾಗಾಗಿ ಮೇಲೆ ಬರಲು ಸಾಕಷ್ಟು ಸಮಯವನ್ನೇ ತೆಗೆದುಕೊಂಡರು. ಮುಳುಗಿದಾಗ ಸೀರೆ ಅಮ್ಮನ ತಲೆಯನ್ನು ಮುಸುಕಿಬಿಟ್ಟಿತ್ತಂತೆ, ಹಾಗಾಗಿ ಮೇಲೆ ಬರಲು ಅಮ್ಮನಿಗೆ ಸ್ವಲ್ಪಹೊತ್ತು ಹಿಡಿದಿತ್ತು. ಗೇಲ್ ಆ ದಿನ ಅಮ್ಮನಿಗೆ ಏನು ಮಾಡಿದಳೆಂದು ನಾನು ಯಾರಿಗೂ ಹೇಳಲಿಲ್ಲ, ಯಾಕೆಂದರೆ ಅಮ್ಮ ತಮ್ಮ ಅಪಾರ ಕರುಣೆಯಿಂದಾಗಿ ಅಲ್ಲಿ ಏನು ನಡೆಯಿತು ಎಂದು ಗೊತ್ತಾಗಿದ್ದ ನಮ್ಮೆಲ್ಲರಿಗೂ ಈ ವಿಷಯವನ್ನು ಯಾರಿಗೂ ಹೇಳಬೇಡಿ ಎಂದೂ, ಗೇಲ್ ಳನ್ನು ಏನೂ ಕೇಳಬೇಡಿ ಎಂದೂ ಹೇಳಿದ್ದರು. ಅಮ್ಮ ಗೇಲ್ ಗಾಗಿ “ಪ್ರಾರ್ಥನೆ ಮಾಡಿ” ಎಂದು ಮಾತ್ರ ಹೇಳಿದರು.
ಆಶ್ರಮವು ವಿಶಾಲವಾಗುತ್ತಾ ಹೆಚ್ಚು ಹೆಚ್ಚು ಜನ ಇಲ್ಲೇ ಇರಲು ಬರತೊಡಗಿದರು; ಗೇಲ್ ಗೆ ಅಧಿಕಾರ ನೆತ್ತಿಗೆ ಹತ್ತುತ್ತಿದ್ದುದನು ನಾನು ನೋಡುತ್ತಿದ್ದೆ. ಅವಳಿಗೆ ಸಂನ್ಯಾಸ ದೀಕ್ಷೆ ದೊರೆತ ಮೇಲೆ, ಜನ ಅವಳ ಪಾದ ಮುಟ್ಟುತ್ತಿದ್ದರು, ಹಿಂದಿಗಿಂತಲೂ ಹೆಚ್ಚು ಗೌರವ, ಆದರಗಳನ್ನು ತೋರುತ್ತಿದ್ದರು, ತಾನು ನಿಜವಾಗಿಯೂ ತುಂಬಾ ಮಹಾನ್ ವ್ಯಕ್ತಿ ಎಂದು ಗೇಲ್ ನಂಬಿದಳು. ಅವಳಿಗೆ ಅವಳ ಕೆಲವು “ಪ್ರೀತಿ”ಯವರಿದ್ದರು; ಅಂತರಂಗದ ಗೆಳತಿಯರು. ತಾವು ಗೇಲ್ ಗೆ ಹತ್ತಿರವಾಗಿರುವ ಕಾರಣ ಹೇಗೋ ಅಮ್ಮನಿಗೂ ಹತ್ತಿರವಾಗಿದ್ದೇವೆ ಎಂದು ತಪ್ಪಾಗಿ ಭಾವಿಸಿದ್ದರು. ಅವರು ಗೇಲ್ ಗೆ ಸೇವೆಮಾಡುತ್ತಿದ್ದರು, ಅವಳು ಬಯಸಿದ್ದನ್ನೆಲ್ಲಾ ಮಾಡುತ್ತಿದ್ದರು, ಅವಳು ಹೇಳಿದ್ದಕ್ಕೆಲ್ಲಾ, ಅದೆಷ್ಟೇ ಅಸಂಬದ್ಧವಾಗಿದ್ದರೂ, ಅದೆಲ್ಲಕ್ಕೂ ಸರಿ ಎಂದು ಗೋಣುಹಾಕುತ್ತಿದ್ದರು. ದಿನಕಳೆದಂತೆ ಗೇಲ್ ನ “ಇನ್ನರ್ ಸರ್ಕಲ್” ನ ಸದಸ್ಯರ (ಅಂತರಂಗದವರ) ಜೀವನಗಳು ಅಮ್ಮನ ಸುತ್ತ ಅಲ್ಲ, ಗೇಲ್ ನ ಸುತ್ತ ತಿರುಗಲು ಶುರುವಾಯಿತು. ಗೇಲ್ ಹುಶಾರಾಗಿ ಅವರನ್ನು ತಯಾರು ಮಾಡುತ್ತಿದ್ದಳು. ಅವರ ಜೀವನಗಳನ್ನೇ ತನ್ನ ಕೈಯ್ಯಲ್ಲಿ ತೆಗೆದುಕೊಂಡಳು. ಕ್ರಮೇಣ ಅಮ್ಮನಿಂದ ಅವರನ್ನು ವಿಮುಖ ಮಾಡಿಸಿಬಿಟ್ಟಳು. ಒಂದು ದಿನ ಒಬ್ಬ ಯುವತಿ ತಲೆಗೆ ಕೈ ಒತ್ತಿಕೊಂಡು ನೆಲದ ಮೇಲೆ ಕೂತಿದ್ದಳು. ನೋಡಿ ಏನಾಯಿತೆಂದು ಕೇಳಿದೆ. ಅವಳು ಅಳತೊಡಗಿದಳು. ಅಳುತ್ತಾ, ಗೇಲ್ ನಿಂದಾಗಿ ತನಗೆ ಅಮ್ಮನಲ್ಲಿ ನಂಬಿಕೆಯೇ ಹೋಗುತ್ತಿದೆ ಎಂದಳು. ಆ ವಿಷಯವನ್ನು ಅಮ್ಮನಿಗೆ ಹೇಳು ಎಂದೆ. ಅವಳು ಹಾಗೆ ಮಾಡಿದಳೋ ಇಲ್ಲವೋ ಗೊತ್ತಿಲ್ಲ. ಆದರೆ ಗೇಲ್ ಹೋದ ಸಮಯದಲ್ಲೇ ಅವಳೂ ಆಶ್ರಮ ಬಿಟ್ಟುಹೋದಳು. ಈ ಯುವತಿಗೆ ಅಮ್ಮನ ಮೇಲೆ ನಿಜವಾದ ಪ್ರೇಮ ಇತ್ತು; ಅದನ್ನು ನಾನು ಅರಿತಿದ್ದ ಕಾರಣ ಅವಳು ಹೋದಳೆಂದು ಕೇಳಿ ನನಗೆ ತುಂಬಾ ದುಃಖವಾಯಿತು. ಗೇಲ್ ಹೀಗೇ ತನ್ನ ಸುತ್ತ ಇದ್ದ ಹೆಣ್ಣುಮಕ್ಕಳ ತೆಲೆ ಕೆಡಿಸಿ ಅವರ ಮನಸ್ಸಿನಲ್ಲಿ ವಿಷ ಬಿತ್ತುತ್ತಿದ್ದಳು. ಗೇಲ್ ಹೋದ ಸಮಯದಲ್ಲೇ ಹೆಚ್ಚೂ ಕಮ್ಮಿ ಅವರೆಲ್ಲರೂ ಅಮ್ಮನನ್ನು ಬಿಟ್ಟುಹೋದರು.
ಕಡೆಯ ಕೆಲವು ವರ್ಷಗಳು ಗೇಲ್ ಒಂದೂ ಕೆಲಸ ಮಾಡುತ್ತಿರಲಿಲ್ಲ. ತನ್ನ ಕೋಣೆಯಲ್ಲೇ ಹೆಚ್ಚಾಗಿ ಇರುತ್ತಿದ್ದಳು; ಅಲ್ಲಿ ಗೆಳತಿಯರೊಂದಿಗೆ ಮಾತಾಡುತ್ತಿದ್ದಳು, ಮಸಾಜ್ ಮಾಡಿಸಿಕೊಂಡಿರುತ್ತಿದ್ದಳು. ಗೇಲ್ ಇರುತ್ತಿದ್ದ ರೂಮು ಮೇಲಿನ ಮಹಡಿಯಾದ್ದರಿಂದ ರೂಮಿನಲ್ಲಿ ತುಂಬಾ ಸೆಖೆಯಿರುತ್ತಿತ್ತು. ಅವಳಿಗೆ ಒಂದು ಎಲೆಕ್ಟ್ರಿಕ್ ಫ್ಯಾನ್ ಇತ್ತು. ಹಾಗಿದ್ದೂ, ಮಧ್ಯಾಹ್ನದ ಹೊತ್ತು ಸೆಖೆ ವಿಪರೀತವಾದಾಗ ಅವಳು ನನಗೆ ಆಜ್ಞಾಪನೆ ಮಾಡುತ್ತಿದ್ದಳು: ತಣ್ಣೀರನ್ನು ಬಕೆಟ್ಟುಗಳಲ್ಲಿ ತೆಗೆದುಕೊಂಡು ಹೋಗಿ, ಏಣಿ ಹತ್ತಿ, ಅವಳ ಕೋಣೆಯ ಮೇಲಿನ ತಾರಸಿಗೆ ಹೋಗಿ, ಆ ತಣ್ಣೀರನ್ನು ತಾರಸಿಯ ಮೇಲೆ, ಮೇಲಿಂದ ಮೇಲೆ ಸುರಿಯಬೇಕಿತ್ತು. ಅವಳ ಕೋಣೆ ತಣ್ಣಗಾಗುವ ವರೆಗೂ! ಅದು ಸುಲಭದ ಕೆಲಸವಾಗಿರಲಿಲ್ಲ. ತುಂಬಾ ದಣಿವಾಗುತ್ತಿತ್ತು. ಸಂನ್ಯಾಸ ಸಂಪ್ರದಾಯದ ಬಗ್ಗೆ ನನಗಿದ್ದ ಗೌರವದ ಕಾರಣ ನಾನು ಎಂದಿಗೂ “ನನ್ನಿಂದಾಗದು” ಎನ್ನಬೇಕು ಎಂದೇ ತೋರಲಿಲ್ಲ.
“ಸಾನ್ ರಮೋನ್ ನಿಂದ ಅವಳ ಪಲಾಯನ ಸಾಹಸದ ನಾಟಕವೂ ನನಗೆ ಗೊಂದಲಮಯವಾಗಿ ಕಾಣುತ್ತದೆ. ಯಾಕೆಂದರೆ ಯಾತ್ರೆಯು ಆರಂಭವಾಗುವುದಕ್ಕೆ ಕೆಲವು ವಾರಗಳ ಹಿಂದೆಯೇ ಗೇಲ್ ನನಗೂ, ಇತರರಿಗೂ ಸ್ಪಷ್ಟವಾಗಿ ಹೇಳಿದ್ದಳು, ಯಾತ್ರೆಯು ಆದಮೇಲೆ ಒಂದು ದೀರ್ಘ ವಿರಾಮ – “ಬ್ರೇಕ್” ತೆಗೆದುಕೊಳಲು ಮತ್ತು ಸಾನ್ ರೋಮನ್ ನಲ್ಲಿ ಕೆಲವು ತಿಂಗಳುಗಳ ಕಾಲ ವಾಸಿಸಲು ಅಮ್ಮ ಅವಳಿಗೆ ಅನುಮತಿ ನೀಡಿದ್ದಾರೆ,ಎಂದು.”
ಗೇಲ್ ಹೋಗುವ ಹಿಂದಿನ ವರ್ಷ ಯಾತ್ರೆಯ ಸಮಯದಲ್ಲಿ ನಾನು ಅಮ್ಮನ ಮನೆಯಲ್ಲಿ ಉಳಿದುಕೊಂಡು, ಗೇಲ್ ಇದ್ದ ರೂಮಿನಲ್ಲೇ ಮಲಗುತ್ತಿದ್ದೆ. ನಾನು ಅನುಭವಿಸಿಯೇ ಇಲ್ಲದ ಸಂದರ್ಭಗಳನ್ನು, ನಾನು ನುಡಿದೇ ಇಲ್ಲದ ನುಡಿಗಳನ್ನು ಗೇಲ್ ತನ್ನ ಪುಸ್ತಕದಲ್ಲಿ ನಾನು ಅನುಭವಿಸಿರುವುದಾಗಿ ಹಾಗು ಹೇಳಿರುವುದಾಗೆ ಸೇರಿಸಿಕೊಂಡಿರುವುದು ತುಂಬಾ ಕುತೂಹಲಕಾರಿಯಾಗಿದೆ. ಅಮೃತಪುರಿಯ ತನ್ನ ಪ್ರತ್ಯೇಕ ಕೋಣೆಯಲ್ಲಿ ಹಾಗು ಯಾತ್ರೆಯ ಸಮಯದಲ್ಲಿ ಗೇಲ್ ನಮ್ಮೆಲ್ಲರಿಗಿಂತಾ ಹೆಚ್ಚು ನಿದ್ರೆಮಾಡುತ್ತಿದ್ದಳು. ಯಾತ್ರೆಯಲ್ಲಿ ಅಮ್ಮ ಬೆಳಗಿನ ದರ್ಶನಕ್ಕೆ ಹೋಗಿ ಆದ ಎಷ್ಟೋ ಸಮಯದ ಮೇಲೆ ಯಾವಾಗಲೋ ಎದ್ದೇಳುತ್ತಿದ್ದಳು. ಗೇಲ್ ಗೆ ಅಡುಗೆಮನೆಯಲ್ಲಿ ನಾನು ಅವಳಿಗೆ ಸಹಾಯ ಮಾಡುತ್ತಿದ್ದ ಕಾರಣ ನನಗೆ ಇದು ನೋಡಿ ಗೊತ್ತಿದೆ. ಅಡುಗೆ ಕೆಲಸದ ಕಾರಣ ಕಾರ್ಯಕ್ರಮಕ್ಕೆ ಹೋಗದೆ ಮನೆಯಲ್ಲೇ ಉಳಿದಿರುತ್ತಿದ್ದೆ. ನಾನು ಕಾಫಿ ಮಾಡಿಕೊಟ್ಟಮೇಲೇ ಅವಳು ಏಳುತ್ತಿದ್ದುದು. ಆಗ ಸಾಧಾರಣ ಸಮಯ ಹತ್ತುಗಂಟೆಗೆ ಹತ್ತಿರವಾಗಿರುತ್ತಿತ್ತು. ಪುಸ್ತಕದಲ್ಲಿ, “ಅಮ್ಮನನ್ನು ಬಿಟ್ಟು ಹೋದಮೇಲೆ ಮೊದಲ ಸಲ ಎಷ್ಟೋ ವರ್ಷಗಳ ತರುವಾಯ ತಾನು ಒಳ್ಳೇ ನಿದ್ರೆ ಮಾಡಿದೆ,” ಎಂದು ಹೇಳಿಕೊಂಡಿದ್ದಾಳೆ; ಇದು ನನಗೆ ತಮಾಷೆಯಾಗಿ ತೋರುತ್ತದೆ.
ಸಾನ್ ರಮೋನ್ ನಿಂದ ಅವಳ ಪಲಾಯನ ಸಾಹಸದ ನಾಟಕವೂ ನನಗೆ ಗೊಂದಲಮಯವಾಗಿ ಕಾಣುತ್ತದೆ. ಯಾಕೆಂದರೆ ಯಾತ್ರೆಯು ಆರಂಭವಾಗುವುದಕ್ಕೆ ಕೆಲವು ವಾರಗಳ ಹಿಂದೆಯೇ ಗೇಲ್ ನನಗೂ, ಇತರರಿಗೂ ಸ್ಪಷ್ಟವಾಗಿ ಹೇಳಿದ್ದಳು, ಯಾತ್ರೆಯು ಆದಮೇಲೆ ಒಂದು ದೀರ್ಘ ವಿರಾಮ – “ಬ್ರೇಕ್” ತೆಗೆದುಕೊಳಲು ಮತ್ತು ಸಾನ್ ರೋಮನ್ ನಲ್ಲಿ ಕೆಲವು ತಿಂಗಳುಗಳ ಕಾಲ ವಾಸಿಸಲು ಅಮ್ಮ ಅವಳಿಗೆ ಅನುಮತಿ ನೀಡಿದ್ದಾರೆ,ಎಂದು. ಹೆಚ್ಚೆಂದರೆ ಮುಂದಿನ ಜನವರಿ ಹೊತ್ತಿಗೆ ತಾನು ತಿರುಗಿ ಬರುವುದಾಗಿಯೂ ಅವಳು ನನಗೆ ಹೇಳಿದಳು. ಈ ವಿಷಯ ನನಗೆ ಚೆನ್ನಾಗಿ ಸ್ಪಷ್ಟಪಡಿಸಲಾಗಿತ್ತು; ಯಾತ್ರೆಯಲ್ಲಿ ಎಷ್ಟೋ ಸಲ ಇದರ ಪ್ರಸ್ತಾಪವೂ ನಮ್ಮಿಬ್ಬರ ಮಾತಿನಲ್ಲಿ ಬಂದಿತ್ತು. ಹಾಗಿದ್ದಾಗ, ಅಮ್ಮ ಅಮೆರಿಕಾದಲ್ಲೇ ಇರುವಾಗಲೇ ಸಾನ್ ರಮೋನ್ ಆಶ್ರಮದಿಂದ ರಾತ್ರಿಯ ಕತ್ತಲಲ್ಲಿ ತಪ್ಪಿಸಿಕೊಂಡು ಹೋಗುವ ಅವಶ್ಯಕತೆಯೇನಿತ್ತು? ಅಮ್ಮನ ಹೆಸರು ಕೆಡಿಸಬೇಕು, ಅಮ್ಮ ಒಂದು ವಿಚಿತ್ರ “ಕಲ್ಟ್” ನ ನಾಯಕಿ ಎಂದು ಬಿಂಬಿಸಬೇಕು ಎನ್ನುವುದಾಗಿತ್ತು ಅವಳ ದುರುದ್ದೇಶ.
ಅಮ್ಮ, ಸ್ವಾಮೀಜಿ ಹಾಗೂ ಅಮೃತಾತ್ಮಾನಂದ ಸ್ವಾಮಿಯವರ ಮೇಲೆ ಗೇಲ್ ಮಾಡಿರುವ ಹಾಸ್ಯಾಸ್ಪದ ಆರೋಪಗಳಿಗೆ ಪ್ರತಿಕ್ರಿಯಿಸಬೇಕು ಎಂದರೂ ಅದು ಅಸಂಗತವೆನಿಸುತ್ತದೆ. ಗೇಲ್ ಬರೆದಿರುವುದನ್ನು ಓದಿದಾಗ, ಅಮ್ಮನ ಬಳಿ ಹೊಸದಾಗಿ ಬಂದವರಿಗೆ ಅಥವಾ ಅಮ್ಮನನ್ನು ನೋಡೇ ಇಲ್ಲದವರಿಗೆ ಗಲಿಬಿಲಿ ಆಗಬಹುದು; ಈ ಕಾರಣದಿಂದ ನಾನಿಲ್ಲಿ ಕೆಲವಾದರು ವಿಷಯಗಳನ್ನು ಹೇಳಬೇಕಾಗಿದೆ. ೧೯೯೧ರಿಂದ ಅಮ್ಮ ಸಂಜೆ ಭಜನೆ ಆದಮೇಲೆ ಅಮ್ಮನೊಂದಿಗೆ ಸಮಯ ಕಳೆಯಲು ಅವಕಾಶಮಾಡಿಕೊಟ್ಟಿದ್ದರು. ಹದಿನೆಂಟು ವರ್ಷಗಳ ಕಾಲ ಸಂಜೆ ಭಜನೆ ಆದ ಮೇಲೆ ಅಮ್ಮನೊಟ್ಟಿಗೆ ಇರುತ್ತಿದ್ದೆ. ಹಲವಾರು ಬಾರಿ ಮರುದಿನ ಮುಂಜಾನೆಯವರೆಗೂ ಅಮ್ಮನ ಜೊತೆ ಇರುತ್ತಿದ್ದೆ. ಅಮ್ಮ ಕುರ್ಚಿಯಲ್ಲಿ ಕುಳಿತು ಜನರೊಂದಿಗೆ ಮಾತಡುತ್ತಿದ್ದಾಗ ನಾನು ಅಮ್ಮನ ಕುರ್ಚಿಯ ಪಕ್ಕದಲ್ಲೇ ಕುಳಿತಿರುತ್ತಿದ್ದೆ. ಅಮ್ಮನ ಕೋಣೆಗೆ ಹೊಂದಿಕೊಂಡು ರಿಸೆಪ್ಷನ್ (ಬಂದವರನ್ನು ಸ್ವೀಕರಿಸಲು) ರೂಮು ಕಟ್ಟಿದ ಮೇಲೆ, ಆಗಲೂ ಅಮ್ಮನ ಜೊತೆ ಸಂಜೆಯ ಸಮಯ ಕಳೆಯುತ್ತಲಿದ್ದೆ. ಅಮ್ಮ, ಸ್ವಾಮೀಜಿ ಅಥವಾ ಅಮೃತಾತ್ಮನಂದ ಸ್ವಾಮೀಜಿ ಅಥವಾ ಇತರ ಯಾವುದೇ ಸ್ವಾಮೀಜಿಗಳು ಇರುವಾಗ ಅಸಂಖ್ಯಾತ ಸಂದರ್ಭಗಳಲ್ಲಿ ನಾನು ಅಮ್ಮನ ಜೊತೆ ಇರುತ್ತಿದ್ದೆ. ಅವರ ಮೇಲ್ ಗೇಲ್ ಆರೋಪಿಸುವ ದುರ್ನಡತೆಯ ಕುರುಹು ಒಮ್ಮೆ ಕೂಡಾ ನನ್ನ ಗಮನಕ್ಕೆ ಬಂದಿಲ್ಲ. ಹತ್ತು ವರ್ಷಗಳಕಾಲ ದಿನಕ್ಕೆ ಎರಡು ಸಲ -ಅಮ್ಮ ಭಜನೆಗೆ ಹೋಗಿದ್ದಾಗ ಮತ್ತು ದರ್ಶನಕ್ಕೆ ಹೋಗಿದ್ದಾಗ- ನಾನು ಅಮ್ಮನ ಕೋಣೆಯನ್ನು ಶುಚಿಮಾಡುತ್ತಿದ್ದೆ. ಅಮ್ಮನ ಹಾಸಿಗೆ ಸರಿಮಾಡುತ್ತಿದ್ದೆ, ಶೀಟ್ ಗಳನ್ನು ಬದಲಿಸುತ್ತಿದ್ದೆ. ಅಮ್ಮ ಹಾಸಿಗೆಯ ಮೇಲೆ ಯಾವಾಗಲಾದರೊಮ್ಮೆ ಕುಳಿತುಕೊಳುತ್ತಿದ್ದರು; ಅಮ್ಮ ಮಲಗುತ್ತಿದ್ದುದು ಯಾವಾಗಲೂ ನೆಲದ ಮೇಲೇಯೇ. ಅದೆಷ್ಟೋ ವರ್ಷ ನಾನು ಯಾತ್ರೆಯ ಸಮಯದಲ್ಲಿ ಅಮ್ಮನ ಬಟ್ಟೆಗಳನ್ನೂ, ಶೀಟುಗಳನ್ನು, ಟವೆಲ್ಲುಗಳನ್ನೂ ತೊಳೆಯುತ್ತಿದ್ದೆ. ಅಸಂಬದ್ಧವಾದ ಏನೂ ನನಗೆ ಕಿಂಚಿತ್ತೂ ಕಂಡುಬರಲಿಲ್ಲ ಎಂದು ಪ್ರತ್ಯೇಕವಾಗಿ ಹೇಳಲೇ ಬೇಕಿಲ್ಲ.
“ಅಮ್ಮ ಮತ್ತು ಸ್ವಾಮಿಗಳ ವಿರುದ್ಧದ ಅವಳ ಆರೋಪಗಳು ಎಷ್ಟು ಅಸಂಬದ್ಧವಾಗಿವೆ ಎಂದರೆ ಗೇಲ್ ಅಂಥವಳು ಇಷ್ಟು ಕೀಳುಮಟ್ಟಕ್ಕೆ ಇಳಿಯಬಲ್ಲಳಾ ಎನ್ನುವುದನ್ನು ನಂಬುವುದೇ ಕಷ್ಟವಾಗುತ್ತಿದೆ. ಹೀಗಿದ್ದೂ, ಅಮ್ಮ ಗೇಲ್ ಳನ್ನು ನಾವು ಯಾರೂ ಅರ್ಥಮಾಡಿಕೊಳ್ಳಲಾಗದಷ್ಟು ಈಗಲೂ ಪ್ರೀತಿಸುತ್ತಿರುತ್ತಾರೆ ಎಂದು ನನಗೆ ಗೊತ್ತು. ಗೇಲ್ ಈ ವಾಸ್ತವತೆಯನ್ನು ಅರಿತುಕೊಳ್ಳುವ ದಿನ ಬರಲಿ!”
ಎಲ್ಲರಿಗಿಂತಾ ಹೆಚ್ಚಾಗಿ ಅಮೃತಾತ್ಮನಂದ ಸ್ವಾಮಿಯವರು ಗೇಲ್ ಳ ದ್ವೇಷಕ್ಕೆ ಗುರಿಯಾಗಿದ್ದರು. ಯಾವುದೋ ಅವ್ಯಕ್ತ ಕಾರಣದಿಂದಾಗಿ ತನ್ನ ಮನಸ್ಸಿನ ಅಂಧಕಾರವನ್ನು ಹೆಚ್ಚಾಗಿ ಅವರ ಮೇಲೆ ಹೊರಿಸುತ್ತಿದ್ದಳು. ಅವರು ಯಾವಾಗಲೂ ಸ್ನೇಹಪರರಾದ ಕರುಣೆಯುಳ್ಳ ಸ್ವಾಮಿಯಾಗಿಯೇ ನನಗೆ ಗೊತ್ತಿರುವುದು; ಆದರೆ ಅವಳ ದೃಷ್ಟಿಯಲ್ಲಿ ಅವರು ಮಾಡಿದ್ದು ಯಾವುದೂ ಸರಿಯಲ್ಲ ಎನ್ನುವಂತಾಗಿತ್ತು.
ಆದರೆ, ಸ್ವಾಮಿ ಅಮೃತಸ್ವರೂಪಾನಂದ (ಪೂರ್ವಾಶ್ರಮದ ಹೆಸರು ಬಾಲು) ಅಥವಾ ಸ್ವಾಮೀಜಿ ಅವರ ವಿರುದ್ಧ ಗೇಲ್ ಎಂದೂ ಏನೂ ನಕಾರಾತ್ಮಕವಾಗಿ ಹೇಳಿರುವುದನ್ನು ನಾನು ಕೇಳಿಲ್ಲ. ಬದಲಿಗೆ ಸ್ವಾಮೀಜಿ ಒಬ್ಬರೇ ಅವಳಿಗೆ ಇಷ್ಟವಾದ ಸ್ವಾಮಿ ಎಂದೂ, ಅವರು ಮಾತ್ರ ತನ್ನ ಸೋದರನಂತೆ ತೋರುವರು ಎಂದೂ ಹೇಳಿದ್ದು ನನಗಿನ್ನೂ ನೆನಪಿದೆ. ಹೀಗಿರುವಾಗ, ಸ್ವಕಲ್ಪಿತ ವಿಚಾರಗಳು ತುಂಬಿದ ತನ್ನ ಪುಸ್ತಕದಲ್ಲಿ, ಹೇಸಿಗೆಬರಿಸುವಂಥ ಸುಳ್ಳಿನ ಕಂತೆಯನ್ನು ಅವಳು ಹೆಣೆದಿರುವುದು ಅಮ್ಮನ ನಂತರ ಸ್ವಾಮೀಜಿಯ ಮೇಲೇ ಎಂದು ನೋಡಿದಾಗ ನನಗೆ ದಂಗುಬಡಿದಂತಾಗುತ್ತಿದೆ. ಸ್ವಾಮೀಜಿಯವರು ಆಶ್ರಮದ ಅತ್ಯಂತ ಹಿರಿಯ ಸ್ವಾಮಿಯಾಗಿರುವರು; ಜಗತ್ತಿನ ಎಲ್ಲೆಡೆ ಅವರನ್ನು ಜನ ಗೌರವಿಸುತ್ತಾರೆ. ಅವರ ಬಗ್ಗೆ ಹೀಗೆ ಬರೆದು ಅಮ್ಮನಿಗೆ ಹೆಚ್ಚಿನ ನೋವು ಉಂಟುಮಾಡುವುದು ಅವಳ ಉದ್ದೇಶ ಎಂದು ತೋರುತ್ತದೆ. ಅವರು ಅತ್ಯಂತ ಮುಗ್ಧರು ಮತ್ತು ತಮ್ಮ ಗುರುವಿನ ಬಳಿ ಅತ್ಯಂತ ಭಕ್ತಿಪೂರ್ವಕವಾಗಿ ನೆಡೆದುಕೊಳ್ಳುತ್ತಾರೆ.
ಸಿಟ್ಟು ಅಥವಾ ಸೇಡಿನಿಂದಾಗಿ ನಾನು ಇಲ್ಲಿ ನನ್ನ ನೆನಪುಗಳನ್ನು ಹಂಚಿಕೊಂಡಿಲ್ಲ. ಯಾರದೇ ದುರುದ್ದೇಶದಿಂದಾಗಿ ಸತ್ಯವನ್ನು ತಿರುಚಲಾಗದು, ಬದಲಾಯಿಸಲಾಗದು. ಗೇಲ್ ಇಷ್ಟೊಂದು ಶುದ್ಧಸುಳ್ಳಿನ ಕತೆಗಳನ್ನು ಎಲ್ಲೆಡೆ ಹಬ್ಬುತ್ತಿರುವಾಗ ನನಗೆ ಮೌನವಾಗಿ ಸುಮ್ಮನೆ ಕುಳಿತಿರುವುದು ಆಗಲಿಲ್ಲ. ಅಮ್ಮ ಮತ್ತು ಸ್ವಾಮಿಗಳ ವಿರುದ್ಧದ ಅವಳ ಆರೋಪಗಳು ಎಷ್ಟು ಅಸಂಬದ್ಧವಾಗಿವೆ ಎಂದರೆ ಗೇಲ್ ಅಂಥವಳು ಇಷ್ಟು ಕೀಳುಮಟ್ಟಕ್ಕೆ ಇಳಿಯಬಲ್ಲಳಾ ಎನ್ನುವುದನ್ನು ನಂಬುವುದೇ ಕಷ್ಟವಾಗುತ್ತಿದೆ. ಹೀಗಿದ್ದೂ, ಅಮ್ಮ ಗೇಲ್ ಳನ್ನು ನಾವು ಯಾರೂ ಅರ್ಥಮಾಡಿಕೊಳ್ಳಲಾಗದಷ್ಟು ಈಗಲೂ ಪ್ರೀತಿಸುತ್ತಿರುತ್ತಾರೆ ಎಂದು ನನಗೆ ಗೊತ್ತು. ಗೇಲ್ ಈ ವಾಸ್ತವತೆಯನ್ನು ಅರಿತುಕೊಳ್ಳುವ ದಿನ ಬರಲಿ!
– ಮೀರ
Source: A Letter From Mira