ಮಾತಾ ಅಮೃತಾನಂದಮಯಿ ಮಠದ ವಿರುದ್ಧದ ಆರೋಪಗಳಿಗೆ ಅಮ್ಮ ನೀಡಿದ ಸ್ವಷ್ಟೀಕರಣ

ಮಾತಾ ಅಮೃತಾನಂದಮಯಿ ಮಠದ ವಿರುದ್ಧದ ಆರೋಪಗಳಿಗೆ
ಅಮ್ಮ ನೀಡಿದ ಸ್ವಷ್ಟೀಕರಣ
(ಪಾಲಕ್ಕಾಡ್ ಬ್ರಹ್ಮಸ್ಥಾನ ಮಹೋತ್ಸವದ ಸಂದರ್ಭ, ೨೦೧೪ ಫೆಬ್ರವರಿ ೨೨ರಂದು)

“ಪ್ರತಿವರ್ಷವೂ ಆಶ್ರಮವು (ಮಾತಾ ಅಮೃತಾನಂದಮಯಿ ಮಠವು) ಲೆಕ್ಕಪತ್ರಗಳನ್ನು ಸರ್ಕಾರಕ್ಕೆ ತಪ್ಪದೇ ಒಪ್ಪಿಸುತ್ತದೆ. ಎಲ್ಲವೂ ನಡೆಯಬೇಕಾದ ರೀತಿಯಲ್ಲೇ ನಡೆದಿದೆ. ಕೆಲವರು ಅಸಂಬದ್ಧವಾದ ಮಾತುಗಳನ್ನಾಡಿ ಅಪಾರ್ಥ ಕಲ್ಪಿಸಲು ಪ್ರಯತ್ನಿಸುತ್ತಿದ್ದಾರೆ, ಅಪವ್ಯಾಖ್ಯಾನಗಳನ್ನು ಮಾಡುತ್ತಿದ್ದಾರೆ. ಅವರು ಆರೋಪಿಸುವ ಹಾಗೆ ನಮ್ಮಲ್ಲಿ ಕೋಟಿಗಟ್ಟಲೆ ಹಣ ಇದ್ದಿದ್ದರೆ, ಭಾರತದಲ್ಲೂ ಇಡೀ ಪ್ರಪಂಚದಲ್ಲೂ ಬಡತನವನ್ನೇ ನಿರ್ಮೂಲನ ಮಾಡುತ್ತಿದೆ. ಅದೇ ನನ್ನ ಹೆಬ್ಬಯಕೆ. ನಮ್ಮ ಆಶ್ರಮಕ್ಕೆ ಯಾವುದೇ ಮತವಾಗಲೀ ಜಾತಿಯಾಗಲೀ ಅಥವಾ ಸಮುದಾಯವಾಗಲೀ ಹಣ ನೀಡುವುದಿಲ್ಲ. ಸದಸ್ಯತ್ವ ಶುಲ್ಕವೆಂದೂ ನಾವು ಯಾರಿಂದಲೂ ಹಣ ವಸೂಲಿ ಮಾಡುವುದಿಲ್ಲ. ನಮ್ಮಲ್ಲಿ ಇರುವುದು ಕೇವಲ ನನ್ನ ಮಕ್ಕಳ ತ್ಯಾಗದಿಂದಾಗಿ ಬಂದಿದ್ದು.

“ನಮ್ಮ ಈ ಸಂಸ್ಥೆಯು ಸೇವೆಯನ್ನು ಮಾಡುವಂಥದು. ಜನರಲ್ಲಿ ಸೇವಾಮನೋಭಾವವನ್ನು ವರ್ಧಿಸಿಕೊಳ್ಳಲು ಸಹಾಯವನ್ನು ಮಾಡುವ ಸಂಸ್ಥೆ ಇದು. ಗುಜರಾತಿನಲ್ಲಿ ಭೂಕಂಪವಾದ ಬಳಿಕ (೨೦೦೧ರಲ್ಲಿ), ಆಶ್ರಮವು ಅಲ್ಲಿನ ಮೂರು ಹಳ್ಳಿಗಳನ್ನು ಪುನರ್ನಿರ್ಮಾಣ ಮಾಡಿಕೊಟ್ಟಿತು. ಈಗ, ಸುನಾಮಿಯಂಥಹ ದುರಂತಗಳ ನಂತರ ಪರಿಹಾರವಾಗಿ ಬಡವರಿಗೆ ಆಶ್ರಮವು ಮನೆಗಳನ್ನು ಕಟ್ಟಿಕೊಡುವಾಗ, ಗುಜರಾತಿನ ಆ ಹಳ್ಳಿಗಳಿಂದ ೮೫-೯೦ ವರ್ಷದವರೂ ಕೂಡ ಸೇವೆಸಲ್ಲಿಸಬೇಕೆಂದು ಬರುತ್ತಾರೆ.

“ವ್ಯಕ್ತಿಯ ತಿಳುವಳಿಕೆಯ ಮಟ್ಟ ಎಷ್ಟೇ ಇರಲಿ, ಅವನ ದೃಷ್ಟಿಕೋನ ಯಾವುದೇ ಇರಲಿ – ಅವನ ಪ್ರಕಾರ ಅದೇ ಸರಿ. ಅದು ಮಾತ್ರ ಸರಿ. ಹೆಚ್ಚಿನ ಜನರ ಆಲೋಚನೆ ಈ ರೀತಿಯಿದೆ.

“ನಮಗೆ ದೃಷ್ಟಿ ಇದೆ, ಆದರೆ ದೃಷ್ಟಿಕೋನವಿಲ್ಲ. ಈಗ ನಾವು ಕಾಣುತ್ತಿರುವುದು ಈ ಪರಿಸ್ಥಿತಿಯನ್ನೇ. ನಾನು ಯಾರನ್ನೂ ’ನನ್ನ ಸೇವೆ ಮಾಡಿರಿ’ ಎಂದು ಕೇಳಿಕೊಂಡಿಲ್ಲ. ನಾನೇ ಎಲ್ಲರ ಸೇವೆ ಮಾಡುತ್ತೇನೆ. ನಾನು ನನ್ನ ಮಕ್ಕಳ ಸೇವೆಯನ್ನು ಮಾಡುವ ತಾಯಿ ಮಾತ್ರ. ನಾವು ಯಾರಿಂದಲೂ ಕಳವು ಮಾಡುತ್ತಿಲ್ಲ, ಯಾರಿಂದಲೂ ಯಾಚಿಸಿ ಪಡೆಯುತ್ತಿಲ್ಲ. ಯಾರೂ ಆಲಸಿಗಳಾಗಿ ಇಲ್ಲಿ ಕುಳಿತಿಲ್ಲ. ನಾವು ಕಷ್ಟಪಟ್ಟು ಪರಿಶ್ರಮಿಸುತ್ತಿದ್ದೇವೆ ಹಾಗು ಇತರರ ಸೇವೆ ಮಾಡುತ್ತಿದ್ದೇವೆ. ನಾನು ದಿನಕ್ಕೆ ಒಪ್ಪತ್ತೇ ಆಹಾರ ಸೇವನೆ ಮಾಡುವುದು. ಕೆಲವು ದಿನಗಳಂತೂ ಏನೂ ತಿನ್ನುವುದೇ ಇಲ್ಲ. ಉಣ್ಣಲಿ ಬಿಡಲಿ, ಪ್ರತೀ ದಿನ ಹತ್ತಾರು ಗಂಟೆ ಕೂತು ಭಕ್ತರನ್ನು ಭೇಟಿಮಾಡುತ್ತೇನೆ. ಕೋಣೆಗೆ ಮರಳಿಬರಲು, ಪ್ರಪಂಚದ ಎಲ್ಲೆಡೆಯಿಂದ ಬಂದಿರುವ ನೂರಾರು ಪತ್ರಗಳನ್ನು ಓದುತ್ತೇನೆ; ಸಂಘಸಂಸ್ಥೆಗಳನ್ನು ನೋಡಿಕೊಳ್ಳಬೇಕು. ಮಕ್ಕಳು ಧ್ಯಾನ ಮಾಡಲು ಮಾರ್ಗದರ್ಶಿಸುತ್ತೇನೆ, ಪ್ರಶ್ನೋತ್ತರಕ್ಕೆ ಅವಕಾಶ ನೀಡುತ್ತೇನೆ. ಇಲ್ಲಿ ಯಾರೂ ಸೋಮಾರಿಗಳಾಗಿ ಕುಳಿತಿಲ್ಲ. ನನಗೆ ಯಾವುದೇ ಕೆಲಸವನ್ನು ಮಾಡಲು ಹಿಂಜರಿಕೆಯಿಲ್ಲ.

“ನಾನು ಯಾರನ್ನೂ ದೂಷಿಸುತ್ತಿಲ್ಲ. ನನ್ನ ಮಕ್ಕಳ ತ್ಯಾಗ ಮತ್ತು ಸಮರ್ಪಣೆಯ ಬಗ್ಗೆ ಹೇಳುತ್ತಿದ್ದೇನೆ ಅಷ್ಟೇ. ಅದರಿಂದಾಗಿ, ನಾವು ಅನೇಕ ಸೇವಾಕಾರ್ಯಗಳನ್ನು ಸಾಧಿಸಬಹುದಾಗಿದೆ. ದೋಷಾರೋಪ ಮಾಡುವವರು ಅನೇಕ ಜನರಿದ್ದಾರೆ, ಆದರೆ ಅವರು ಯಾರೂ ಸಮಾಜಕ್ಕೆ ಸಹಾಯ ಮಾಡುಲು ಮುಂದೆ ಬರುತ್ತಿಲ್ಲ. ಇದು ದುಃಖದ ವಿಷಯ.

ಅಮ್ಮ ಯಾರಿಗೂ ’ದೇವರನ್ನು ನಂಬಿ’ ಎಂದು ಹೇಳುವುದಿಲ್ಲ. “ದೇವರಿದ್ದಾನೆಯೆ?” ಎಂಬುದಲ್ಲ ಪ್ರಶ್ನೆ. “ನೊಂದರವು ಇದ್ದಾರೆಯೆ?” ಎಂಬುದೇ ನಾವು ಕೇಳಿಕೊಳ್ಳಬೇಕಾದ ಪ್ರಶ್ನೆ. “ಅವರ ಸಂಕಟಗಳನ್ನು ನಾವು ಹೇಗೆ ನಿವಾರಿಸಬಹುದು?” ಈ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಲು ಮುಂದೆ ಬರುವ ಯಾರದೇ ಪಾದವನ್ನು ತೊಳೆಯಲು ಅಮ್ಮ ಸಿದ್ಧ.

“ಈ ಆಶ್ರಮವು ಶಾಂತಿಯ ಕೇಂದ್ರ. ನನಗೆ ಆತ್ಮ ಸಮರ್ಪಣೆ, ನಿಸ್ವಾರ್ಥ ಸೇವೆ ಮತ್ತು ಪ್ರಾಮ ಇವುಗಳಲ್ಲಿ ನಂಬಿಕೆ ಇದೆ. ನನ್ನ ಮಕ್ಕಳಿಗೆ ನಾನು ಕಲಿಸುತ್ತಿರುವುದೂ ಇದನ್ನೇ. ನಾನು ಒಂದು ತೆರೆದ ಪುಸ್ತಕ. ಹರಡುತ್ತಿರುವ ಎಲ್ಲಾ ಗುಸುಗುಸು ವದಂತಿಗಳು ಅಸತ್ಯವಾದುದು. ತಮ್ಮ ಬಯಕೆಗಳು ಪೂರ್ಣವಾಗದೇ ಹೋದಕಾರಣ, ಕೆಲವರು ಇಲ್ಲಸಲ್ಲದ ಆರೋಪ ಮಾಡತೊಡಗಿದ್ದಾರೆ. ಯಾರೋ, ಎಲ್ಲಿಂದಲೋ, ಮತೀಯ ಸಂಘರ್ಷಗಳನ್ನು ಉಂಟುಮಾಡುವ ಉದ್ದೇಶದಿಂದ, ಜನರು ಪರಸ್ಪರ ಕಾದಾಡುವಂತೆ, ಸಂಘರ್ಷ ಉಂಟುಮಾಡಲು ಪ್ರಯತ್ನಿಸುತ್ತಾ ಕುತಂತ್ರ ನಡೆಸಿದ್ದಾರೆ.

“ಎಲ್ಲರ ಹೃದಯಗಳಲ್ಲಿ ಸಜ್ಜನಿಕೆ ತುಂಬಲಿ, ಎಲ್ಲರ ಮನಸ್ಸೂ ಸಜ್ಜನಿಕೆಯಿಂದ ತುಂಬಲಿ ಎಂದೇ ನನ್ನ ಪ್ರಾರ್ಥನೆ. ನನ್ನ ಮಕ್ಕಳೆ, ಇತರರನ್ನು ಕ್ಷಮಿಸಿ ಆದದ್ದನ್ನು ಮರೆತುಕೊಳ್ಳುವ ಶಕ್ತಿ ನಿಮ್ಮಲ್ಲಿ ಮೂಡಲಿ ಎಂದು ಪ್ರಾರ್ಥಿಸಿ. ಒಳಗೂ ಹೊರಗೂ ಆಶಾಂತಿಯೇ ಇದೆ. ನಾವೆಲ್ಲ ಎತ್ತ ಸಾಗುತ್ತಿದ್ದೇವೋ ಗೊತ್ತಿಲ್ಲ. ಮನಸ್ಸೂ ಒಳೆಯ ಆಲೋಚನೆಗಳಿಂದ ತುಂಬಲಿ!”

(ಮೇಲಿನ ನುಡಿಗಳನ್ನು ಅಮ್ಮ ಪಾಲಕ್ಕಾಡಿನ ಪುತ್ತೂರ್ ನಲ್ಲಿ ಬ್ರಹ್ಮಸ್ಥಾನ ಮಹೋತ್ಸವದ ಸಂದರ್ಭದಲ್ಲಿ ೨೦೧೪ ಫೆಬ್ರವರಿ ೨೨ರಂದು ನುಡಿದರು.)

ಮಾತಾ ಅಮೃತಾನಂದಮಯಿ ಮಠದ ಪರವಾಗಿ

ಸ್ವಾಮಿ ಪೂರ್ಣಾಮೃತಾನಂದ ಪುರಿ,
ಜನರಲ್ ಸೆಕ್ರೆಟರಿ, ಬೋರ್ಡ್ ಆಫ್ ಟ್ರಸ್ಟೀಸ್.

Source: Amma’s Response to the Allegations Against the Mata Amritanandamayi Math

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s