ನನ್ನ ಹೆಸರು ಲಕ್ಷ್ಮಿ. ಹಾಲೆಂಡ್ ಮೂಲದವಳಾದ ನಾನು ಕಳೆದ ೨೯ ವರ್ಷಗಳಿಂದ ಅಮ್ಮನ ಅಮೃತಪುರಿಯ ನಿವಾಸಿಯಾಗಿದ್ದೇನೆ. ಅಲ್ಲದೆ, ಕಳೆದ ೧೯ ವರ್ಷಗಳಿಂದ ಆಶ್ರಮದಲ್ಲಿ ಅಮ್ಮನ ಕೋಣೆಯಲ್ಲಿ ಪೂರ್ಣಾವಧಿ ಅಮ್ಮನ ಸೇವೆ ಮಾಡುತ್ತಲಿದ್ದೇನೆ. ನನ್ನ ಕಡೆಯ ಗಳಿಗೆಯವರೆಗೂ ಅಮ್ಮನ ಸೇವೆಮಾಡುವ ಈ ಸೌಭಾಗ್ಯ ನನ್ನೊಂದಿಗೆ ಇರಬೇಕು ಎನ್ನುವುದೊಂದೇ ನನ್ನ ಮನದಾಳದ ಪ್ರಾರ್ಥನೆ. ನಾನು ಇಲ್ಲಿ ಬರೆಯಬೇಕಾಗಿಬಂದದ್ದು ಏಕೆಂದರೆ ನಾನು ಮತ್ತು ಸ್ವಾಮಿನಿ ಆತ್ಮಪ್ರಾಣ ( ಡಾಕ್ಟರ್ ಲೀಲಾ ) ಅಮ್ಮನನ್ನು ಬಿಟ್ಟು ಹೋದೆವು ಎಂದು ಇಂಟರ್ನೆಟ್ ನಲ್ಲಿ ವದಂತಿಯೊಂದು ಹರಡುತ್ತಿದೆ ಎಂದು ಯಾರೋ ನನ್ನ ಗಮನಕ್ಕೆ ತಂದರು. ಇಲ್ಲ. ನಾವಿಬ್ಬರೂ ಅಮ್ಮನ ಜೊತೆಗೇ ಇದ್ದೇವೆ, ಸೇವಾನಿರತರಾಗಿ ಸಮಾಧಾನದಿಂದ, ತೃಪ್ತಿಯಿಂದ ಇದ್ದೇವೆ. ಗೇಲ್ ಬಗ್ಗೆ ಮತ್ತು ಅವಳೊಂದಿಗಿನ ನನ್ನ ವೈಯಕ್ತಿಕ ಅನುಭವಗಳ ಬಗ್ಗೆ ಕೆಲವು ವಾಸ್ತವ ವಿಚಾರಗಳನ್ನು ಎಲ್ಲರೊಂದಿಗೆ ಹಂಚಿಕೊಳ್ಳಬೇಕಾದುದು ನನ್ನ ಧರ್ಮ ಎಂದು ನನಗೆ ಈ ಹಂತದಲ್ಲಿ ಅನ್ನಿಸುತ್ತಿದೆ.
ಮೊಟ್ಟೆ ಮೊದಲನೆಯದಾಗಿ, ತಾನು ಅಮ್ಮನ ಕೋಣೆಯಲ್ಲಿ ೨೦ ವರ್ಷ ಇದ್ದು ಅಮ್ಮನ ಸೇವೆ ಮಾಡುತ್ತಿದ್ದೆ ಎಂದು ಅವಳು ಹೇಳಿಕೊಂಡಿರುವುದು ನಿಜವಲ್ಲ. ೧೯೯೯ ರಲ್ಲಿ ಅವಳು ಅಮ್ಮನನ್ನು ಬಿಟ್ಟುಹೋಗುವ ಮುಂಚೆ, ಅಂದರೆ ಸುಮಾರು ಐದಾರು ವರ್ಷಗಳಿಂದ ಅಮ್ಮನ ಕೋಣೆಯಲ್ಲಿ ಇರುತ್ತಿರಲಿಲ್ಲ. ಮೇಲಿನ ಮಹಡಿಯ ಕೋಣೆಯಲ್ಲಿರುತ್ತಿದ್ದಳು. ಆಗ ಯಾವಾಗಲಾದರೊಮ್ಮೆ ನನಗೆ ಸಹಾಯ ಮಾಡಲು ಬರುತ್ತಿದ್ದಳಷ್ಟೇ. ನಾನು ಅಮ್ಮನ ಕೋಣೆಯಲ್ಲಿ ಇರಲು ಶುರುಮಾಡುವುದಕ್ಕೆ ಮುಂಚೆಯೂ, ಅಮ್ಮ ಮತ್ತು ಗೇಲ್ ಜೊತೆಗೆ ಇತರ ಹೆಣ್ಣುಮಕ್ಕಳೂ ಇರುತ್ತಿದ್ದರು. ಗೇಲ್ ಕೋಣೆಯಿಂದ ಹೋದಮೇಲೆ ಸ್ವಾಮಿನಿ ಕೃಷ್ಣಾಮೃತ ಪ್ರಾಣ (ಸೌಮ್ಯ, ಆಸ್ಟ್ರೇಲಿಯಾ) ಅಮ್ಮನ ಕೋಣೆಯಲ್ಲಿ ಇರತೊಡಗಿದರು.
೧೯೮೧ರಲ್ಲಿ, ಗೇಲ್ ಮೊದಲ ಬಾರಿಗೆ ಅಮ್ಮನನ್ನು ಕಾಣಲು ಬಂದಾಗ, ಅವಳ ಹತ್ತಿರ ಒಂದು ಜೋಡಿ ಬಟ್ಟೆಯೂ ಇರಲಿಲ್ಲ. ಆಗ ಆಶ್ರಮವೂ ಇರಲಿಲ್ಲ. ಇದ್ದಿದ್ದು ಅಮ್ಮನ ಕುಟುಂಬ ವರ್ಗದವರ ಮನೆ ಮಾತ್ರ. ಹಾಗಿದ್ದೂ, ಅವಳ ಹೆಸರನ್ನಾಗಲಿ, ಊರನ್ನಾಗಲೀ, ಹಿನ್ನೆಲೆಯನ್ನಾಗಲೀ ಏನನ್ನೂ ಕೇಳದೆ ಅಮ್ಮ ಅವಳನ್ನು ಪೂರ್ಣವಾಗಿ ಸ್ವೀಕರಿಸಿದರು, ಎಲ್ಲಾ ಜವಾಬ್ದಾರಿಯನ್ನೂ ಕೊಟ್ಟರು. ಆ ದಿನದಿಂದ ಹಿಡಿದು, ಆಶ್ರಮ ಬಿಟ್ಟು ಹೋದ ದಿನದವರೆಗೂ, ಅವಳು ರಾಣಿಯ ಹಾಗೆ ಇದ್ದಳು. ಅಮ್ಮನ ತಂದೆತಾಯಿಯರ ಮೇಲೆ, ಸೋದರಿಯರ ಮೇಲೆ, ಬಂಧುಗಳ ಮೇಲೆ, ಭಕ್ತರ ಮೇಲೆ, ಆಶ್ರಮವಾಸಿಗಳ ಮೇಲೆ, ಅಮ್ಮನ ಶಿಷ್ಯರ ಮೇಲೂ ಅವಳು ಅಧಿಕಾರ ಚಲಾಯಿಸುತ್ತಿದ್ದಳು. ಗೇಲ್ ಯಾವಾಗಲೂ ಕೆಲವೇ ಕೆಲವರ ಜೊತೆ, ಅದೂ ಅವಳ ಮಾತನ್ನು ಕೇಳುವವರ ಜೊತೆ ಗುಂಪುಮಾಡಿಕೊಂಡಿರುತ್ತಿದ್ದಳು. ಸರ್ವಾಧಿಕಾರಿಯ ಹಾಗೆ, ಇನ್ನೊಬ್ಬರ ಭಾವನೆಗಳ ಬಗ್ಗೆ ಒಂದಿಷ್ಟೂ ಕಳಕಳಿ ಇಲ್ಲದೆ, ಎಲ್ಲರ ಮೇಲೂ ದಬ್ಬಾಳಿಕೆ ಮಾಡುತ್ತಿದ್ದಳು.
ಗೇಲ್, ಎಷ್ಟು ಸಲ ನಾನು ನಿನ್ನ ನಿಯಂತ್ರಣವಿಲ್ಲದ ಕೋಪವನ್ನೂ, ಹಿಂಸಾತ್ಮಕ ಆಕ್ರಮಣವನ್ನೂ ಸಹಿಸಬೇಕಾಯಿತು? ಹೊಡೆಯುತ್ತಿದ್ದೆ, ಒದೆಯುತ್ತಿದ್ದೆ, ಗಿಲ್ಲುತ್ತಿದ್ದೆ, ನನ್ನ ಮುಖದಲ್ಲಿ ನೇರವಾಗಿ ಉಗಿಯುತ್ತಿದ್ದೆ, ಕೂದಲು ಕೀಳುತ್ತಿದ್ದೆ, ಬೆದರಿಸುತ್ತಿದ್ದೆ….. ಇದೆಲ್ಲವೂ ಕಾರ್ಯತಃ ಪ್ರತಿನಿತ್ಯದ ನಿನ್ನ ಕೆಲಸವಾಗಿಹೋಯಿತು. ಬಿಸಿಯಾಗಿದ್ದ ಐರನ್ ಬಾಕ್ಸ್ ಅನ್ನು ನನ್ನ ಮೇಲೆ ನೀನು ಎಸೆದಿದ್ದು ನೆನಪಿದೆಯಾ? ಆಶ್ರಮವಾಸಿಗಳು ಮಾತ್ರವಲ್ಲ, ಯೂರೋಪ್ ಮತ್ತು ಅಮೆರಿಕಾದ ಭಕ್ತರೂ ಸಹ ನಿನ್ನ ಇಂಥ ಘಟನೆಗಳಿಗೆ ಸಾಕ್ಷಿಯಿದ್ದಾರೆ.
“ಗೇಲ್, ಎಷ್ಟು ಸಲ ನಾನು ನಿನ್ನ ನಿಯಂತ್ರಣವಿಲ್ಲದ ಕೋಪವನ್ನೂ, ಹಿಂಸಾತ್ಮಕ ಆಕ್ರಮಣವನ್ನೂ ಸಹಿಸಬೇಕಾಯಿತು? ಹೊಡೆಯುತ್ತಿದ್ದೆ, ಒದೆಯುತ್ತಿದ್ದೆ, ಗಿಲ್ಲುತ್ತಿದ್ದೆ, ನನ್ನ ಮುಖದಲ್ಲಿ ನೇರವಾಗಿ ಉಗಿಯುತ್ತಿದ್ದೆ, ಕೂದಲು ಕೀಳುತ್ತಿದ್ದೆ, ಬೆದರಿಸುತ್ತಿದ್ದೆ….. ಇದೆಲ್ಲವೂ ಕಾರ್ಯತಃ ಪ್ರತಿನಿತ್ಯದ ನಿನ್ನ ಕೆಲಸವಾಗಿಹೋಯಿತು. ಬಿಸಿಯಾಗಿದ್ದ ಐರನ್ ಬಾಕ್ಸ್ ಅನ್ನು ನನ್ನ ಮೇಲೆ ನೀನು ಎಸೆದಿದ್ದು ನೆನಪಿದೆಯಾ?”
ನಿನ್ನನ್ನು ಆಶ್ರಮದಲ್ಲಿ ಯಾರೂ ಪ್ರೀತಿಯಿಂದ ಕಾಣಲಿಲ್ಲ, ಯಾರೂ ನಿನಗೆ ಬೆಂಬಲ ಇರಲಿಲ್ಲ ಎನ್ನುವುದೆಲ್ಲಾ ಎಷ್ಟು ಸುಳ್ಳು ಅಲ್ಲವೆ! ವಾಸ್ತವವಾಗಿ, ಭಾರತದ ಮತ್ತು ಪಶ್ಚಿಮದ ಆಶ್ರಮವಾಸಿಗಳೆಲ್ಲರೂ, ಭಕ್ತರು ಮತ್ತು ಶಿಷ್ಯರೂ ಸಹ -ಎಲ್ಲರೂ ನಿನ್ನನ್ನು ಎಷ್ಟು ಪ್ರೀತಿ ಮತ್ತು ಗೌರವದಿಂದ ಕಾಣುತ್ತಿದ್ದರು. ಭಕ್ತರು ನಿನ್ನನ್ನು ಸಾಂಪ್ರದಾಯಿಕ ರೀತಿಯಲ್ಲಿ ಬರಮಾಡಿಕೊಳ್ಳುತ್ತಿರಲಿಲ್ಲವೆ, ನಿನ್ನ ಪಾದಪೂಜೆಯನ್ನು ಮಾಡುತ್ತಿರಲಿಲ್ಲವೆ? ನಿನಗೆ ಭಾರತೀಯ ಆಹಾರವನ್ನು ತಂದುಕೊಡಲು ಭಾರತೀಯ ಆಶ್ರಮವಾಸಿಗಳು, ಪಶ್ಚಿಮದ ಆಹಾರವನ್ನು ತಂದುಕೊಡಲು ಪಶ್ಚಿಮದ ಆಶ್ರಮವಾಸಿಗಳೂ ಇರಲಿಲ್ಲವೆ? ನಿನ್ನ ಬಟ್ಟೆ ಒಗೆಯಲು ಜನರು, ನಿನಗೆ ಮಸಾಜ್ ಮಾಡಲು ಜನರು ಇರಲಿಲ್ಲವೆ? ನಿನ್ನ ಅಂತಃಸಾಕ್ಷಿಗೆ ಮೋಸಮಾಡದೆ ನೀನು ‘ಇದೆಲ್ಲಾ ನಿಜವಲ್ಲ’ ಎಂದು ಹೇಳಲು ನಿನಗೆ ಸಾಧ್ಯವಿದೆಯೇ?
ಗೇಲ್, ವಾಸ್ತವದಲ್ಲಿ, ನೀನು ಸನ್ಯಾಸ ಜೀವನವನ್ನು ಯಾಕೆ ಬಿಟ್ಟೆ, ಆಶ್ರಮ ಜೀವನವನ್ನು ಯಾಕೆ ಬಿಟ್ಟೆ ಎಂಬುದು ನಿನಗೂ, ನನಗೂ ಹಾಗು ಕೆಲವರಿಗೆ ಚೆನ್ನಾಗಿ ಗೊತ್ತು. ಅಮ್ಮನ ಒಬ್ಬ ಅಮೆರಿಕನ್ ಭಕ್ತನನ್ನು ನೀನು ಪ್ರೇಮಿಸುತ್ತಿದ್ದೆ. ನೀನು ಹೋದಮೇಲೆ ಆತನೇ ವಿಷಯವನ್ನು ಅಮ್ಮನ ಬಳಿ ಹೇಳಿದ. ಅವನು ಗಾಬರಿಯಾಗಿ, ನೀನು ಆತನಿಗೆ ಕಳಿಸಿದ್ದ ಈಮೇಲ್ ಗಳನ್ನು ಅಮ್ಮನಿಗೆ ಆತನೇ ತೋರಿಸಿದ. ಬ್ರಹ್ಮಚಾರಿ ಶುಭಾಮೃತ ಮತ್ತು ಇನ್ನೊಬ್ಬ ಆಶ್ರಮವಾಸಿ ಈ ಈಮೇಲ್ ಗಳನ್ನು ಮಲಯಾಳದಲ್ಲಿ ಅನುವಾದಿಸಿ ಅಮ್ಮನಿಗೆ ಹೇಳುವಾಗ ನಾನು ಅಲ್ಲಿದ್ದೆ. ಆ ನಿಷ್ಕಳಂಕ ವ್ಯಕ್ತಿಯನ್ನು ಅಮ್ಮನಿಂದ ದೂರಮಾಡಿ ನಿನ್ನ ಬುಟ್ಟಿಗೆ ಹಾಕಿಕೊಳ್ಳಲು ನೀನು ಪ್ರಯತ್ನಿಸಿದೆ. ಆದರೆ ನಿನ್ನ ಬಯಕೆ ಈಡೇರಲಿಲ್ಲ. ನಿರೀಕ್ಷೆಗಳು ಈಡೇರದೆ, ಬಯಕೆಗಳು ಪೂರೈಕೆಯಾಗದೆ ಅವು ನಿನ್ನಲ್ಲಿ ಸೇಡು, ಅಸೂಯೆಗಳನ್ನು ತುಂಬಿದೆ, ಗೇಲ್! ಜನರ ನಿಷ್ಕಳಂಕ ಹೃದಯಗಳಲ್ಲಿ ನಿನ್ನ ಸುಳ್ಳುಗಳ ಹಾಗು ದುಷ್ಟತೆಗಳ ವಿಷವನ್ನು ಕಕ್ಕಿ ಅವರಲ್ಲಿ ರೋಗ ಹರಡಿಸುವ ನಿನ್ನ ವ್ಯರ್ಥ ಪ್ರಯತ್ನದಿಂದಾಗಿ ನೀನೊಂದು ವಿಷಸರ್ಪವಾಗಿ ಮಾರ್ಪಟ್ಟಿದ್ದೀಯ.
“ಗೇಲ್, ವಾಸ್ತವದಲ್ಲಿ, ನೀನು ಸನ್ಯಾಸ ಜೀವನವನ್ನು ಯಾಕೆ ಬಿಟ್ಟೆ, ಆಶ್ರಮ ಜೀವನವನ್ನು ಯಾಕೆ ಬಿಟ್ಟೆ ಎಂಬುದು ನಿನಗೂ, ನನಗೂ ಹಾಗು ಕೆಲವರಿಗೆ ಚೆನ್ನಾಗಿ ಗೊತ್ತು. ಅಮ್ಮನ ಒಬ್ಬ ಅಮೆರಿಕನ್ ಭಕ್ತನನ್ನು ನೀನು ಪ್ರೇಮಿಸುತ್ತಿದ್ದೆ.”
ನಿನಗೆ ಒಂದು ಆಸೆಯಿತ್ತು; ಪ್ರಪಂಚದಲ್ಲೆಲ್ಲಾ ಯಾತ್ರೆ ಮಾಡುತ್ತಾ ನೀನಾಗಿಯೇ ಕಾರ್ಯಕ್ರಮಗಳನ್ನು ಕೊಡಬೇಕು ಎಂಬ ಆಸೆ. ಈ ನಿನ್ನ ಬಯಕೆಯನ್ನು ನೀನೇ ನನ್ನ ಹತ್ತಿರ ಮತ್ತು ಕೆಲವರ ಹತ್ತಿರ ಹೇಳಿಕೊಂಡಿದ್ದೀಯೆ. ಇಂಥ ಆಸೆಗಳಿಂದಾಗಿ ನೀನು ಆಶ್ರಮ ತೊರೆದೆ. ಏನೇಆದರೂ, ನಿನ್ನ ಸ್ವಾರ್ಥಪೂರಿತ ಉದ್ದೇಶಗಳಾಗಲೀ ಕಸುಗಳಾಗಲೀ ಯಾವುದೂ ಈಡೇರಲಿಲ್ಲ. ಮಹಾತ್ಮರು, ಸದ್ಗುರುಗಳು ಹೇಳಿದ್ದಾರೆ, “ಬಯಕೆಗಳು ಈಡೇರದಿದ್ದಾಗ ಅವು ಸಿಟ್ಟು, ಸೇಡು ಇಂಥ ಭಾವಗಳಾಗಿ ಪ್ರಕಟವಾಗುತ್ತವೆ” ಎಂದು. ಅವುಗಳಿಂದಾಗಿ ಕಡೆಯಲ್ಲಿ ನಾಶವಾಗುವವರು ನಾವೇ. ನಿನಗೆ ಈಗ ಆಗುತ್ತಿರುವುದೂ ಇದೇ.
ಅಪಾರ ಕರುಣೆಯಿಂದಾಗಿ ಅಮ್ಮ, ಮುಂದೆ ನಿನ್ನಲ್ಲಿ ಸ್ವಲ್ಪವಾದರೂ ಬದಲಾವಣೆ ಆದೀತೆಂದು ಆಶಿಸಿ, ನಿನಗೆ ಅದೆಷ್ಟು ಅವಕಾಶಗಳನ್ನು ಕರುಣಿಸಿದರು! ಅಂತಿಮವಾಗಿ ಅಮ್ಮ ನಿನಗೆ ಸನ್ಯಾಸವನ್ನೂ ಕರುಣಿಸಿದರು! ಸನ್ಯಾಸ ಎಂಬುದು ಎಷ್ಟು ಪವಿತ್ರವಾದ ಜೀವನವೆಂಬುದು ನಿನಗೆ ಏನಾದರೂ ಗೊತ್ತೇ? ಮಹಾತ್ಮರಿಗೆ ಹಿಂದೆ ಆದದ್ದೂ, ಮುಂದೆ ಆಗುವುದೂ ಮತ್ತೆ ವರ್ತಮಾನ – ಎಲ್ಲವೂ ತಿಳಿದಿರುತ್ತದೆ. ಹಾಗಿದ್ದೂ ಅವರು ಯಾವುದೇ ಭಿನ್ನ ಭೇದ ಮಾಡದೆ ಬೆಳೆಯಲು – ಪ್ರಗತಿ ಹೊಂದಲು ಎಲ್ಲರಿಗೂ ಅವಕಾಶಗಳನ್ನು ಕೊಡುತ್ತಾರೆ. ಭೂಮಿ ತಾಯಿಯ ಹಾಗೆ ತಾಳ್ಮೆಯಿಂದ ಕಾಯುತ್ತಾರೆ. ಆದರೆ ನೀನು, ನಿನ್ನ ಇಷ್ಟಾನಿಷ್ಟಗಳಿಗೆ ಮಾತ್ರ ಬೆಲೆ ಕೊಟ್ಟುಕೊಂಡು, ಅಂಥಾ ಅಮೂಲ್ಯ ಅವಕಾಶಗಳನ್ನೆಲ್ಲಾ ಗಾಳಿಗೆ ತೂರಿಬಿಟ್ಟೆ. ನಿನ್ನ ಮನಸ್ಸಿನ ದುರ್ಗುಣಗಳಿಗೆ ದಾಸಿಯಾಗಿ, ಅದರಲ್ಲಿ ಮುಳುಗಿ ಹೋದ ನೀನು ಎಂದಿಗೂ ಅಮ್ಮನ ಪ್ರೇಮ, ಕರುಣೆ ಮತ್ತು ಮಾರ್ಗದರ್ಶನವನ್ನು ಸ್ವೀಕರಿಸುವಂತಾಗಲೇ ಇಲ್ಲ. ನಿನ್ನ ತಪ್ಪುಗಳನ್ನು, ನಿನ್ನ ನ್ಯೂನತೆಗಳನ್ನು, ನಿನ್ನ ದೌರ್ಬಲ್ಯವನ್ನು ಅಮ್ಮನ ಮೇಲೇ ನೀನು ಹೊರಿಸಿಬೆಟ್ಟೆ. ಈ ಕಾರ್ಯ ವಿಧಾನದಲ್ಲಿ, ನಿನ್ನ ಮನಸ್ಸು ಅಮ್ಮನ ಪ್ರತಿ ದ್ವೇಷದಿಂದ ತುಂಬಿಹೋಗಿದೆ.
“ಈಗ ನಮಗೆ ತಿಳಿದಿದೆ ನೀನು ಎಷ್ಟು ಸಮರ್ಥೆ ಎಂದು- ಇಷ್ಟೊಂದು ಸಿಟ್ಟು, ದ್ವೇಷ, ಕುಹಕಬುದ್ಧಿ -ನನಗೆ ಈ ದುರ್ಘಟನೆಗಳೆಲ್ಲವೂ ಆಕಸ್ಮಿಕವೋ ಅಥವಾ ಎಂಬ ಸಂಶಯವನ್ನು ಮೂಡಿಸುತ್ತಿದೆ.”
ನಿನ್ನ ಮನೋಭಾವ ನಿನ್ನ ನಡವಳಿಕೆ ನಮಗೆ ಅನೇಕ ಸಲ ನಿಜವಾಗಿಯೂ ಭಯಹುಟ್ಟಿಸುತ್ತಿತ್ತು. ಒಮ್ಮೆ ಸ್ವೀಡನ್ನಿನಲ್ಲಿ ನೀನು ಅಮ್ಮನನ್ನು ಒಂದು ದೋಣಿಯಲ್ಲಿ ಹತ್ತಿಸಿಕೊಂಡು, ಅದನ್ನು ನೀರು ಅಳವಿದ್ದ ಕಡೆ ಕೊಂಡೊಯ್ದು, ದೋಣಿಯನ್ನು ತಲೆಕೆಳಗೆ ಮಗುಚಿಹಾಕಿದ್ದು ನಮ್ಮಲ್ಲಿ ಅನೇಕರಿಗೆ ಇನ್ನೂ ಸ್ಪಷ್ಟವಾಗಿ ನೆನಪಿದೆ. ಯಾತ್ರೆಯ ತಂಡದಲ್ಲಿದ್ದ ನಾವು ಅನೇಕರು ಅಮ್ಮ ನಿನಗೆ “ಆಳವಿರುವ ಕಡೆ ದೋಣಿಯನ್ನು ಹಾಗೆ ಅಲುಗಿಸದಿರು, ಹುಷಾರು!” ಎಂದು ಜೋರಾಗಿ ಹೇಳುತ್ತಿದ್ದುದನ್ನು ಕೇಳಿದೆವು. ತಕ್ಷಣ, ದೋಣಿ ಮುಗುಚಿಕೊಂಡಿದ್ದು ನೋಡಿ ನಾವೆಲ್ಲಾ ಚೀರತೊಡಗಿದೆವು. ಅಮ್ಮ ತಲೆಕೆಳಗಾದ ದೋಣಿಯ ಕೆಳಗೆ ಕೊರೆಯುವ ನೀರಿನಲ್ಲಿ ಕಣ್ಮರೆಯಾಗಿದ್ದರು. ನಮಗೆ ಅದನ್ನು ನೆನೆಸಿಕೊಳ್ಳುವುದೂ ಭಯಂಕರ ಎನಿಸುತ್ತೆ.
ಇನ್ನೊಂದು ಸಲ ನೀನು ವಿಷಪೂರಿತ ನಾಯಿಕೊಡೆಗಳನ್ನು ಹಾಕಿ ಅಮ್ಮನಿಗೆ ಪಲ್ಯ ಮಾಡಿದೆ; ಬ್ರಹ್ಮಚಾರಿಣಿ ಪವಿತ್ರಾಮೃತ (ಲೀಲಾವತಿ) ಮತ್ತು ಬ್ರಹ್ಮಚಾರಿಣಿ ವಿನೀತಾಮೃತ (ಶ್ರೀಲತಾ) ಹಾಗೆ ಮಾಡಬೇಡ ಎಂದು ನಿನ್ನಲ್ಲಿ ವಿನಂತಿಸಿಕೊಂಡರೂ ನೀನು ಕೇಳಲಿಲ್ಲ. ಅದನ್ನು ತಿಂದು ಅಮ್ಮನಿಗೆ ಎರಡು ದಿನ ವಾಂತಿ ನಿಲ್ಲಲಿಲ್ಲ. ರಕ್ತ ಪರೀಕ್ಷೆ ಮಾಡಿದಾಗ ರಕ್ತದಲ್ಲಿ ವಿಷದ ಅಂಶವು ಪ್ರಾಣಕ್ಕೆ ಅಪಾಯವೊಡ್ಡುವ ಮಟ್ಟದಲ್ಲಿದ್ದುದು ಕಂಡುಬಂದಿತ್ತು. ಮತ್ತೊಂದು ಸಂದರ್ಭದಲ್ಲಿ ನೀನು ನಿಗದಿಯಾಗಿದ್ದಕ್ಕಿಂತಾ ಹೆಚ್ಚಿನ ಪ್ರಮಾಣದಲ್ಲಿ ಅಮ್ಮನಿಗೆ ಔಷಧಿಯೊಂದನ್ನು ಕೊಟ್ಟಿದ್ದೆ. ಅಮ್ಮನಿಗೆ ಹುಷಾರು ತಪ್ಪಿತು; ಹೊಟ್ಟೆ ಕೆಟ್ಟಿತು, ತಲೆ ಸುತ್ತು ಬಂತು, ಆಯಾಸವಾಯಿತು. ಆಗ ನೀನು ತಪ್ಪನ್ನು ನನ್ನ ಮೇಲೆ ಹೊರಿಸಲು ಪ್ರಯತ್ನಿಸಿದೆ. ಇದನ್ನೆಲ್ಲಾ ನೀನು ಮರೆಯಲು ಸಾಧ್ಯವೇ ಇಲ್ಲ.
ನಿನ್ನಂತೆಯೇ ಸ್ವಾಮಿನಿ ಕೃಷ್ಣಾಮೃತ ಪ್ರಾಣ ಹಾಗೂ ಸ್ವಾಮಿನಿ ಆತ್ಮಪ್ರಾಣ ಸನ್ಯಾಸ ದೀಕ್ಷೆ ಪಡೆದವರು. ನಿನ್ನ ವಿಕೃತ ಸ್ವಭಾವವನ್ನು ನೋಡಿ ಅವರಿಬ್ಬರಿಗೂ ಆಘಾತವಾಗಿದೆ. ಈಗ ನಮಗೆ ತಿಳಿದಿದೆ ನೀನು ಎಷ್ಟು ಸಮರ್ಥೆ ಎಂದು- ಇಷ್ಟೊಂದು ಸಿಟ್ಟು, ದ್ವೇಷ, ಕುಹಕಬುದ್ಧಿ -ನನಗೆ ಈ ದುರ್ಘಟನೆಗಳೆಲ್ಲವೂ ಆಕಸ್ಮಿಕವೋ ಅಥವಾ ಎಂಬ ಸಂಶಯವನ್ನು ಮೂಡಿಸುತ್ತಿದೆ. ಹೇಗಿದ್ದರೂ, ಅಮ್ಮ ಎಂದಿಗೂ ಯಾರಲ್ಲಿಯೂ ಈ ಘಟನೆಗಳ ಬಗ್ಗೆ ಹೇಳಿಲ್ಲ. ಅವನ್ನೆಲ್ಲಾ ಅಮ್ಮ ಸುಮ್ಮನೆ ಸ್ವೀಕರಿಸಿ, ನಿನ್ನನ್ನೂ ಕ್ಷಮಿಸಿ, ನಿನಗೆ ಎಂದಿನಂತೆ ಪ್ರೇಮ ಕರುಣೆಗಳನ್ನೇ ನೀಡಿ, ನಿನ್ನನ್ನು ಪೋಷಿಸಿದರು.
“ನಿನ್ನ ವಿಷಪೂರಿತ ನುಡಿಗಳನ್ನು ಸತ್ಯವೆಂದು ಹೇಳುತ್ತಾ ಅದನ್ನು ಬಿಕರಿಮಾಡಿ, ನಿಷ್ಕಳಂಕ ಜನರನ್ನು ಅಂಧರಾಗಿಸಲು ನೀನು ಪ್ರಯತ್ನಿಸುತ್ತಿದ್ದರೂ, ಅಮ್ಮ ಹೇಳುತ್ತಾರೆ, ಅಮ್ಮನಿಗೆ ನಿನ್ನ ಮೇಲೆ ಪ್ರೇಮವಲ್ಲದೆ ಬೇರೆ ಯಾವ ಭಾವನೆಯೂ ಇಲ್ಲವೆಂದು. ಇದನ್ನು ಕೇಳಿ, ನನಗೆ ಅಮ್ಮನ ಸೀಮಾತೀತ ಕರುಣೆಗೂ ಮತ್ತು ಮಾತೃತ್ವಕ್ಕೂ ಶಿರಬಾಗುವಂತಾಗುತ್ತದೆ.”
ಇದೆಲ್ಲಾ ಹೀಗಿದ್ದೂ ಸಹ, ಅಮ್ಮ ನಮಗೆ ಹೇಳುವುದು, ಅವಳಿಗಾಗಿ ಪ್ರಾರ್ಥಿಸಿರಿ ಎಂದೇ. ಇಷ್ಟಾದರೂ, ಇಂದಿಗೂ ಸಹ, ಅನೇಕ ವೇಳೆ ಅಮ್ಮ ನನ್ನ ಹೆಸರು ಕರೆಯುವ ಮುನ್ನ ಅವರ ಬಾಯಲ್ಲಿ ಮೊದಲು ಬರುವುದು “ಗಾಯತ್ರಿ” ಎಂಬ ಪದವೇ! ನಿನ್ನ ವಿಷಪೂರಿತ ನುಡಿಗಳನ್ನು ಸತ್ಯವೆಂದು ಹೇಳುತ್ತಾ ಅದನ್ನು ಬಿಕರಿಮಾಡಿ, ನಿಷ್ಕಳಂಕ ಜನರನ್ನು ಅಂಧರಾಗಿಸಲು ನೀನು ಪ್ರಯತ್ನಿಸುತ್ತಿದ್ದರೂ, ಅಮ್ಮ ಹೇಳುತ್ತಾರೆ, ಅಮ್ಮನಿಗೆ ನಿನ್ನ ಮೇಲೆ ಪ್ರೇಮವಲ್ಲದೆ ಬೇರೆ ಯಾವ ಭಾವನೆಯೂ ಇಲ್ಲವೆಂದು. ಇದನ್ನು ಕೇಳಿ, ನನಗೆ ಅಮ್ಮನ ಸೀಮಾತೀತ ಕರುಣೆಗೂ ಮತ್ತು ಮಾತೃತ್ವಕ್ಕೂ ಶಿರಬಾಗುವಂತಾಗುತ್ತದೆ.
ಮತಿಗೆಟ್ಟ ಮನಸ್ಸಿನ ದೋಷಾರೋಪಣೆಗಳಿಗೆ ವಿವರಣೆ ನೀಡಬೇಕಾದ ಅಥವಾ ಅಮ್ಮನ ಪರವಾಗಿ ಪ್ರತಿಪಾದಿಸುವ ಯಾವುದೇ ಅವಶ್ಯಕತೆಗಳು ಅಮ್ಮನಿಗೆ ಇಲ್ಲ. ಆದರೆ ಧರ್ಮದ ನೆಲೆಯಿಂದ ನೋಡಿದಾಗ ಈ ವಿಷಯಗಳನ್ನು ಸಾರ್ವಜನಿಕರಿಗೆ ಬಯಲು ಮಾಡಬೇಕಾದ ಅಗತ್ಯವಿದೆ ಎನಿಸುತ್ತದೆ.
ಗೇಲ್, ನಿನ್ನ ಮೇಲೆ ನನಗೆ ನಿಜಕ್ಕು ಕನಿಕರವಿದೆ.
ಅಂಧಕಾರದಿಂದ ನೀನು ಹೊರಬರುವಂತಾಗಲಿ ಎಂದು ಪ್ರಾರ್ಥಿಸುತ್ತಾ,
– ಲಕ್ಷ್ಮಿ